-
ಶ್ರೀ ರಾಮ ನವಮಿ 2024

-
ಶ್ರೀ ಗೌರ ಪೂರ್ಣಿಮಾ 2024

ಇಸ್ಕಾನ್ ವೈಕುಂಠ ಗಿರಿಯಲ್ಲಿ ಶ್ರೀ ಚೈತನ್ಯ ಮಹಾಪ್ರಭುಗಳ ಮಂಗಳಕರವಾದ ಶ್ರೀ ಗೌರ ಪೂರ್ಣಿಮೆಯನ್ನು ಆಚರಿಸಲಾಯಿತು. ಕಲಿಯುಗಕ್ಕಾಗಿ ಪರಮಾತ್ಮನ ಅವತಾರವಾದ ಶ್ರೀಕೃಷ್ಣನ ಪವಿತ್ರ ನಾಮಗಳನ್ನು ಜಪಿಸುವುದರ ಮೂಲಕ ಮಾನವ ಜೀವನದ ಪರಿಪೂರ್ಣತೆಯನ್ನು ಸಾಧಿಸುವ ಸಾರ್ವತ್ರಿಕ ಪ್ರಕ್ರಿಯೆಯನ್ನು ಹರಡಲಾಯಿತು. ಸಂಭ್ರಮಾಚರಣೆಯ ಸಮಯದಲ್ಲಿ ಸೆರೆಹಿಡಿಯಲಾದ ಅಪೂರ್ವ ನೋಟವನ್ನು ವೀಕ್ಷಿಸಿ ಮತ್ತು ಇತರರೊಂದಿಗೆ ಹಂಚಿಕೊಳ್ಳಿ.
-
ಶ್ರೀ ಗೌರ ಪೂರ್ಣಿಮಾ 2024

ಇಸ್ಕಾನ್ ಶ್ರೀ ರಾಧಾ ಕೃಷ್ಣ ಮಂದಿರದಲ್ಲಿ ಶ್ರೀ ಚೈತನ್ಯ ಮಹಾಪ್ರಭುಗಳ ಆವಿರ್ಭಾವ ದಿನವಾದ ಗೌರ ಪೂರ್ಣಿಮವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಸ್ವಯಂ ಶ್ರೀ ಕೃಷ್ಣನಾದ ಶ್ರೀ ಚೈತನ್ಯರು ಕಲಿಯುಗದಲ್ಲಿ ಶ್ರೀ ಕೃಷ್ಣನ ಭಕ್ತನಾಗಿ ಅವತರಿಸಿ ಭಗವಂತನ ಪವಿತ್ರ ನಾಮಗಳನ್ನು ಜಪಿಸುವ ಸರಳ ವಿಧಾನದಿಂದ ಭಕ್ತನಾಗುವುದು ಹೇಗೆ ಸಾಧ್ಯ ಎನ್ನುವುದನ್ನು ಸಾದೃಶ ಪಡಿಸಿದರು. ದಿನಾಂಕ 25-3-2024ರಂದು ನಡೆದ ಈ ಸಂಭ್ರಮಾಚರಣೆಯ ಅಪೂರ್ವ ನೋಟವನ್ನು ವೀಕ್ಷಿಸಿ ಮತ್ತು ಇತರರೊಂದಿಗೆ ಹಂಚಿಕೊಳ್ಳಿ.
-
ಭಕ್ತಿ ಸಿದ್ಧಾಂತರ ಆವಿರ್ಭಾವ ದಿನ

-
ಶ್ರೀ ನಿತ್ಯಾನಂದ ತ್ರಯೋದಶಿ

ರಾಜಾಜಿನಗರದ ಇಸ್ಕಾನ್ ಶ್ರೀ ರಾಧಾ ಕೃಷ್ಣ ದೇವಸ್ಥಾನದಲ್ಲಿ ಶ್ರೀ ನಿತ್ಯಾನಂದ ತ್ರಯೋದಶಿಯನ್ನು ಆಚರಿಸಲಾಯಿತು. ಶ್ರೀ ಶ್ರೀ ನಿತಾಯ್ ಗೌರಾಂಗರಿಗೆ ದಿವ್ಯ ಅಭಿಷೇಕ ನಡೆಯಿತು. ಆನಂತರ ಭಜನೆ, ಕೀರ್ತನೆ ಮತ್ತು ಆರತಿಯೊಂದಿಗೆ ಆಚರಿಸಲಾಯಿತು. ಸಡಗರ ಸಂಭ್ರಮದ ಆಚರಣೆಯ ಸುಂದರ ದೃಶ್ಯಗಳನ್ನು ವೀಕ್ಷಿಸಿ ಮತ್ತು ಇತರರೊಂದಿಗೆ ಹಂಚಿಕೊಳ್ಳಿ.
-
ಉಡುಪಿ ಪರ್ಯಾಯ ಪ್ರಶಸ್ತಿ

ಇಸ್ಕಾನ್ ಬೆಂಗಳೂರು ಅಧ್ಯಕ್ಷರಾದ ಶ್ರೀ ಮಧು ಪಂಡಿತ ದಾಸ ಅವರಿಗೆ ಉಡುಪಿಯಲ್ಲಿ ನಡೆದ ಪರ್ಯಾಯ ಸಮಾರಂಭದಲ್ಲಿ ಪರ್ಯಾಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಸ್ವಾಮೀಜಿ ಅವರ ಮಾತುಗಳಲ್ಲಿ… ನಮ್ಮ ಮಧು ಪಂಡಿತ ದಾಸರು ಈವತ್ತು ಬಹಳ ವಿಶೇಷವಾದಂತಹ ಸಾಧನೆಯನ್ನು ಮಾಡಿರುವವರು. ನಾವು ಅವರೂ 40 ವರ್ಷಗಳಿಂದ ವಿಶೇಷ ಸಂಪರ್ಕದಲ್ಲಿ ಇದ್ದೇವೆ. ಅವರು ಸಾಮಾನ್ಯ ಕಾರ್ಯಕರ್ತರಾಗಿ ನಮ್ಮ ಕಣ್ಣೆದುರಿಗೇ ಈವತ್ತು ಬಹಳ ದೊಡ್ಡದಾದಂತಹ ಕೃಷ್ಣನ ದೇವಸ್ಥಾನವನ್ನು ಬೆಂಗಳೂರಿನಲ್ಲಿ ನಿರ್ಮಾಣ ಮಾಡಿರುವ ಅವರ ಸಾಧನೆ ಮತ್ತು ಸೇವೆಯನ್ನು ನೋಡಿ ನಾವೇ ಆಶ್ಚರ್ಯ…
-
ಶ್ರೀ ಶ್ರೀ ಕೃಷ್ಣ ಬಲರಾಮ ರಥಯಾತ್ರೆ

-
ವೈಕುಂಠ ಏಕಾದಶೀ 2023

ಹರೇಕೃಷ್ಣ ಗಿರಿ, ರಾಜಾಜಿನಗರ, ಬೆಂಗಳೂರು ವೈಕುಂಠ ಗಿರಿ, ವಸಂತಪುರ, ಬೆಂಗಳೂರು
-
ಶ್ರೀಲ ಪ್ರಭುಪಾದರ 46ನೇ ಪುಣ್ಯತಿಥಿ
ಇಸ್ಕಾನ್, ಹರೇ ಕೃಷ್ಣ ಗಿರಿ, ರಾಜಾಜಿನಗರ, ಬೆಂಗಳೂರು. ನವೆಂಬರ್ 17, 2023, ಶುಕ್ರವಾರ ಇಸ್ಕಾನ್, ವೈಕುಂಠ ಗಿರಿ, ವಸಂತಪುರ, ಬೆಂಗಳೂರು. ನವೆಂಬರ್ 17, 2023, ಶುಕ್ರವಾರ
-
ಗೋವರ್ಧನ ಪೂಜೆ

ಇಸ್ಕಾನ್ ಬೆಂಗಳೂರು, 14-11-2023
