ವಿಷ್ಣು ಸಹಸ್ರನಾಮ ಪಾರಾಯಣ

ಇಸ್ಕಾನ್‌‍ ಬೆಂಗಳೂರು 15 ನವೆಂಬರ್‌‍ 2024 ರಂದು ರಾಜಾಜಿನಗರದ ಇಸ್ಕಾನ್‌‍ ಹರೇ ಕೃಷ್ಣ ಗಿರಿಯಲ್ಲಿ ಕಾರ್ತಿಕ ದೀಪೋತ್ಸವದ ಸಂದರ್ಭದಲ್ಲಿ 16ನೇ ವಾರ್ಷಿಕ ವಿಷ್ಣು ಸಹಸ್ರನಾಮ ಅಖಂಡ ಪಾರಾಯಣವನ್ನು ಆಯೋಜಿಸಿತ್ತು. ಬೆಂಗಳೂರು, ಮೈಸೂರು, ಚೆನ್ನೈ ಮತ್ತು ಇತರ ಸ್ಥಳಗಳಿಂದ 1500ಕ್ಕೂ ಹೆಚ್ಚು ಭಕ್ತರು 27 ತಂಡಗಳಲ್ಲಿ ವಿಷ್ಣು ಸಹಸ್ರನಾಮವನ್ನು ಪಠಿಸಲು ಆಗಮಿಸಿದ್ದರು.

ವಿಶ್ವವಿಖ್ಯಾತ ವೇದ ವಿದ್ವಾಂಸ ವಿದ್ಯಾವಾಚಸ್ಪತಿ ಡಾ.ಅರಳುಮಲ್ಲಿಗೆ ಪಾರ್ಥಸಾರಥಿ, ಗ್ಲೋಬಲ್‌‍ ವಿಷ್ಣುಸಹಸ್ರನಾಮ ಸತ್ಸಂಗ ಒಕ್ಕೂಟದ ಸಂಸ್ಥಾಪಕರು ಹಾಗೂ ಪ್ರಮುಖ ವಿಷ್ಣುಸಹಸ್ರನಾಮ ತಂಡಗಳ ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಈ ಪವಿತ್ರ ಸಂಪ್ರದಾಯವನ್ನು ಉಳಿಸಲು ಇಸ್ಕಾನ್‌‍ನ ಪ್ರಯತ್ನವನ್ನು ಶ್ಲಾಘಿಸಿದರು.

ಡಾ. ಪಾರ್ಥಸಾರಥಿ ಅವರು ಇಸ್ಕಾನ್‌‍ನ ಸಂಸ್ಥಾಪಕ-ಆಚಾರ್ಯರಾದ ಶ್ರೀಲ ಪ್ರಭುಪಾದರನ್ನು ಜಾಗತಿಕವಾಗಿ ಕೃಷ್ಣ ಭಕ್ತಿಯನ್ನು ಹರಡುವಲ್ಲಿ ಅವರ ಸಾರ್ಥಕ ಕಾರ್ಯಕ್ಕಾಗಿ ಶ್ಲಾಘಿಸಿದರು.

ಈ ಕಾರ್ಯಕ್ರಮದ ದೃಶ್ಯಗಳನ್ನು ವೀಕ್ಷಿಸಿ ಮತ್ತು ಇತರರೊಂದಿಗೆ ಹಂಚಿಕೊಳ್ಳಿ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi