ವೇದವಾಕ್ಯ

ಯೋಗೇಶ್ವರನಾದ ಕೃಷ್ಣನು ಎಲ್ಲಿರುವನೋ ಮತ್ತು ಧನುರ್ಧಾರಿಯಾದ ಅರ್ಜುನನು ಎಲ್ಲಿ
ಇರುವನೋ ಅಲ್ಲಿ ನಿಶ್ಚಯವಾಗಿಯೂ ಸಿರಿ, ವಿಜಯ, ಅಸಾಧಾರಣ ಶಕ್ತಿ ಮತ್ತು ನೀತಿ
ಇವುಗಳು ಇರುತ್ತವೆ. ಇದು ನನ್ನ ಅಭಿಪ್ರಾಯ.

– ಸಂಜಯ, ಭಗವದ್ಗೀತೆ 18.78

* * * *

ವೈಷ್ಣವರಲ್ಲದವರಿಂದ ಕೃಷ್ಣನನ್ನು ಕುರಿತು ಏನೂ ಕೇಳಬಾರದು. ಸರ್ಪದ ನಾಲಗೆ ಸ್ಪರ್ಶಿಸಿದ ಹಾಲು ವಿಷಪೂರಿತವಾಗುತ್ತದೆ. ಅದೇ ರೀತಿ, ಕೃಷ್ಣನನ್ನು ಕುರಿತ ವೈಷ್ಣವನಲ್ಲದವರ ಉಪನ್ಯಾಸವೂ ವಿಷಪೂರಿತ.

– ಶ್ರೀಲ ಸನಾತನ ಗೋಸ್ವಾಮಿ, ಹರಿ ಭಕ್ತಿ ವಿಲಾಸ

* * * *

ಪರಮ ಪ್ರಭುವಿನ ಇಚ್ಛೆಯಂತೆ, ಸಂತೋಷವೋ ಸಂಕಟವೋ, ಬದುಕಿನ ಯಾವುದೇ ಸ್ಥಿತಿಯಿರಲಿ, ವ್ಯಕ್ತಿಯು ಅದರಲ್ಲಿ ತೃಪ್ತನಾಗಿರಬೇಕು. ಈ ರೀತಿ ಸಹಿಷ್ಣುವಾಗಿರುವವನು ಮಾಯೆಯ ಕಗ್ಗತ್ತಲನ್ನು ಬಹು ಸುಲಭವಾಗಿ ದಾಟಲು ಸಮರ್ಥನಾಗುತ್ತಾನೆ.

– ಶ್ರೀ ನಾರದ ಮುನಿ, ಶ್ರೀಮದ್‌ ಭಾಗವತ, 4.8.33

* * * *

ದೈವತ್ವದ ಅತಿ ಉತ್ಕೃಷ್ಟ ಆಧ್ಯಾತ್ಮಿಕ ಪರಿಪೂರ್ಣತೆಯನ್ನು ಕೃಷ್ಣನಲ್ಲಿ ಕಾಣಬಹುದು. ಅವನ ವಿರುದ್ಧ ಅನಗತ್ಯ ವಾದ ಮಾಡುವುದೆಂದರೆ ತಮಗೆ ತಾವೇ ಮೋಸ ಮಾಡಿಕೊಂಡಂತೆ ಮತ್ತು ಅವನು ಅವರಿಗಾಗಿ ಇಟ್ಟಿರುವ ಅನುಗ್ರಹದಿಂದ ತಮಗೆ ತಾವೇ ವಂಚಿಸಿಕೊಂಡಂತೆ.

– ಶ್ರೀಲ ಭಕ್ತಿ ವಿನೋದ ಠಾಕುರ,

ಶ್ರೀ ಚೈತನ್ಯ ಮಹಾಪ್ರಭು ಅವರ ಬದುಕು ಮತ್ತು ಬೋಧನೆ

* * * *

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi