ದೇವಹೂತಿಪುತ್ರ ಶ್ರೀ ಕಪಿಲನ ಬೋಧನೆ

ಓಂ ನಮೋ ಭಗವತೇ ವಾಸುದೇವಾಯ

ಶ್ರೀ ಶ್ರೀ ಎ.ಸಿ.ಭಕ್ತಿವೇದಾಂತ ಪ್ರಭುಪಾದ ಸ್ವಾಮಿಯವರು ಬರೆದಿರುವ “ದೇವಹೂತಿ ಪುತ್ರ ಶ್ರೀ ಕಪಿಲನ ಬೋಧನೆ” ಎಂಬ ಗ್ರಂಥದ ಕನ್ನಡ ಅನುವಾದವನ್ನು ಶ್ರೀದೇಶ ಕುಲಕರ್ಣಿಯವರು ಬರೆದು ಭಕ್ತಿವೇದಾಂತ ಬುಕ್‌ ಟ್ರಸ್ಟ್‌, ಬೆಂಗಳೂರು ಇವರ ಮೂಲಕ ಪ್ರಕಾಶನಗೊಳಿಸಿರುತ್ತಾರೆ. 262+10 ಪುಟಗಳುಳ್ಳ ಈ ಗ್ರಂಥವು ಕೈತೊಳೆದುಕೊಂಡು ಮುಟ್ಟುವ ಪೂಜ್ಯ ಗ್ರಂಥವಾಗಿದೆ.

ಈ ಗ್ರಂಥದ ಮೂಲವು ಹದಿನೆಂಟು ಮಹಾಪುರಾಣಗಳಲ್ಲಿ ಒಂದಾದ ಶ್ರೀಮದ್ಭಾಗವತದ ಒಂದು ಭಾಗವಾಗಿದೆ. “ವಿದ್ಯಾವತಾಂ ಭಾಗವತೇ ಪರೀಕ್ಷಾ” ಎಂಬ ನಾಣ್ನುಡಿಯೊಂದಿದೆ. ಅದರಂತೆ ಮೂಲ ಭಾಗವತ ಪುರಾಣ ಗ್ರಂಥವು “ನಾರಿಕೇಳಪಾಕ” ಎಂದು ಪ್ರಸಿದ್ಧವಾಗಿದೆ.

ಈ ಮಹಾಪುರಾಣದ ರಚನೆ, ಸಾಹಿತ್ಯ, ಶಬ್ದಯೋಗ, ಭಾವಾರ್ಥ-ಇತ್ಯಾದಿಗಳು ಅತ್ಯುನ್ನತ ಮಟ್ಟದ ಸಾಹಿತ್ಯ ಶೈಲಿಯಲ್ಲಿದೆ. ಇದರ ಒಂದು ಭಾಗವಾದ ಶ್ರೀಕಪಿಲನ ಬೋಧನೆ ಎಂಬುದು ಈ ಗ್ರಂಥದ ಸಾರಸರ್ವಸ್ವವಾಗಿದೆ.

ದೇವಹೂತಿ ಎಂಬುವಳು ತನ್ನ ಪುತ್ರನಾದ ಭಗವಾನ್‌ ಕಪಿಲ ಮಹರ್ಷಿಯಿಂದ ಅಸಾಧಾರಣವಾದ ವಾಸುದೇವತತ್ತ್ವವನ್ನು ಶ್ರವಣಮಾಡಿ ಕೃತಾರ್ಥಳಾಗಿ ಮುಕ್ತಿಯನ್ನು ಪಡೆದು ಜನ್ಮಸಾರ್ಥಕ್ಯವನ್ನು ಹೊಂದುತ್ತಾಳೆ. ಈ ಉಪದೇಶಗಳನ್ನು ತನ್ನ ಪುತ್ರನಿಂದಲೇ ಪಡೆಯುತ್ತಾಳೆ. ಬ್ರಹ್ಮಜ್ಞಾನಿಗಳಲ್ಲಿ ಯಾವ ಪ್ರಾಪಂಚಿಕ ವ್ಯವಹಾರ ತಾರತಮ್ಯಗಳಿರುವುದಿಲ್ಲ.

ಈ ಸತ್ಕಾರ್ಯವು ಭಗವಾನ್‌ ಶ್ರೀಕೃಷ್ಣ ಭಗವಂತನ ಅನುಗ್ರಹದಿಂದ ಯಶಸ್ವಿಯಾಗಿ ನೆರವೇರಿ ಇಸ್ಕಾನ್‌ ಸಂಸ್ಥೆಯ ಸತ್ಕಾರ್ಯಗಳು ಹೆಚ್ಚಿನ ಪುರೋಭಿವೃದ್ಧಿಯನ್ನು ಹೊಂದಿ ಲೋಕ ಕಲ್ಯಾಣವಾಗಲಿ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi