-
ಕೃಷ್ಣ ಪಾಕಶಾಲೆ

ಗುಜರಾತಿ ವಿಶೇಷ ಗುಜರಾತ್ ಕೃಷ್ಣನ ದ್ವಾರಕೆಯನ್ನು ಹೊಂದಿರುವ ರಾಜ್ಯ. ಕೃಷ್ಣಭಕ್ತಿಗೆ ಇಲ್ಲಿ ಭಾರಿ ಪ್ರಾಶಸ್ತ್ಯ. ಅನೇಕ ಮಹಾನ್ ಕೃಷ್ಣಭಕ್ತರು ಗುಜರಾತಿನಲ್ಲಿ ಅವತರಿಸಿದರು. ಅವರು ತಮ್ಮ ವಿಶಿಷ್ಟ ಪಾಕ ಶೈಲಿಗೆ ಪ್ರಸಿದ್ಧರು. ಇಲ್ಲಿ ಕೆಲವು ವಿಶೇಷ ಗುಜರಾತಿ ಖಾದ್ಯಗಳನ್ನು ತಯಾರಿಸುವ ವಿಧಾನವನ್ನು ನೀಡಿದ್ದೇವೆ. ಗುಜರಾತಿ ಕಡಿ ಬೇಕಾಗುವ ಸಾಮಗ್ರಿಗಳು: ಕಡಲೆ ಹಿಟ್ಟು – ಎರಡು ಚಮಚ ಮೊಸರು – ಎರಡು ಕಪ್ ಮೆಣಸು–ಶುಂಠಿ ಮಿಶ್ರಣ – ಒಂದು ಚಮಚ ಕರಿಬೇವಿನ ಸೊಪ್ಪು ಸಕ್ಕರೆ – ಎರಡು ಚಮಚ (ಅಥವಾ…
-
ಕೃಷ್ಣ ಪಾಕಶಾಲೆ

ಪುಟಾಣಿಗಳಿಗೆ ಪ್ರಿಯವಾದ ಕಟ್ಲೆಟ್ ಮಕ್ಕಳಿಗೆ ತಿಂಡಿಯೆಂದರೆ ಅಚ್ಚುಮೆಚ್ಚು. ಅದರಲ್ಲೂ ಕುರುಕಲು ತಿಂಡಿಯೆಂದರೆ ಇನ್ನೂ ಹೆಚ್ಚು ಖುಷಿ. ರುಚಿಯಾಗಿ ಮತ್ತು ಬಿಸಿಯಾಗಿ ಏನಾದರು ಮಾಡಿಕೊಟ್ಟರೆ ಇಷ್ಟಪಟ್ಟು ತಿನ್ನುತ್ತಾರೆ. ಹಾಗೆ ಮಾಡಬೇಕೆನಿಸಿದರೆ ಬ್ರೆಡ್ ಕಟ್ಲೆಟ್, ಆಲೂ-ಪಾಲಕ್ ಕಟ್ಲೆಟ್, ಅವಲಕ್ಕಿ ಕಟ್ಲೆಟ್ ಹೀಗೆ ವಿವಿಧ ಬಗೆ ಬಗೆಯ ಕಟ್ಲೆಟ್ ಮಾಡಬಹುದು. ಭಕ್ತಿವೇದಾಂತ ದರ್ಶನದ ಓದುಗರಿಗೆ ಕಟ್ಲೆಟ್ ಮಾಡುವ ವಿಧಾನವನ್ನು ತಿಳಿಸಿದ್ದೇವೆ. ಈ ಎಲ್ಲವನ್ನೂ ತಯಾರಿಸಿ ಮನೆಯವರೊಂದಿಗೆ ಸೇವಿಸಿ. ಆಲೂ ಪಾಲಕ್ ಕಟ್ಲೆಟ್ ಬೇಕಾಗುವ ಸಾಮಗ್ರಿಗಳು: ಬೇಯಿಸಿದ ಆಲೂಗಡ್ಡೆ – 3 ಪಾಲಕ್…
-
ವನಿತಾ: ಕೃಷ್ಣ ಪಾಕಶಾಲೆ

ಕೋಸು ವಿಶೇಷ ವರ್ಷವಿಡೀ ಬೆಳೆಯುವ ಕೋಸು ಪೌಷ್ಟಿಕಾಂಶಗಳಿಂದ ತುಂಬಿದ್ದು ಆರೋಗ್ಯಕ್ಕೆ ಅಷ್ಟೇ ಅಲ್ಲ, ಸೌಂದರ್ಯವರ್ಧನೆಗೂ ಸಾಧಕ. ಕೋಸಿನಲ್ಲಿ ಅತಿ ಕಡಿಮೆ ಕ್ಯಾಲೊರಿ ಇದೆ. ಕೊಬ್ಬಿನಾಂಶವಂತೂ ಇಲ್ಲ. ಹೀಗಾಗಿ ತೂಕ ನಿರ್ವಹಣೆಗೆ ಇನ್ನೇನು ಬೇಕು? ಅಲ್ಲದೆ ಇದರಲ್ಲಿ ಆಂಟಿ ಆಕ್ಸಿಡೆಂಟ್ಸ್ ಮತ್ತು ವಿಟಮಿನ್ “ಸಿ” ಸಮೃದ್ಧವಾಗಿದೆ. ಇದು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸಲು ಮತ್ತು ರೋಗಗಳ ವಿರುದ್ಧ ಹೋರಾಡಲು ಅಗತ್ಯವಾಗಿದೆ. ಕೋಸಿನ ಜ್ಯೂಸ್ ಚರ್ಮಕ್ಕೆ ಅಧಿಕ ಲಾಭದಾಯಕ. ಇದರಲ್ಲಿ ಮುಪ್ಪನ್ನು ದೂರವಾಗಿಸುವ ಗುಣಗಳು ಹೇರಳವಾಗಿದೆ. ಕೋಸಿನ ಜ್ಯೂಸ್ ಕುಡಿಯುವುದರಿಂದ…
-
ವನಿತಾ: ಕೃಷ್ಣ ಪಾಕಶಾಲೆ: ವಿಧ ವಿಧದ ದೋಸೆ

ಭಾರತದಲ್ಲಿ, ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ದೋಸೆ, ಇಡ್ಲಿ, ಉಪ್ಪಿಟ್ಟಿನಂತಹ ತಿಂಡಿಗಳು ಬೆಳಗ್ಗಿನ ಉಪಹಾರದ ಅವಿಭಾಜ್ಯ ತಿನಿಸುಗಳಾಗಿವೆ. ಅತ್ಯಂತ ಜನಪ್ರಿಯವಾದ ಮಸಾಲೆ ದೋಸೆ ಸೇರಿದಂತೆ ವೈವಿದ್ಯಮಯವಾದ ದೋಸೆಗಳನ್ನು ತಯಾರಿಸಬಹುದು. ಇಲ್ಲಿ ನಾಲ್ಕು ಬಗೆಯ ದೋಸೆಗಳನ್ನು ಮಾಡುವ ವಿಧಾನ ತಿಳಿಸಲಾಗಿದೆ. ಅವಲಕ್ಕಿ (ಪೋಹ) ದೋಸೆ ಬೇಕಾಗುವ ಸಾಮಗ್ರಿಗಳು: ಅಕ್ಕಿ – 2 ಕಪ್ ಅವಲಕ್ಕಿ – 1 ಕಪ್ ಉದ್ದಿನಬೇಳೆ – 1 ಟೇಬಲ್ ಸ್ಪೂನ್ ಮೊಸರು – 1 ಕಪ್ (ಇದಕ್ಕೆ 2 ಕಪ್ ನೀರು ಬೆರಸಬೇಕು) ಅಡುಗೆ…
-
ಕೃಷ್ಣ ಪಾಕಶಾಲೆ

ಅಂಟಿನ ಉಂಡೆ ಬೇಕಾಗುವ ಸಾಮಗ್ರಿಗಳು: ಕಾಲು ಕೆ.ಜಿ.ಅಂಟು 1 ಕೆ.ಜಿ ಕೊಬ್ಬರಿ ಏಲಕ್ಕಿ ಲವಂಗ ದ್ರಾಕ್ಷಿ ಗೋಡಂಬಿ ಮಾಡುವ ವಿಧಾನ: ಬೆಲ್ಲವನ್ನು ಸಣ್ಣಗೆ ಹೆರೆದುಕೊಂಡು ಬೆಲ್ಲ ತೋಯುವಷ್ಟು ತುಪ್ಪ ಹಾಕಿ ಕುದಿಯಲು ಇಡಬೇಕು. ಅಲ್ಲಿ ಇಲ್ಲಿ ಗುಳ್ಳೆ ಬಂದ ತಕ್ಷಣ ಇಳಿಸಬೇಕು. ತುಪ್ಪದಲ್ಲಿ ಕರಿದ ಅಂಟು ಮತ್ತು ಎಲ್ಲ ಸಾಮಾನುಗಳನ್ನು ಹಾಕಿ ಉಂಡೆ ಕಟ್ಟಬೇಕು. ಆದರೆ ಉಂಡೆಗಳು ಗಟ್ಟಿಯಾಗುವುದಿಲ್ಲ. ತುಪ್ಪ ಇಲ್ಲದಿದ್ದರೆ ನೀರು ಹಾಕಿ ಉಂಡೆ ಆಣ ತೆಗೆದುಕೊಂಡು ಉಂಡೆ ಕಟ್ಟಬೇಕು. ಇವು ಗಟ್ಟಿ ಆಗುತ್ತವೆ. ಕೃಷ್ಣನಿಗೆ…
-
ಬಗೆ ಬಗೆಯ ಮಾವಿನ ತಿನಿಸು

ಮೇ, ಜೂನ್ ತಿಂಗಳೆಂದರೆ ಮಾವಿನ ಕಾಯಿ, ಹಣ್ಣುಗಳ ಕಾಲ. ಮಾವು ನಮ್ಮ ಗೃಹಿಣಿಯ ಅಚ್ಚುಮೆಚ್ಚಿನ ಮಿತ್ರ. ಚಟ್ನಿ, ತೊಕ್ಕು, ಬರ್ಫಿ, ಗೊಜ್ಜು, ಚಿತ್ರಾನ್ನ ಸೇರಿದಂತೆ ಮಾವಿನ ಕಾಯಿ-ಹಣ್ಣಿನಿಂದ ರುಚಿರುಚಿಯಾದ ಪದಾರ್ಥಗಳನ್ನು ತಯಾರಿಸುವ ವಿಧಾನವನ್ನು ನಮ್ಮ ಗೃಹಲಕ್ಷ್ಮಿಯರಿಗಾಗಿ ಇಲ್ಲಿ ನೀಡಿದ್ದೇವೆ. ಮಾವಿನ ಹಣ್ಣಿನ ಬರ್ಫಿ ಬೇಕಾಗುವ ಪದಾರ್ಥಗಳು: ತಯಾರಿಸುವ ವಿಧಾನ: ಸಿಪ್ಪೆ ತೆಗೆದ ಮಾವಿನ ಹಣ್ಣನ್ನು ಚೆನ್ನಾಗಿ ಕಿವುಚಿ ರಸ ಹಿಂಡಿ. ಗೊರಟು ಬಿಸಾಡಿ. ತೆಂಗಿನ ಕಾಯಿ ತುರಿದು ಮಿಕ್ಸಿಯಲ್ಲಿ ರುಬ್ಬಿ. ಕಾಯಿ ತುರಿಯನ್ನು ಹಿಂಡಿ ಹಾಲು ತೆಗೆದಿಟ್ಟುಕೊಳ್ಳಿ.…
-
ಏಕಾದಶಿ ಅಡುಗೆಗಳು

ಬೇಯಿಸಿದ ಬಾಳೆ ಹಣ್ಣು ಬೇಕಾಗುವ ಪದಾರ್ಥಗಳು: ತಯಾರಿಸುವ ವಿಧಾನ: ಬಾಳೆ ಹಣ್ಣನ್ನು ಮೂರು ಇಂಚು ಉದ್ದದ ಚೂರುಗಳನ್ನಾಗಿ ಕತ್ತರಿಸಿ. ಸಕ್ಕರೆ, ಕಾಯಿ ತುರಿ, ಏಲಕ್ಕಿಯನ್ನು ಸಣ್ಣ ಉರಿಯಲ್ಲಿ ಬೇಯಿಸಿ. ಸಕ್ಕರೆ ಪಾಕವಾಗಿ ಕಾಯಿ ತುರಿಯೊಂದಿಗೆ ಚೆನ್ನಾಗಿ ಬೆರೆತು ಹದವಾದ ಮಿಶ್ರಣವಾಗುವ ತನಕ ಬೇಯಿಸಿ. ನಂತರ ಒಲೆಯಿಂದ ಕೆಳಗಿಳಿಸಿ. ಈಗ ಬಾಳೆ ಹಣ್ಣಿನ ಒಂದೊಂದೇ ಹೋಳನ್ನು ಪ್ರತ್ಯೇಕವಾಗಿ ತೆಗೆದುಕೊಂಡು, ನಾಜೂಕಾಗಿ ಸಕ್ಕರೆ-ಕಾಯಿ ತುರಿ ಪಾಕದೊಳಕ್ಕೆ ಮುಳುಗಿಸಿ. ಹಾಗೆಯೇ ತೆಳುವಾದ ಕಡ್ಡಿಯ ಸಹಾಯದಿಂದ ಬಾಳೆ ಹಣ್ಣುನ್ನು ಹೊರ ತೆಗೆದು, ಇನ್ನೊಂದು…
-
ವಿವಿಧ ತಿನಿಸು

ಪಾನಕ ಬೇಕಾಗುವ ಪದಾರ್ಥಗಳು: ತಯಾರಿಸುವ ವಿಧಾನ: ಬೆಲ್ಲದ ಹುಡಿಯನ್ನು ನೀರಿನಲ್ಲಿ ಬೆರೆಸಿ, ಸಂಪೂರ್ಣವಾಗಿ ಕರಗಿಸಿ. ಮಿಶ್ರಣವನ್ನು ಶುಭ್ರವಾದ ಬಟ್ಟೆಯಲ್ಲಿ ಸೋಸಿ. ಅದಕ್ಕೆ ಲಿಂಬೆ ರಸ, ಒಣ ಶುಂಠಿ ಹುಡಿ, ಏಲಕ್ಕಿ, ಕಾಳು ಮೆಣಸಿನ ಹುಡಿ ಮತ್ತು ಉಪ್ಪು ಬೆರೆಸಿ. ತಣ್ಣಗಿನ ರುಚಿ ರುಚಿ ಪಾನಕವನ್ನು ಎಲ್ಲರಿಗೂ ಹಂಚಿ. ಪಾಲನಕದ ವಿಶೇಷವೆಂದರೆ ಇದನ್ನು ಬೇಸಿಗೆಯಲ್ಲಿ ಬಾಯಾರಿಕೆ ತಣಿಸುವ ಹಾಗೂ ಅತಿಥಿಗಳನ್ನು ಸ್ವಾಗತಿಸುವ ಪೇಯವಾಗಿ ನೀಡಬಹುದು. ದಾಹ ತಣಿಸಿ, ದಣಿವು ನಿವಾರಿಸಿ ದೈಹಿಕ ಶಕ್ತಿಯನ್ನೂ ಹೆಚ್ಚಿಸುವ ಶಕ್ತಿ ಈ ಪಾನಕಕ್ಕಿದೆ.…
-
ಸವೆನ್ ಕಪ್ಸ್

ಈ ಸಿಹಿ ತಿಂಡಿಯ ವಿಶೇಷ ಏನಪ್ಪಾ ಅಂದರೆ, ಕೊಬ್ಬಿನ ಅಂಶ ಹೆಚ್ಚಿರುವುದಿಲ್ಲ. ಮೇಲೆ ತಿಳಿಸಿದ ಎಲ್ಲ ಪದಾರ್ಥಗಳನ್ನೂ ಒಂದು ಕಡಾಯಿಯಲ್ಲಿ ಹಾಕಿ ಚೆನ್ನಾಗಿ ಕಲಸಿ ಒಲೆಯ ಮೇಲೆ ಸಣ್ಣ ಉರಿಯಲ್ಲಿಡಿ. ಮೊಗಚೆಕೈಯಿಂದ ನಿಧಾನವಾಗಿ ಕೈಯಾಡಿಸುತ್ತಲೇ ಇರಿ. 10-15 ನಿಮಿಷಗಳ ನಂತರ ಪಾತ್ರೆಯ ತಳದಿಂದ ಪಾಕ ಬಿಟ್ಟುಕೊಂಡು ಹೊರಬರವುದನ್ನು ನೋಡುವಿರಿ. ಪಾಕ ಹದಕ್ಕೆ ಬಂದನಂತರ ಘಂ ಅಂತ ಪರಿಮಳ ಮನೆಯಲ್ಲಾ ಹರಡುತ್ತದೆ. ಆಗ ಕಡಾಯಿಯನ್ನು ಇಳಿಸಿ. ಒಂದು ಅಗಲವಾದ, ಜಿಡ್ಡು ಸವರಿದ ಸಮತಟ್ಟಾದ ತಟ್ಟೆಗೆ ಸುರಿಯಿರಿ. ಈಗ ಚಾಕುಗೆ…
-
ಬಗೆಬಗೆ ಚಕ್ಕುಲಿ

ಹೆಸರುಬೇಳೆ ಚಕ್ಕುಲಿ ಹೆಸರುಬೇಳೆಗೆ ನೀರು ಹಾಕಿ ಬೇಯಿಸಿ, ನೀರು ಬಸಿದು ಬೇಳೆಯನ್ನು ನುಣ್ಣಗೆ ನಾದಿಕೊಳ್ಳಿ. ಉಪ್ಪು ಜೀರಿಗೆ, ತೊಳೆದ ಅಕ್ಕಿ ಹಿಟ್ಟು ಸೇರಿಸಿ ಕಲಸಿ. ಚಕ್ಕುಲಿ ಒರಳಿಗೆ ಹಿಟ್ಟು ತುಂಬಿ ಕಾದ ಎಣ್ಣೆಯಲ್ಲಿ ಕರಿಯಿರಿ. ಮೈದಾಹಿಟ್ಟಿನ ಚಕ್ಕುಲಿ ಮೈದಾಹಿಟ್ಟನ್ನು ಒಂದು ಬಟ್ಟೆಯಲ್ಲಿ ಕಟ್ಟಿ ತಟ್ಟೆಯ ಮೇಲೆ ಇಟ್ಟು ಆವಿಯಲ್ಲಿ ಮುಕ್ಕಾಲುಗಂಟೆ ಬೇಯಿಸಿ. ಇದನ್ನು ತೆಗೆದು ಉಂಡೆಯಂತಾಗಿರುವ ಮೈದಾಹಿಟ್ಟನ್ನು ಪುಡಿಮಾಡಿ. ಉಪ್ಪು, ಎಳ್ಳು ಸೇರಿಸಿ. ನೀರು ಹಾಕಿ ಕಲಸಿ ಚಕ್ಕುಲಿ ಒರಳಿಗೆ ಹಿಟ್ಟು ತುಂಬಿ ಕಾದ ಎಣ್ಣೆಯಲ್ಲಿ ಹದವಾಗಿ…
