
ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು 1944 ರಲ್ಲಿ ʼಬ್ಯಾಕ್ ಟು ಗಾಡ್ ಹೆಡ್ ʼ ಪತ್ರಿಕೆಯನ್ನು ಪ್ರಾರಂಭಿಸಿದರು. ಜನರು ದೇವರನ್ನು ಮರೆತು ಈ ಭೌತಿಕ ಲೋಕದಲ್ಲಿ ಹೆಣಗುತ್ತಿರುವುದರಿಂದ ಅವರಿಗೆ ಕೃಷ್ಣ ಪ್ರಜ್ಞೆ ನೀಡಿ ಉದ್ಧರಿಸುವುದೇ ಪತ್ರಿಕೆಯ ಧ್ಯೇಯವಾಗಿತ್ತು. ಶ್ರೀಲ ಪ್ರಭುಪಾದರ ಹೆಜ್ಜೆ ಗುರುತುಗಳನ್ನೇ ಅನುಸರಿಸಿ, 2003 ರಲ್ಲಿ ನಾವು, ಇಸ್ಕಾನ್ ಬೆಂಗಳೂರಿನ ಭಕ್ತರು ʼಭಕ್ತಿವೇದಾಂತ ದರ್ಶನʼ ಕನ್ನಡ ಮಾಸ ಪತ್ರಿಕೆಯನ್ನು ಪ್ರಾರಂಭಿಸಿದೆವು. ಓದುಗರ ಮನದಲ್ಲಿ ಶ್ರೀ ಕೃಷ್ಣನು ಮನೆಮಾಡಿ, ಭಕ್ತಿ-ಸೇವೆಯನ್ನು ನೀಡಲಿ, ಇಡೀ ವಿಶ್ವಕ್ಕೆ ಸುಖ ಶಾಂತಿ ನೆಮ್ಮದಿಗಳನ್ನು ದಯಪಾಲಿಸಲಿ ಎಂಬುದೇ ನಮ್ಮ ಆಶಯ. ಹರೇ ಕೃಷ್ಣ.
ಸಲಹೆ ಮತ್ತು ಮಾರ್ಗದರ್ಶನ : ಪರಮಪೂಜ್ಯ ಸ್ತೋಕ ಕೃಷ್ಣ ಸ್ವಾಮಿ ; ಸಂಪಾದಕ : ಶ್ರೀ ಭರತರ್ಷಭ ದಾಸ ; ಸಹ ಸಂಪಾದಕ : ಪತಿತಪಾವನ ದಾಸ

ಗುರು-ಮುಖ-ಪದ್ಮ-ವಾಕ್ಯ
“ ದೇವೋತ್ತಮ ಪರಮ ಪುರುಷನು ಹೀಗೆ ಹೇಳಿದನು – ಪಾರ್ಥ, ನನ್ನಲ್ಲಿ ಆಸಕ್ತವಾದ ಮನಸ್ಸಿನಿಂದ ನನ್ನನ್ನೊಳಗೊಂಡ ಸಂಪೂರ್ಣ ಪ್ರಜ್ಞೆಯಲ್ಲಿ ಯೋಗಾಭ್ಯಾಸವನ್ನು ಮಾಡುವುದರಿಂದ, ನೀನು ನನ್ನನ್ನು ಸಂಪೂರ್ಣವಾಗಿಯೂ, ಸಂಶಯವಿಲ್ಲದಂತೆಯೂ ತಿಳಿದುಕೊಳ್ಳಬಹುದು. ಅದು ಹೇಗೆ ಎನ್ನುವುದನ್ನು ಕೇಳು.” (ಭಗವದ್ಗೀತಾ – 7.1) ಈ ಶ್ಲೋಕವು ನಾವು ಪ್ರಕಟಿಸಿದ ಭಗವದ್ಗೀತಾ ಯಥಾರೂಪದ 7ನೇ ಅಧ್ಯಾಯದ್ದು. ಲೇಖಕರ ಸ್ವಂತ ತಾತ್ವಿಕ ವಿಚಾರಗಳನ್ನು ಒಳಗೊಂಡ ಭಗವದ್ಗೀತೆಯ ಅನೇಕ ಮುದ್ರಣಗಳಿವೆ. ಆದರೆ ನಾವು ಅಂತಹ ಭಗವದ್ಗೀತೆಯನ್ನು ಒಪ್ಪಿಕೊಳ್ಳುವುದಿಲ್ಲ…
ಸುದ್ದಿಮನೆ
ಲೇಖನಗಳು
ಮಕ್ಕಳ ಕಥೆ

ಕೃಷ್ಣ ಇದ್ದ ಕಾಲದಲ್ಲೇ ನರಕಾಸುರ ಅನ್ನೋ ರಾಕ್ಷಸ ಒಬ್ಬ ಇದ್ದ. ಅವನ ಉಪಟಳ ಮಿತಿ ಮೀರಿತ್ತು. ಅವನು ಒಂದು ಸಾರ್ತಿ ಇಂದ್ರ ಲೋಕಕ್ಕೆ ಹೋಗಿ ಅವನ ಛತ್ರಿ ಅಪಹರಿಸಿ…

ಬಂಗಾರದ ಹಾಗೆ ಕಾಂತಿ ಬೀರುವ ಬಣ್ಣ ಮುದ್ದು ಮುಖದ ಮಗು ಒಂದೇ ಸಮನೆ ಆಳುತ್ತಿತ್ತು. ಅಮ್ಮ ಶಚೀದೇವಿ ಮನೆಯಲ್ಲಿದ್ದ ಆಟಿಕೆಗಳನ್ನೆಲ್ಲ ತಂದು ಎದುರಲ್ಲಿ ಹಾಕಿದಳು…

ಒಮ್ಮೆ ಹೀಗಾಯ್ತು. ಬಲಿಯೆನ್ನುವ ದೈತ್ಯರಾಜ ಸ್ವರ್ಗಲೋಕವನ್ನು ವಶಪಡಿಸ್ಕೊಂಡು ಬಿಟ್ಟ. ಈ ಬಲಿರಾಜ, ಮಹಾಭಕ್ತ ಪ್ರಹ್ಲಾದ ಮಹಾರಾಜನ ಮೊಮ್ಮಗ…

“ನಾರಾಯಣ… ನಾರಾಯಣ!!” ಎಂದ ಕೂಡಲೆ ಯಾರ ನೆನಪಾಗುತ್ತದೆ ಹೇಳಿ? ನಾರದ ಮುನಿಗಳು ತಾನೆ? ಹೌದು, ಸದಾ ತಂಬೂರಿ ಮೀಟುತ್ತ ನಾರಾಯಣ ಸ್ಮರಣೆ ಮಾಡುತ್ತ…
ಪಾಕಶಾಲೆ
ಪೌಷ್ಟಿಕಾಂಶದ ದಾಲ್ಗಳು…
ಬಗೆ ಬಗೆ ಚಿತ್ರಾನ್ನ…
ಪುಣ್ಯ ಕ್ಷೇತ್ರ

ಪಾಜಕ, ಶ್ರೀ ಮಧ್ವಾಚಾರ್ಯರ ಜನ್ಮಸ್ಥಳ. ಇದು ಉಡುಪಿಯಿಂದ ಏಳು ಮೈಲು ದೂರದಲ್ಲಿ, ದಕ್ಷಿಣ ದಿಕ್ಕಿನಲ್ಲಿದೆ…

ಶ್ರೀ ರಂಗಪಟ್ಟಣ, ಮಂಡ್ಯ ಜಿಲ್ಲೆಗೆ ಸೇರಿದ ತಾಲೂಕು ಕೇಂದ್ರ. ಮೈಸೂರಿನಿಂದ ಕೇವಲ 14 ಕಿ.ಮೀ. ಅಂತರದಲ್ಲಿ…
ಪುರಾಣ ಕಥೆ
ಸಂಪಾದಕೀಯ

ಶ್ರೀಲ ಪ್ರಭುಪಾದರು ತಮ್ಮ ಕಾಲೇಜಿನ ಸಮಯದ ಒಂದು ಸ್ವಾರಸ್ಯಕರ ಘಟನೆ ನೆನಪಿಸಿಕೊಳ್ಳುತ್ತಾರೆ. ಅವರ ಮಿತ್ರರೊಬ್ಬರು ಅವರಿಗೆ ಹೇಳಿದ ವೃತ್ತಾಂತ ಇದು. ಆ ಮಿತ್ರರು ವೈದ್ಯಕೀಯ ವಿದ್ಯಾರ್ಥಿಗಳಾಗಿದ್ದಾಗ ಒಂದು…

ಆಸ್ಟ್ರೇಲಿಯಾ ದೇಶದಲ್ಲಿ 16 ವರ್ಷಕ್ಕಿಂತ ಕಡಮೆ ವಯಸ್ಸಿನ ಮಕ್ಕಳಿಗೆ ಈಗ ಸೋಷಿಯಲ್ ಮೀಡಿಯಾ ಬ್ಯಾನ್ ಮಾಡಲಾಗಿದೆ. ಕೆಲ ಸಮಯದಿಂದ ಇದನ್ನು ವ್ಯಾಪಕವಾಗಿ ಚರ್ಚಿಸಿ, ನಿನ್ನೆ ಆದೇಶ ಹೊರಡಿಸಲಾಗಿದೆ….

ಆದಿಯಲ್ಲಿ ಗರ್ಭೋದಕ ವಿಷ್ಣುವಿನ ನಾಭಿಯಿಂದ ಕಮಲಪುಷ್ಪ ಒಂದು ಹುಟ್ಟುತ್ತದೆ. ಆ ಕಮಲದ ಮೇಲೆ ಬ್ರಹ್ಮದೇವರ ಜನನ ಆಗುತ್ತದೆ. ಆಗ “ನಾನು ಎಲ್ಲಿಂದ ಬಂದೆ?” ಎಂದು ತಿಳಿಯಲು ಬ್ರಹ್ಮ ಪ್ರಯತ್ನ…

ಕೃಷ್ಣಪ್ರಜ್ಞೆಯ ಪ್ರಚಾರದ ಕೆಲಸ ಕಷ್ಟವೆನಿಸಿದರೂ, ಅಪಾಯ ಎದುರಾದರೂ, ಕೃಷ್ಣ ಕೈಂಕರ್ಯ ಮಾತ್ರ ನಿಲ್ಲಿಸಲಾಗದು. ʼಥ್ಯಾಂಕ್ ಲೆಸ್ ಜಾಬ್ʼ ಮಾಡುವ ನಮಗೆ ಯಾರು ಧನ್ಯವಾದ ಹೇಳಲಿ ಬಿಡಲಿ….
ಮುಂಬರುವ ಕಾರ್ಯಕ್ರಮಗಳು
ವಿಡಿಯೋ
ನಮ್ಮನ್ನು ಬೆಂಬಲಿಸಿ

ज्ञातिभिर्वण्टयते नैव चोरेणापि न नीयते ।
दाने नैव क्षयं याति विद्यारत्नं महाधनम् ॥
ವಿದ್ಯೆ ಎಂಬುದು ಮಹಾ ಧನ. ಅದನ್ನು ಸಂಬಂಧಿಗಳು ದೋಚಲಾರರು, ಕಳ್ಳರು ಕದಿಯಲಾರರು.
ದಾನ ಮಾಡಿದರೆ ಕ್ಷೀಣಿಸದೆ, ಅದರ ವೃದ್ಧಿಯೇ ಆಗುತ್ತದೆ.
ಈ ಆನ್ಲೈನ್ ಪತ್ರಿಕೆ ನಿಮಗೆ ಇಷ್ಟವಾಗಿದ್ದರೆ, ನಿಮಗಾಗಿ ಇದನ್ನು ಇನ್ನೂ ಹೆಚ್ಚು ಉಪಯುಕ್ತ ಮತ್ತು ಆಕರ್ಷಕವಾಗಿಸಲು ಸಹಾಯ ಮಾಡಿ. ವಿದ್ಯೆಯ ದಾನಕ್ಕಾಗಿ ದೇಣಿಗೆ ನೀಡಿ.