ಶ್ರೀ ಶ್ರೀಮದ್‌ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು 1944 ರಲ್ಲಿ ʼಬ್ಯಾಕ್‌ ಟು ಗಾಡ್ ಹೆಡ್‌ ʼ ಪತ್ರಿಕೆಯನ್ನು ಪ್ರಾರಂಭಿಸಿದರು. ಜನರು ದೇವರನ್ನು ಮರೆತು ಈ ಭೌತಿಕ ಲೋಕದಲ್ಲಿ ಹೆಣಗುತ್ತಿರುವುದರಿಂದ ಅವರಿಗೆ ಕೃಷ್ಣ ಪ್ರಜ್ಞೆ ನೀಡಿ ಉದ್ಧರಿಸುವುದೇ ಪತ್ರಿಕೆಯ ಧ್ಯೇಯವಾಗಿತ್ತು. ಶ್ರೀಲ ಪ್ರಭುಪಾದರ ಹೆಜ್ಜೆ ಗುರುತುಗಳನ್ನೇ ಅನುಸರಿಸಿ, 2003 ರಲ್ಲಿ ನಾವು, ಇಸ್ಕಾನ್‌ ಬೆಂಗಳೂರಿನ ಭಕ್ತರು ʼಭಕ್ತಿವೇದಾಂತ ದರ್ಶನʼ ಕನ್ನಡ ಮಾಸ ಪತ್ರಿಕೆಯನ್ನು ಪ್ರಾರಂಭಿಸಿದೆವು. ಓದುಗರ ಮನದಲ್ಲಿ ಶ್ರೀ ಕೃಷ್ಣನು ಮನೆಮಾಡಿ, ಭಕ್ತಿ-ಸೇವೆಯನ್ನು ನೀಡಲಿ, ಇಡೀ ವಿಶ್ವಕ್ಕೆ ಸುಖ ಶಾಂತಿ ನೆಮ್ಮದಿಗಳನ್ನು ದಯಪಾಲಿಸಲಿ ಎಂಬುದೇ ನಮ್ಮ ಆಶಯ. ಹರೇ ಕೃಷ್ಣ.

ಸಲಹೆ ಮತ್ತು ಮಾರ್ಗದರ್ಶನ : ಪರಮಪೂಜ್ಯ ಸ್ತೋಕ ಕೃಷ್ಣ ಸ್ವಾಮಿ ; ಸಂಪಾದಕ : ಶ್ರೀ ಭರತರ್ಷಭ ದಾಸ ; ಸಹ ಸಂಪಾದಕ : ಪತಿತಪಾವನ ದಾಸ

  • ಧರ್ಮದ ನೆಲೆ

    ಗುರು-ಮುಖ-ಪದ್ಮ-ವಾಕ್ಯ

    ಧರ್ಮದ ನೆಲೆ

    ಗೌರವಾನ್ವಿತ ಮಹನೀಯರೆ, ಕೃಷ್ಣಪ್ರಜ್ಞಾ ಚಳವಳಿಯನ್ನು ಕುರಿತು ಮಾತನಾಡಲು ನನ್ನಲ್ಲಿ ದಯೆ ತೋರಿ ನೀವು ನೀಡಿರುವ ಈ ಅವಕಾಶಕ್ಕಾಗಿ ನಿಮ್ಮನ್ನು ವಂದಿಸುತ್ತೇನೆ. ವಿಶೇಷತಃ ಅಮೆರಿಕದ ಹಾಗೂ ಯೂರೋಪಿನ ನನ್ನ ಶಿಷ್ಯರು ನೀಡುತ್ತಿರುವ ನೆರವಿನಿಂದಾಗಿ ಪ್ರಸಕ್ತ ಕೃಷ್ಣಪ್ರಜ್ಞಾ ಆಂದೋಳನವು ಜಗತ್ತಿನಾದ್ಯಂತ ವ್ಯಾಪಕಾಗಿ ನಡೆದು ಬರುತ್ತಿದೆ. ಉತ್ತರ ಭಾರತದಲ್ಲಿನ ಲಕ್ನೋ ನಗರದ ಬಳಿ ಇರುವ ನೈಮಿಷಾರಣ್ಯ ಬಹು ಸುಂದರವಾದ ಸ್ಥಳ; ಅಷ್ಟೇ ಪವಿತ್ರವಾದದ್ದೂ ಹೌದು. ಶಾಂತಿಯನ್ನರಸಿ ತಪೋನಿರತರಾಗಲು ಜನ ಈಗಲೂ ನೈಮಿಷಾರಣ್ಯಕ್ಕೆ ಹೋಗುವುದುಂಟು. ಆಧ್ಯಾತ್ಮಿಕತೆಯ ಜಿಜ್ಞಾಸೆಗಳಿಗೆ ನೈಮಿಷಾರಣ್ಯವು ಸೂಕ್ತ ಸ್ಥಳವೆಂದು ಅನಾದಿಕಾಲದಿಂದಲೂ…


  • ಮೂರ್ಖ‌ ಸಂಸ್ಕೃತಿಯಲ್ಲಿ ಉನ್ನತ ಆನಂದ
    ಮೂರ್ಖ‌ ಸಂಸ್ಕೃತಿಯಲ್ಲಿ ಉನ್ನತ ಆನಂದ

    ಶ್ರೀ ಶ್ರೀಮದ್‌ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ ಮತ್ತು ಅವರ  ಕೆಲವು ಶಿಷ್ಯರ ನಡುವೆ  ದಕ್ಷಿಣ ಆಫ್ರಿಕಾದ ಜೊಹಾನಸ್‌ಬರ್ಗ್‌ ನಲ್ಲಿ, ಅಕ್ಟೋಬರ್‌ 18,  1975ರಲ್ಲಿ ನಡೆದ ಸಂವಾದ. ಶಿಷ್ಯ : ಶ್ರೀಲ ಪ್ರಭುಪಾದ, ಜನರು ಕೆಲವು ಬಾರಿ ಟೀಕಿಸುತ್ತಾ ಹೇಳುತ್ತಾರೆ, “ನಿಮ್ಮ ವೈದಿಕ ಸಂಸ್ಕೃತಿಯು ಭಾರತದಲ್ಲಿ ಅತ್ಯಂತ ದೃಢವಾಗಿ ಸ್ಥಾಪಿತವಾಗಿತ್ತು. ಆದರೆ ಭಾರತವನ್ನು ಈಗ ಬಡ ಮತ್ತು ದುರದೃಷ್ಟವೆಂದು ಪರಿಗಣಿಸುತ್ತಾರೆ. ಆದುದರಿಂದ ನಾವು ಏಕೆ ವೈದಿಕ ಸಂಸ್ಕೃತಿಯನ್ನು ಗೌರವಿಸಬೇಕು? “ ಶ್ರೀಲ ಪ್ರಭುಪಾದ : ವಿಷಯ ಏನೆಂದರೆ,…


ಸುದ್ದಿಮನೆ

  • ಸಾಷ್ಟಾಂಗ ಪ್ರಣಾಮ

    ಸಾಷ್ಟಾಂಗ ಪ್ರಣಾಮ

    ಪರಾತ್ಪರನ ಪ್ರೀತಿಯ ಅಪೇಕ್ಷೆಗೆ ನಾವೆಲ್ಲರೂ ಮಣಿಯುವ ಸರಳಿ ಆದರೆ ಭವ್ಯ ವಿಧಾನ. ಶರಣಾಗತಿ, ಅಧೀನವಾಗುವುದು, ಇಂತಹ ಪದಗಳು ಯುದ್ಧ ಮತ್ತು ಆಕ್ರಮಣದ ಚಿತ್ರಗಳ ಕಲ್ಪನೆಯನ್ನು ನೀಡಬಹುದು. ಅಲ್ಲಿ ದುರ್ಬಲರು ಬಹುಶಃ ಭವಿಷ್ಯದ ವಿಜಯ ಅಥವಾ ವಿದ್ವೇಷದ ಆಲೋಚನೆಗಳೊಂದಿಗೆ ಶಕ್ತಿವಂತರಿಗೆ ವಿಷಾದದಿಂದ ಮಣಿಯಬಹುದು. ಮನಸ್ಸಿನಲ್ಲಿ ಅಂತಹ ಚಿತ್ರಗಳನ್ನು ಕಲ್ಪಿಸಿಕೊಳ್ಳುತ್ತ ನಾವು ಕೃಷ್ಣನಿಗೆ ಶರಣಾಗಬೇಕೆಂದು ಭಗವದ್ಗೀತೆಯಲ್ಲಿ ಓದಿದಾಗ ನಮಗೆ ಅಸಹ್ಯ ಭಾವ ಮೂಡಬಹುದು. ನಮ್ರತೆಯಿಂದ ತಲೆಬಾಗಬಹುದು. ಭಕ್ತರು ಭಗವಂತನಿಗೆ ತಮ್ಮನ್ನು ಒಪ್ಪಿಸಿಕೊಳ್ಳಲು ಸಾಷ್ಟಾಂಗ ಮಾಡುತ್ತ ಶರಣಾಗುವುದನ್ನು ನೋಡಿದಾಗ ನಮಗೆ ಶರಣಾಗತಿ…


  • ಕಳ್ಳರಲ್ಲಿ ನೈತಿಕತೆ!
    ಕಳ್ಳರಲ್ಲಿ ನೈತಿಕತೆ!

    ಇಲ್ಲಿ ಕಳ್ಳರ ತಂಡದ ಕತೆ ಇದೆ. ಈ ಕಳ್ಳರು ಅನೇಕ ಮನೆಗಳಲ್ಲಿ ವಸ್ತುಗಳನ್ನು ಕಳವು ಮಾಡಿದರು. ಅದನ್ನು ಹಂಚಿಕೊಳ್ಳಲು ಊರಿನ ಆಚೆಗೆ ಹೋದರು. ಆಗ ಒಬ್ಬ ಕಳ್ಳ, “ಯಾರಿಗೂ ಮೋಸವಾಗದಂತೆ ನೈತಿಕವಾಗಿ ಇದನ್ನು ಹಂಚಬೇಕು” ಎಂದ. ಅದು ಕದ್ದ ಆಸ್ತಿ. ಇದರಲ್ಲಿ ನೈತಿಕತೆ ಎಲ್ಲಿ ಬಂತು? ಆದರೆ ಹಂಚಿಕೊಳ್ಳುವಾಗ ಮಾತ್ರ ಅವರು ನೈತಿಕತೆ ಕುರಿತು ಯೋಚಿಸುತ್ತಿದ್ದಾರೆ. ಮೂಲ ತತ್ತ್ವವೇ ಅನೈತಿಕತೆ. ನೈತಿಕತೆಯನ್ನು ಕಾಣುವುದೆಲ್ಲಿ? ಅದೇ ರೀತಿ, ವೈದಿಕ ಆದೇಶದ ಈಶಾವಾಸ್ಯಂ ಇದಂ ಸರ್ವಂ-ಎಲ್ಲವೂ ದೇವೋತ್ತಮ ಪರಮ ಪುರುಷನಿಗೆ…


  • ಪರೀಕ್ಷಿತನಿಗೆ ಕಲಿ ಶರಣು
    ಪರೀಕ್ಷಿತನಿಗೆ ಕಲಿ ಶರಣು

    -ಶ್ರೀ ಚಂಚಲಾಪತಿ ದಾಸ “ಮರೆಹೊಕ್ಕವರಿಗೆ ಆಸರೆಕೊಡುವ ಸ್ವಭಾವದ ಮತ್ತು ಚರಿತ್ರೆಯಲ್ಲಿ ಶ್ಲಾಘನೆಗೆ ಪಾತ್ರನಾದ ಪರೀಕ್ಷಿತ ಮಹಾರಾಜನು ಶರಣಾಗತನಾದ ಮತ್ತು ಕಾಲಿಗೆ ಬಿದ್ದ ಬಡ ಕಲಿಯನ್ನು ಕೊಲ್ಲಲಿಲ್ಲ. ಆದರೆ, ಸಹಾನುಭೂತಿಯಿಂದ ನಸುನಕ್ಕನು. ಏಕೆಂದರೆ, ಅವನು ಬಡವರಲ್ಲಿ ಕರುಣೆ ಉಳ್ಳವನಾಗಿದ್ದನು.” (ಭಾಗವತ, 1.17.30) ಸಾಮಾನ್ಯ ಕ್ಷತ್ರಿಯನೂ ಕೂಡ ಶರಣಾಗತನನ್ನು ಕೊಲ್ಲುವುದಿಲ್ಲ. ಹೀಗಿರುವಾಗ ಸ್ವಾಭಾವಿಕವಾಗಿ ದೀನರಲ್ಲಿ ದಯೆ ಮತ್ತು ಸಹಾನುಭೂತಿ ಉಳ್ಳ ಮಹಾರಾಜ ಪರೀಕ್ಷಿತನ ಬಗ್ಗೆ ಹೇಳುವುದೇನು! ಅವನು ನಗುತ್ತಿದ್ದುದು ಏಕೆಂದರೆ ಕೃತಕ ವೇಷಧಾರಿಯಾದ ಕಲಿಯು ತಾನು ತಳ ವರ್ಗದವ ಎಂದು…


  • ಎಲ್ಲ ಸಂಕಷ್ಟಕ್ಕೆ ಪರಿಹಾರ
    ಎಲ್ಲ ಸಂಕಷ್ಟಕ್ಕೆ ಪರಿಹಾರ

    -ಶ್ರೀ ಚಂಚಲಾಪತಿ ದಾಸ ಮುಖವು ಮನಸ್ಸಿನ ಕನ್ನಡಿ ಎಂದು ಶ್ರೀಲ ಪ್ರಭುಪಾದರು ಹೇಳುತ್ತಿದ್ದರು. ಕಲಿಯುಗದಲ್ಲಿ ಜನರು ಅನೇಕ ರೀತಿಯ ಸಂಕಷ್ಟದಲ್ಲಿ ಇರುವುದನ್ನು ನಾವು ನೋಡುತ್ತಿದ್ದೇವೆ. ಜನರನ್ನು ಸಂತೋಷಪಡಿಸಲು ಜಗತ್ತಿನಲ್ಲಿ ಈಗ ನಡೆಯುತ್ತಿರುವ ಪ್ರಯತ್ನಗಳು ಚರಿತ್ರೆಯಲ್ಲಿ ಹಿಂದೆಂದೂ ಕಾಣದಂತಹುದು. ಆದರೂ ಜನರು ಸಂತೋಷದಿಂದ ಇಲ್ಲದಿರುವುದನ್ನು ನಾವು ಕಾಣುತ್ತಿದ್ದೇವೆ. ಅದೇ ಅನೇಕ ರೀತಿಯ ಕಷ್ಟ ಕಾರ್ಪಣ್ಯಗಳು. ಈ ವಿಶ್ವದ ಎಲ್ಲ ಸಂಕಷ್ಟಗಳಿಗೆ ಮೂಲ ಕಾರಣ ಕೃಷ್ಣನನ್ನು ಮರೆತಿರುವುದೇ ಆಗಿದೆ. ಇದು ಭಾಗವತ ಮತ್ತು ಆಚಾರ್ಯರ ವಿಶ್ಲೇಷಣೆ. ನಾವು ಕೃಷ್ಣನೊಂದಿಗಿನ ನಮ್ಮ…


  • ಮಹಾಪುರುಷ ಅಂಬರೀಷ! – ಭಾಗ 2
    ಮಹಾಪುರುಷ ಅಂಬರೀಷ! – ಭಾಗ 2

    ವೇದವ್ಯಾಸ ವಿರಚಿತ ಭಾಗವತವು 12 ಸ್ಕಂಧಗಳ, 18,000 ಶ್ಲೋಕಗಳಿಂದ ಕೂಡಿದ್ದು – ನಿಗಮ ಕಲ್ಪತರೋ‌ರ್‌ ಗಲಿತಂ ಫಲಂ – ವೇದವೆಂಬ ಕಲ್ಪವೃಕ್ಷದಿಂದ ಹುಟ್ಟಿದ ಮಾಗಿದ ಫಲ ಎಂದೇ ಬಣ್ಣಿಸಲಾಗಿದೆ. ಈ ಲೇಖನ ಮಾಲಿಕೆಯಲ್ಲಿ ಶುಕ ಮುಖದಿಂದ ಹರಿದ ಭಾಗವತವನ್ನು ಆಧರಿಸಿದ ಕಥೆಗಳನ್ನು ಓದುತ್ತೀರಿ. ಪ್ರಸ್ತುತ ಕಥೆಯನ್ನು ಭಾಗವತದ ಒಂಭತ್ತನೇ ಸ್ಕಂಧದ 2 ರಿಂದ 4ನೇ ಅಧ್ಯಾಯವನ್ನು ಆಧರಿಸಿ ಖ್ಯಾತ ಸಾಹಿತಿ ‘ಚಿರಂಜೀವಿ’ ಅವರು ಭಕ್ತಿವೇದಾಂತ ದರ್ಶನದ ಓದುಗರಿಗೆ ಬರೆದುಕೊಟ್ಟಿದ್ದಾರೆ. ಹಿಂದಿನ ಸಂಚಿಕೆಯಲ್ಲಿ ಅಂಬರೀಷ ಮಹಾರಾಜನ ರಾಜ್ಯಭಾರದ ವರ್ಣನೆ…


ಮಕ್ಕಳ ಕಥೆ

  • ಮಾಂತ್ರಿಕ ಸ್ಪರ್ಶಮಣಿ
    ಮಾಂತ್ರಿಕ ಸ್ಪರ್ಶಮಣಿ

    ಒಂದಾನೊಂದು ಕಾಲದಲ್ಲಿ ಗೋಪಿ ಎಂಬ ಭಕ್ತ ಹಳ್ಳಿಯಲ್ಲಿ ವಾಸಿಸುತ್ತಿದ್ದ. ಅವನು ಯಾವುದೇ ಕೆಲಸ ಮಾಡುತ್ತಿರಲಿಲ್ಲ. ಆದುದರಿಂದ ಅವರ ಮನೆಯಲ್ಲಿ ಉಣ್ಣಲು ಸಾಕಷ್ಟು ತಿನಿಸು ಇರುತ್ತಿರಲಿಲ್ಲ. ಇದರಿಂದ ಅವನ ಹೆಂಡತಿಗೆ ಕೋಪ ಬರುತ್ತಿತ್ತು. ಅದು ಸಹಜವಲ್ಲವೇ? ಅವಳ ಅಕ್ಕಪಕ್ಕದ ಮನೆಯವರು ಚೆನ್ನಾಗಿ ತಿಂದುಂಡು ಖುಷಿಯಾಗಿರುತ್ತಿದ್ದರು. ಆದುದರಿಂದ ಅವಳಿಗೆ ಗೋಪಿಯ ಮೇಲೆ ಸಿಟ್ಟಾಗುತ್ತಿತ್ತು. ಒಂದು ದಿನ ಅವಳ ಸಿಟ್ಟು ನತ್ತಿಗೆ ಏರಿತ್ತು. ಅವಳು ತನ್ನ ಗಂಡನಿಗೆ ಮನೆ ಬಿಟ್ಟು ಹೋಗಲು ತಿಳಿಸಿದಳು. ಹಣ ಸಿಕ್ಕರೆ ಮಾತ್ರ ಮನಗೆ ಬಾ ಎಂದು…


  • ನಳಕೂವರ ಮತ್ತು ಮಣಿಗ್ರೀವರ ಶಾಪ ವಿಮೋಚನೆ
    ನಳಕೂವರ ಮತ್ತು ಮಣಿಗ್ರೀವರ ಶಾಪ ವಿಮೋಚನೆ

    ಶ್ರೀ ಕೃಷ್ಣನನ್ನು, ಅವನಮ್ಮ ಯಶೋದಾ, ತುಂಬಾ ತುಂಟತನ ಮಾಡುತ್ತಾನೆಂದು ಮರದ ಒರಳಿಗೆ ಕಟ್ಟಿಹಾಕಿದ್ದಳು. ಆ ಸಮಯದಲ್ಲಿ ಅವನಿಗೆ, ಅರ್ಜುನ ಎಂದು ಕರೆಸಿಕೊಳ್ಳುವ ಎರಡು ದೊಡ್ಡ ಮರಗಳು ಎದುರಿನಲ್ಲಿ ಕಾಣಿಸಿದವು. ತಮ್ಮ ಹಿಂದಿನ ಜನ್ಮದಲ್ಲಿ ಈ ಎರಡು ಮರಗಳೂ ಮನುಷ್ಯರಾಗಿ, ಕುಬೇರನ ಮಕ್ಕಳಾಗಿ ಹುಟ್ಟಿದ್ದವು. ಅವುಗಳಿಗೆ ನಳಕೂವರ ಮತ್ತು ಮಣಿಗ್ರೀವ ಎಂದು ಹೆಸರಿತ್ತು. ಮುಂದೆ ಶ್ರೀಕೃಷ್ಣನ ದರ್ಶನಭಾಗ್ಯ ಪಡೆಯುವಂತಹ ಅತಿದೊಡ್ಡ ಅನುಗ್ರಹವನ್ನು ಪಡೆಯುವುದಕ್ಕಾಗಿ, ಆ ಜನ್ಮದಲ್ಲಿ ಇವರಿಬ್ಬರಿಗೆ ನಾರದ ಮುನಿ ಒಂದು ಶಾಪವನ್ನು ಕೊಟ್ಟಿದ್ದರು. ಇವರಿಬ್ಬರೂ ತಮ್ಮ ತಂದೆ…


  • ಅಜಾಮಿಳನ ಜೀವನ ವೃತ್ತಾಂತ
    ಅಜಾಮಿಳನ ಜೀವನ ವೃತ್ತಾಂತ

    ಕಾನ್ಯಕುಬ್ಜ ಎನ್ನುವ ಹೆಸರಿನ ನಗರದಲ್ಲಿ ಅಜಾಮಿಳ ಎಂಬೊಬ್ಬ ಬ್ರಾಹ್ಮಣನಿದ್ದನು. ಒಂದು ಸಲ ಈ ಬ್ರಾಹ್ಮಣ ಅಜಾಮಿಳನು ಹೂವು ಹಣ್ಣುಗಳನ್ನು ಕುಯ್ದು ತರಲು ಅರಣ್ಯಕ್ಕೆ ಹೋದನು. ಅವನು ಮನೆಗೆ ಹಿಂತಿರುಗುತ್ತಿದ್ದಾಗಿನ ಹಾದಿಯಲ್ಲಿ ಒಂದೆಡೆ ಒಬ್ಬ ನಾಚಿಕೆಗೆಟ್ಟ ಕಾಮುಕನು ವೇಶ್ಯೆಯೊಬ್ಬಳನ್ನು ಬಲವಾಗಿ ಆಲಂಗಿಸಿಕೊಂಡು ಚುಂಬಿಸುತ್ತಿದ್ದುದನ್ನು ಕಂಡನು. ಅ ವೇಶ್ಯೆಯು ಪಾನಮತ್ತಳಾಗಿದ್ದಳು. ಹಾಗಾಗಿ ಕಣ್ಣುಗಳು ತಿರುಗುತ್ತಿದ್ದವು. ಆಕೆಯ ವಸ್ತ್ರಗಳು ಸರಿದಿದ್ದವು. ಅಜಾಮಿಳನು ಅವಳನ್ನು ನೋಡಿದಾಗ, ಅವನ ಎದೆಯಾಳದಲ್ಲಿ ಸುಪ್ತವಾಗಿದ್ದ ಲೈಂಗಿಕ ಬಯಕೆಗಳು ಎಚ್ಚೆತ್ತವು. ಒಬ್ಬ ಸ್ತ್ರೀಯನ್ನು ಕಣ್ಣೆತ್ತಿ ಕೂಡ ನೋಡಬಾರದೆಂಬ ಶಾಸ್ತ್ರವಚನಗಳೇನೋ…


  • ಆಂತರಿಕ ಬೆಳವಣಿಗೆ ಅಗತ್ಯ
    ಆಂತರಿಕ ಬೆಳವಣಿಗೆ ಅಗತ್ಯ

    ಸಂಸ್ಕೃತ ಮೂಲ – ಕಥಾಶತವಲ್ಲರೀ ಭಾಷಾನುವಾದ – ಪತಿತಪಾವನ ದಾಸ ಒಬ್ಬ ರಾಜನಿದ್ದ. ಅವನು ತನ್ನ ದೇಶವನ್ನು ಸುಖ ಸಮೃದ್ಧವನ್ನಾಗಿಸಲು ಬಯಸಿದ. ಅದಕ್ಕಾಗಿ ಅಹೋರಾತ್ರಿ ಶ್ರಮಿಸಿದ. ಪ್ರಜೆಗಳ ಸುಖ ಶಾಂತಿಗಾಗಿ ಅನೇಕ ವಿಧದ ವ್ಯವಸ್ಥೆಗಳನ್ನು ಅವನು ಮಾಡಿದನು. ಆದರೂ ಕೂಡ ಆ ದೇಶದಲ್ಲಿ ಅಪೇಕ್ಷಿತ ಪ್ರಮಾಣದಲ್ಲಿ ಸುಖ ಶಾಂತಿಗಳು ಕಾಣಿಸಲಿಲ್ಲ. ಆದ್ದರಿಂದ ರಾಜನು ತನ್ನ ಗುರುಗಳಾದ ಸನ್ಯಾಸಿಯೊಬ್ಬರ ಬಳಿ ಹೋದನು. “ಗುರುಗಳೇ, ಜನಗಳ ಸುಖಕ್ಕಾಗಿ ನಾನು ಅನೇಕ ವಿಧದ ವ್ಯವಸ್ಥೆ ಮಾಡಿದೆ. ಅನೇಕ ವಿಧದ ಅನುಕೂಲಗಳನ್ನು ಕಲ್ಪಿಸಿದೆ.…


  • ಪುಟಾಣಿಗಳಿಗೆ ಪ್ರಿಯವಾದ ಕಟ್ಲೆಟ್‌ ಮಕ್ಕಳಿಗೆ ತಿಂಡಿಯೆಂದರೆ ಅಚ್ಚುಮೆಚ್ಚು. ಅದರಲ್ಲೂ ಕುರುಕಲು ತಿಂಡಿಯೆಂದರೆ ಇನ್ನೂ ಹೆಚ್ಚು ಖುಷಿ. ರುಚಿಯಾಗಿ  ಮತ್ತು ಬಿಸಿಯಾಗಿ ಏನಾದರು ಮಾಡಿಕೊಟ್ಟರೆ ಇಷ್ಟಪಟ್ಟು ತಿನ್ನುತ್ತಾರೆ. ಹಾಗೆ ಮಾಡಬೇಕೆನಿಸಿದರೆ ಬ್ರೆಡ್‌ ಕಟ್ಲೆಟ್‌, ಆಲೂ-ಪಾಲಕ್‌ ಕಟ್ಲೆಟ್‌, ಅವಲಕ್ಕಿ ಕಟ್ಲೆಟ್‌  ಹೀಗೆ ವಿವಿಧ ಬಗೆ ಬಗೆಯ ಕಟ್ಲೆಟ್‌ ಮಾಡಬಹುದು. ಭಕ್ತಿವೇದಾಂತ ದರ್ಶನದ ಓದುಗರಿಗೆ ಕಟ್ಲೆಟ್‌ ಮಾಡುವ ವಿಧಾನವನ್ನು ತಿಳಿಸಿದ್ದೇವೆ. ಈ ಎಲ್ಲವನ್ನೂ ತಯಾರಿಸಿ ಮನೆಯವರೊಂದಿಗೆ ಸೇವಿಸಿ. ಆಲೂ ಪಾಲಕ್‌ ಕಟ್ಲೆಟ್‌ ಬೇಕಾಗುವ ಸಾಮಗ್ರಿಗಳು: ಬೇಯಿಸಿದ ಆಲೂಗಡ್ಡೆ – 3 ಪಾಲಕ್‌…


  • ಕೋಸು ವಿಶೇಷ ವರ್ಷವಿಡೀ ಬೆಳೆಯುವ ಕೋಸು ಪೌಷ್ಟಿಕಾಂಶಗಳಿಂದ ತುಂಬಿದ್ದು ಆರೋಗ್ಯಕ್ಕೆ ಅಷ್ಟೇ ಅಲ್ಲ, ಸೌಂದರ್ಯವರ್ಧನೆಗೂ ಸಾಧಕ. ಕೋಸಿನಲ್ಲಿ ಅತಿ ಕಡಿಮೆ ಕ್ಯಾಲೊರಿ ಇದೆ. ಕೊಬ್ಬಿನಾಂಶವಂತೂ ಇಲ್ಲ. ಹೀಗಾಗಿ ತೂಕ ನಿರ್ವಹಣೆಗೆ ಇನ್ನೇನು ಬೇಕು? ಅಲ್ಲದೆ ಇದರಲ್ಲಿ ಆಂಟಿ ಆಕ್ಸಿಡೆಂಟ್ಸ್‌ ಮತ್ತು ವಿಟಮಿನ್‌ “ಸಿ” ಸಮೃದ್ಧವಾಗಿದೆ. ಇದು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸಲು ಮತ್ತು ರೋಗಗಳ ವಿರುದ್ಧ ಹೋರಾಡಲು ಅಗತ್ಯವಾಗಿದೆ. ಕೋಸಿನ ಜ್ಯೂಸ್‌ ಚರ್ಮಕ್ಕೆ ಅಧಿಕ ಲಾಭದಾಯಕ. ಇದರಲ್ಲಿ ಮುಪ್ಪನ್ನು ದೂರವಾಗಿಸುವ ಗುಣಗಳು ಹೇರಳವಾಗಿದೆ. ಕೋಸಿನ ಜ್ಯೂಸ್‌ ಕುಡಿಯುವುದರಿಂದ…


ಪುಣ್ಯ ಕ್ಷೇತ್ರ

  • ಕೈಬೀಸಿ ಕರೆವ ಕಾಕೋಳು ಕೃಷ್ಣಾಲಯ

    ಕೈಬೀಸಿ ಕರೆವ ಕಾಕೋಳು ಕೃಷ್ಣಾಲಯ

    -ಕೆ.ವಿ.ಪದ್ಮಾವತಿ ಪರತತ್ತ್ವದಲ್ಲಿ ನಂಬಿಕೆ, ಸಚ್ಛಾಸ್ತ್ರದಲ್ಲಿ ಅರಿವು, ಸಾಧನೆಯಲ್ಲಿ ಪ್ರಗತಿ, ಮನದಲ್ಲಿ ನೆಮ್ಮದಿ, ಮಾತಿನಲ್ಲಿ ಸಿದ್ಧಿ, ಮನೆಯಲ್ಲಿ ಸಮೃದ್ಧಿ ಬೇಕೆ? ಪಾಪ-ತಾಪಗಳನ್ನು ಎಳೆದು ಹಾಕುವ ಭಕ್ತರ ತನುಮನವನ್ನು ತನ್ನೆಡೆಗೆ ಸೆಳೆದುಕೊಳ್ಳುವ ಸಂತಸದ ನೆಲೆಯಾದ ಕಾಕೋಳು ಕೃಷ್ಣನ ಸಾನ್ನಿಧ್ಯಕ್ಕೆ ಬನ್ನಿ… ಮಂಗಳಮೂರ್ತಿಯ ದರುಶನ, ನಮಿಸಿದ ಶಿರಕರಗಳು ಪರಮ ಪಾವನ, ಇದುವೇ ಜೀವನದ ಧನ್ಯತೆಗೊಂದು ಅಪೂರ್ವ ಆಹ್ವಾನ, ಬೇಡವೇ ನಿಮಗೆ ಈ ರಸದೌತಣ, ಇನ್ನೇಕೆ ಆಗಮನಕ್ಕೆ ನಿಧಾನ? ಇಲ್ಲಿ ಆದರವಿದೆ, ಸಂತಸವಿದೆ, ಭಕ್ತಿಯಹೊನಲಿದೆ, ನಿತ್ಯನೋಟದ ಶಾಂತಿ ಇದೆ. ನಾದಲೋಲ ವೇಣುಗೋಪಾಲನ ಸನ್ನಿಧಾನದಲ್ಲಿ…


  • ಗದುಗಿನ ವೀರನಾರಾಯಣ

    ಗದುಗಿನ ವೀರನಾರಾಯಣ

    -ಪತಿತಪಾವನ ದಾಸ ಪ್ರಸಿದ್ಧ ಪುಣ್ಯ ಕ್ಷೇತ್ರವಾದ ಗದಗವು ಕರ್ನಾಟಕದ ಮುಖ್ಯ ಪ್ರವಾಸಿ ತಾಣವೂ ಹೌದು. ಇಲ್ಲಿನ ಪ್ರಮುಖ ದೇವಸ್ಥಾನವನ್ನು ಶ್ರೀ ವಿಷ್ಣುವಿಗೆ ಅರ್ಪಿಸಲಾಗಿದ್ದು, ಭಗವಂತನು ವೀರ ನಾರಾಯಣನ ರೂಪದಲ್ಲಿ ಕಾಣಿಸಿಕೊಂಡಿದ್ದಾನೆ. ಸ್ಥಳ ಪುರಾಣದ ಪ್ರಕಾರ, ಬ್ರಹ್ಮನ ಮಾನಸ ಪುತ್ರರಾದ ಕೃತಮುನಿಗಳು ಇಲ್ಲಿ ಧ್ಯಾನ, ಯಜ್ಞ ಮಾಡಿಕೊಂಡಿದ್ದರು. ಆದರೆ ದುಷ್ಟರು ಅದಕ್ಕೆ ಅಡ್ಡಿ ಉಂಟುಮಾಡುತ್ತಿದ್ದರು. ಇದನ್ನು ತಾಳಲಾರದೆ ಮುನಿಗಳು ಹಿಮಾಲಯ ಪರ್ವತಕ್ಕೆ ಹೋಗಿ ಉಗ್ರ ತಪಸ್ಸು ಕೈಗೊಂಡರು. ಗದುಗಿನ ನಾರಾಯಣನನ್ನು ಧ್ಯಾನಿಸಿದರು. ಆಗ ಗದುಗಿನ ನಾರಾಯಣ ಪ್ರತ್ಯಕ್ಷನಾಗಿ “ನಿನಗೇನು…


ಪುರಾಣ ಕಥೆ

ಸಂಪಾದಕೀಯ

ಮುಂಬರುವ ಕಾರ್ಯಕ್ರಮಗಳು

ವಿಡಿಯೋ





ನಮ್ಮನ್ನು ಬೆಂಬಲಿಸಿ

ज्ञातिभिर्वण्टयते नैव चोरेणापि नीयते

दाने नैव क्षयं याति विद्यारत्नं महाधनम्

ವಿದ್ಯೆ ಎಂಬುದು ಮಹಾ ಧನ. ಅದನ್ನು ಸಂಬಂಧಿಗಳು ದೋಚಲಾರರು, ಕಳ್ಳರು ಕದಿಯಲಾರರು.

ದಾನ ಮಾಡಿದರೆ ಕ್ಷೀಣಿಸದೆ, ಅದರ ವೃದ್ಧಿಯೇ ಆಗುತ್ತದೆ.

ಈ ಆನ್ಲೈನ್ ಪತ್ರಿಕೆ ನಿಮಗೆ ಇಷ್ಟವಾಗಿದ್ದರೆ, ನಿಮಗಾಗಿ ಇದನ್ನು ಇನ್ನೂ ಹೆಚ್ಚು ಉಪಯುಕ್ತ ಮತ್ತು ಆಕರ್ಷಕವಾಗಿಸಲು ಸಹಾಯ ಮಾಡಿ. ವಿದ್ಯೆಯ ದಾನಕ್ಕಾಗಿ ದೇಣಿಗೆ ನೀಡಿ.