-
ಪಾಲಕ್ ಬಾತ್

ಆಲೂಗಡ್ಡೆ ತೊಳೆದು ಸಣ್ಣಗೆ ಹಚ್ಚಿಟ್ಟುಕೊಳ್ಳಿ, ಪಾಲಕ್ ಸೊಪ್ಪನ್ನು ಬಿಡಿಸಿ, ತೊಳೆದು, ಬೇಯಿಸಿಟ್ಟುಕೊಳ್ಳಿ. ಬೇಯಿಸಿದ ಪಾಲಕ್ ಜೊತೆ ಕೊತ್ತಂಬರಿ ಸೊಪ್ಪು, ಹಸಿ ಶುಂಠಿ, ತೆಂಗಿನ ತುರಿ ಸೇರಿಸಿ ರುಬ್ಬಿಟ್ಟುಕೊಳ್ಳಿ. ಚಕ್ಕೆ ಏಲಕ್ಕಿ ಪುಡಿ ಮಾಡಿಟ್ಟುಕೊಳ್ಳಿ. ಕಡಾಯಿಯಲ್ಲಿ ಜೀರಿಗೆ, ಗೋಡಂಬಿ, ಒಗ್ಗರಣೆ ಹಾಕಿ. ರುಬ್ಬಿದ ಪದಾರ್ಥ ಸೇರಿಸಿ. ಚೆನ್ನಾಗಿ ಕುದಿಸಿ. ಚಕ್ಕೆ, ಏಲಕ್ಕಿ ಪುಡಿ ಸೇರಿಸಿ. ಅಕ್ಕಿ ಬೇಯಲು ಬೇಕಾಗುವಷ್ಟು ಬಿಸಿ ನೀರು ಸೇರಿಸಿ. ಅಕ್ಕಿಯನ್ನು ತೊಳೆದು ಈ ಮಿಶ್ರಣಕ್ಕೆ ಸೇರಿಸಿ. ರುಚಿಗೆ ಬೇಕಾದಷ್ಟು ಉಪ್ಪು ಉದುರಿಸಿ. ಕಡಾಯಿಯನ್ನು ಮುಚ್ಚಿ…
-
ಬಾಳೆ ಹಣ್ಣಿನ ಹಲ್ವ

ಬಾಳೆ ಹಣ್ಣನ್ನು ಸುಲಿದು, ಅದು ಮೃದು ಹಿಟ್ಟಿನ ರೂಪಕ್ಕೆ ಬರುವಂತೆ ಮಾಡಿ. ಬಾಳೆ ಹಣ್ಣಿನ ಹಿಟ್ಟನ್ನು ಬಿಸಿ ಬಾಣಲೆಗೆ ಹಾಕಿ, ಅದಕ್ಕೆ ಸಕ್ಕರೆ ಬೆರೆಸಿ, 45 ನಿಮಿಷ ಕಾಲ ಮಗುಚಿ. ಮಿಶ್ರಣವು ಅಂಟು ಅಂಟಾಗಿ, ಕಪ್ಪು ಬಣ್ಣಕ್ಕೆ ತಿರುಗಿದ ಬಳಿಕ ಅದಕ್ಕೆ ತುಪ್ಪ ಬೆರೆಸಿ. ನಿಧಾನವಾಗಿ ಮಗುಚುತ್ತಿರಿ. ನಂತರ ಸಿಟ್ರಿಕ್ ಆಸಿಡ್ ಹರಳುಗಳನ್ನು ಸೇರಿಸಿ. 30 ನಿಮಿಷ ಮಗುಚಿ. ಕೊನೆಗೆ ಆ ಮಿಶ್ರಣ ಬಾಣಲೆಯಿಂದ ಬೇರ್ಪಡುವ ಹಂತ ತಲುಪುತ್ತದೆ. ಏಲಕ್ಕಿ ಪುಡಿ ಮತ್ತು ಗೋಡಂಬಿ ಬೆರೆಸಿ ಚೆನ್ನಾಗಿ…
-
ಹೆಸರು ಬೇಳೆ ಕಿಚಡಿ

ಶ್ರೀಲ ಪ್ರಭುಪಾದರ ಗುರಗಳಾದ ಶ್ರೀಲ ಭಕ್ತಿಸಿದ್ಧಾಂತ ಸರಸ್ವತಿ ಠಾಕುರ ಅವರಿಗೆ ಅತಿ ಪ್ರಿಯವಾದ ಪ್ರಸಾದ ಕಿಚಡಿ. ಹೆಸರು ಬೇಳೆ ಮತ್ತು ಅಕ್ಕಿಯ ಕಿಚಡಿ ಒಂದು ಪೌಷ್ಠಿಕ ಮತ್ತು ರುಚಿಕರ ಖಾದ್ಯ. ಇದರಲ್ಲಿ ಎರಡು ವಿಧ. ಒಂದು ದ್ರವರೂಪದ (ಗಂಜಿಯಂಥ) ಕಿಚಡಿಯಾದರೆ, ಇನ್ನೊಂದು ಗಟ್ಟಿಯಾದ (ಅನ್ನದಂಥ) ಕಿಚಡಿ. ಎರಡೂ ರೀತಿಯ ಕಿಚಡಿಗಳೂ ತಮ್ಮದೇ ಆದ ಸ್ವಾದದಿಂದ ನಿಮ್ಮ ಮನ ಗೆಲುವುದರಲ್ಲಿ ಸಂಶಯವಿಲ್ಲ. ಕಿಚಡಿಯ ಒಂದು ವಿಶೇಷತೆ ಎಂದರೆ ಇದನ್ನು ನೀವು ಮುಂಜಾನೆ ಉಪಹಾರ, ಸಂಜೆಯ ಲಘು ಉಪಹಾರ, ಊಟಕ್ಕಾಗಿ…
-
ಎಲೆಕೋಸಿನ ಪಕೋಡ

ಪಕೋಡ ಬಹು ಜನಪ್ರಿಯ ಕುರುಕಲು ತಿಂಡಿ ಸಾಮಾನ್ಯವಾಗಿ ಈರುಳ್ಳಿ ಇದರ ಅವಿಭಾಜ್ಯ ಭಾಗ. ಇಸ್ಕಾನ್ನ ಪಾಕತಜ್ಞರು, ಪಕೋಡದ ರುಚಿ ಉಳಿಸಿಕೊಂಡು, ಈರುಳ್ಳಿ ಇಲ್ಲದೆ, ತಯಾರಿಸುವ ಹೊಸ ವಿಧಾನ ಪತ್ತೆ ಮಾಡಿದ್ದಾರೆ. ಈರುಳ್ಳಿ ಬದಲಿಗೆ, ಎಲೆಕೋಸನ್ನು ಉಪಯೋಗಿಸುತ್ತಾರೆ. ಇಸ್ಕಾನ್ ದೇವಾಲಯದ ಪ್ರಸಾದದ ಅಂಗಣದಲ್ಲಿ ಈರುಳ್ಳಿ ರಹಿತ ಪಕೋಡ ತಿಂದವರು, ಇದರ ರುಚಿಗೆ ಮಾರುಹೋಗಿ ಪದೇ ಪದೇ, ಬಂದು ಕೊಂಡೊಯ್ಯುತ್ತಿದ್ದಾರೆ. ಅದರ ತಯಾರಿಕೆಯನ್ನು ಕೇಳಿ, ಅಪಾರ ಪತ್ರಗಳು ನಮ್ಮಲ್ಲಿಗೆ ಬಂದಿದ್ದವು. ಇದೋ ನಿಮಗಾಗಿ… ಎಲೆಕೋಸಿನ ಪಕೋಡ. ಮೈದಾ ಮತ್ತು ಕಡಲೇ…
-
ಬಿಸಿ ಬಿಸಿ ಖಾರ ಪೊಂಗಲ್

ಇಸ್ಕಾನ್ ಅತಿಥಿ ಸತ್ಕಾರ, ಕೃಷ್ಣಪ್ರಸಾದದ ಬಗೆಯನ್ನು ಬಲ್ಲವರೇ ಬಲ್ಲರು. ಒಮ್ಮೆ ತಿಂದವರು ಮತ್ತೊಮ್ಮೆ ಮಗದೊಮ್ಮೆ ಬಯಸಿ ಬಯಸಿ, ನಾಲಗೆಯ ತಣಿಸಿಕೊಳ್ಳುವ ದಿವ್ಯ ಮಧುರ ರುಚಿ ಅದರಲ್ಲಿದೆ. ಗೌಡೀಯ ವೈಷ್ಣವ ಪರಂಪರೆಯ ಅಡುಗೆಗಳಲ್ಲದೆ, ಆಧುನಿಕ ಭಕ್ಷ ಭೋಜ್ಯಗಳೂ ಇಲ್ಲಿ ಕೃಷ್ಣನಿಗೆ ಅರ್ಪಿಸಲಾಗುತ್ತದೆ. ಇಂತಹ ತಿಂಡಿ ತಿನಿಸುಗಳಲ್ಲಿ ಈರುಳ್ಳಿ- ಬೆಳ್ಳುಳ್ಳಿಗಳನ್ನು ಉಪಯೋಗಿಸುವುದಿಲ್ಲ. ಇಸ್ಕಾನ್ನ ಪಾಕತಜ್ಞರು, ವಿವಿಧ ರೀತಿಯ ಭೋಜ್ಯಗಳ – ವ್ಯಂಜನಗಳ – ತಿಂಡಿ-ತೀರ್ಥಗಳ ತಯಾರಿ ವಿಧಾನವನ್ನು ಭಕ್ತಿವೇದಾಂತ ದರ್ಶನದ ಓದುಗರಿಗೆ ಇಲ್ಲಿ ಬಡಿಸುತ್ತಾರೆ. ಈ ತಿಂಡಿಗಳ ರುಚಿ ಬರುವುದು…
-
ಹುಗ್ಗಿ

ಹುಗ್ಗಿಗೊಂದು ಪ್ರಾಸದ ಪದ ಹುಡುಕಿ ಎಂದ ಕೂಡಲೆ ನೆನಪಿಗೆ ಬರುವುದು ಸುಗ್ಗಿ. ಸಂತುಷ್ಟಿಯ ಕಾಲದಲ್ಲಿ ಉಂಡು ತೇಗುವಂಥದ್ದು ಹುಗ್ಗಿ. ಅದಕ್ಕೆಂದೇ ಅದು ಸಂಕ್ರಾಂತಿಯೊಂದಿಗೆ ಬೆಸೆದುಕೊಂಡಿರುವ ಭೋಜ್ಯ. ಹುಗ್ಗಿಯಿಲ್ಲದೆ ಎಂಥಾ ಸಂಕ್ರಾಂತಿ ಅನ್ನುವುದು ಸಂಪ್ರದಾಯ ಇನ್ನೂ ಉಳಿಸಿಕೊಂಡಿರುವವರ ಮಾತು. ಈಗಿನ ಜಮಾನದವರಿಗೆ ನೋಡಿ ಹುಗ್ಗಿಯ ಗಮಲೇ ಗೊತ್ತಿಲ್ಲ . ಪಟ್ಟಣದ ಸೋಂಕು ಹತ್ತಿಸಿಕೊಂಡಿರುವ ಮಂದಿಗಂತೂ ಹುಗ್ಗಿಯನ್ನೇ ಹೋಲುವ ಪೊಂಗಲ್ ಮಾತ್ರ ಗೊತ್ತು. ಅದಕ್ಕೆಂದೇ ಅವರ ಪಾಲಿಗೆ ಸಂಕ್ರಮಣವೆಂದರೆ ಪೊಂಗಲ್. ಆದರೆ, ಕನ್ನಡನಾಡಿನ ಸಗ್ಗದ ಸಿರಿ ಸುಗ್ಗಿಯ ಹಬ್ಬ ಸಂಕ್ರಾಂತಿಗೆ…
-
ಬಗೆ ಬಗೆ ತಿನಿಸು

ದೇಹವನ್ನು ಪೋಷಿಸಲು ಆಹಾರ ಅತ್ಯಗತ್ಯ. ಬಗೆ ಬಗೆಯಾದ ಸಸ್ಯಹಾರಿ ಭಕ್ಷ್ಯಗಳನ್ನು ತಯಾರಿಸಿ ಭಗವಂತನಿಗೆ ನೈವೇದ್ಯ ಮಾಡಿ ಸೇವಿಸುವುದರಿಂದ ದೇಹದ ಪೋಷಣೆಯೂ ಆಗುತ್ತದೆ ಮತ್ತು ಕೃಷ್ಣನ ಹತ್ತಿರಕ್ಕೆ ನಾವು ಹೋಗುತ್ತೇವೆ. ಇದು ಭಕ್ತಿಯೋಗದ ವಿಶೇಷತೆ, ಚಳಿಗಾಲದ ವಿಶೇಷವಾಗಿ, ಅವರೆಕಾಳು ಮಸಾಲೆ ವಡೆ, ಕೋಡುಬಳೆಗಳ ಬಾಯಿ ಸಿಹಿ ಮಾಡಿಕೊಳ್ಳಲು ಸೋಹನ್ ಹಲ್ವದ ತಯಾರಿಯ ವಿವರವೂ ಇದೆ. ಅವರೆಕಾಳು ಕೋಡುಬಳೆ ಕನ್ನಡಿಗರ ಹೆಮ್ಮೆಯ ಕುರುಕು ತಿಂಡಿಗಳಿಗೆ ಕೋಡು ಮೂಡಿಸಿದ್ದೇ ಈ ಕೋಡುಬಳೆ, ಹಿದುಕಿದ ಅವರೆಬೇಳೆ ಮಿಶ್ರಿತ ಕೋಡುಬಳೆಯಂತೂ ಇನ್ನೂ ಸ್ವಾದಿಷ್ಟ. ಬೇಕಾಗುವ…
-
ಕ್ಯಾರೆಟ್ನ ಮಹತ್ವ

ಇವುಗಳನ್ನು ಶ್ರದ್ಧೆಯಿಂದ ತಯಾರಿಸಿ ಶ್ರೀ ರಾಧಾಕೃಷ್ಣರಿಗೆ ಅರ್ಪಿಸಿ ಮನೆಯವರೊಂದಿಗೆ ಸೇವಿಸಿ…
-
ವಿಧವಿಧವಾದ ಕಡುಬುಗಳು

ಕಡುಬುಗಳನ್ನು ತಯಾರಿಸಿ, ಶ್ರೀ ರಾಧಾಕೃಷ್ಣರಿಗೆ ಅರ್ಪಿಸಿ, ಅನಂತರ ಕುಟುಂಬದವರೊಂದಿಗೆ ಸೇವಿಸಿ…
-
ಪುಟಾಣಿಗಳಿಗೆ ಪ್ರಿಯವಾದ ಕಟ್ಲೆಟ್

ಈ ಎಲ್ಲವನ್ನು ಶ್ರದ್ಧೆಯಿಂದ ತಯಾರಿಸಿ ಶ್ರೀ ರಾಧಾಕೃಷ್ಣರಿಗೆ ಅರ್ಪಿಸಿ ಮನೆಯವರೊಂದಿಗೆ ಸೇವಿಸಿ…
