-
ಇಂದಿನ ದರ್ಶನ
ಇಸ್ಕಾನ್ ದೇವಸ್ಥಾನ, ಅಕ್ಟೋಬರ್ 18, 2025, ಶನಿವಾರ
-
ಗೋವರ್ಧನ ಪೂಜೆ
ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘದ ಸಂಸ್ಥಾಪನಾಚಾರ್ಯರಾದ ಶ್ರೀ ಶ್ರೀಮದ್ ಎ. ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು ನವೆಂಬರ್ 4, 1966 ರಂದು ನ್ಯೂಯಾರ್ಕ್ ನಲ್ಲಿ ಮಾಡಿದ ಉಪನ್ಯಾಸ. ಇಂದ್ರದೇವನ ಕ್ರೋಧದಿಂದ ವ್ರಜವಾಸಿಗಳನ್ನು ರಕ್ಷಿಸಲು ಗೋವರ್ಧನ ಗಿರಿಯನ್ನು ಎತ್ತಿದ ಶ್ರೀ ಕೃಷ್ಣನ ಲೀಲೆಯನ್ನು ಕೊಂಡಾಡಲು ಗೋವರ್ಧನ ಪೂಜೆಯನ್ನು ನೆರವೇರಿಸಲಾಗುತ್ತದೆ. ಗೋವರ್ನಧಾರಿ, ಗಿರಿಧಾರಿ ಶ್ರೀಕೃಷ್ಣನು ಗೋವರ್ಧನ ಗಿರಿಯನ್ನು ಎತ್ತಿದನು. ವೈದಿಕ ಸಾಹಿತ್ಯದ ಪ್ರಕಾರ, ಅನೇಕ ದೇವತೆಗಳಿದ್ದಾರೆ. ಗ್ರೀಕ್ ಪುರಾಣದಲ್ಲಿಯೂ ನೋಡಬಹುದು. ಜಲದೇವತೆ, ಸಿಡಿಲುಗುಡುಗಿನ ದೇವತೆಯ ಪ್ರಸ್ತಾಪವಿದೆ. ಇವು ಕಲ್ಪನೆಯಲ್ಲ. ಅವು ವಾಸ್ತವಾಂಶ.…
-
ಪುರಿ ರಥಯಾತ್ರೆ
ಜಗನ್ನಾಥ ಸ್ವಾಮಿಯ ಮಹಾಉತ್ಸವ ಸುಮಾರು 5000 ವರ್ಷಗಳ ಹಿಂದೆ ಅವತರಿಸಿದ ಶ್ರೀಕೃಷ್ಣನು ಒಮ್ಮೆ ಸೂರ್ಯಗ್ರಹಣದ ಸಂದರ್ಭದಲ್ಲಿ ಯಾಗಗಳನ್ನು ಆಚರಿಸಲು ದ್ವಾರಕೆಯನ್ನು ತೊರೆದು ಕುರುಕ್ಷೇತ್ರಕ್ಕೆ ಬರುತ್ತಾನೆ. ವೃಂದಾವನ ನಿವಾಸಿಗಳು ಆಗ ಅಲ್ಲಿಗೆ ಬರುತ್ತಾರೆ. ಮಾತ್ರವಲ್ಲ, ತಮ್ಮ ಆರಾಧ್ಯೆ ದೈವವನ್ನು ರಥದಲ್ಲಿ ಕುಳ್ಳಿರಿಸಿ ವೃಂದಾವನಕ್ಕೆ ಕರೆದೊಯ್ಯುತ್ತಾರೆ. ಇದರ ದ್ಯೋತಕವಾಗಿ ಪ್ರತಿ ವರ್ಷ ಪುರಿಯಲ್ಲಿ ರಥಯಾತ್ರೆ ನಡೆಯುತ್ತದೆ. ಈ ರಥಯಾತ್ರೆಯ ಕೆಲವು ರೋಚಕ, ಕುತೂಹಲಕಾರಿ ವಿವರಗಳನ್ನು ಓದುಗರಿಗಾಗಿ ನೀಡಿದ್ದಾರೆ ಎಂ.ಎ.ದಯಾಶಂಕರ. ರಥೋತ್ಸವ, ರಥಯಾತ್ರೆಗಳು ಭಾರತದ ಎಲ್ಲಾ ದೇವಾಲಯಗಳಲ್ಲೂ ಅನೂಚನವಾಗಿ ನಡೆದು ಬಂದಿದೆ.…
-
ಜಗನ್ನಾಥ ಮಹಾತ್ಮೆ: ಧನಂಜಯನ ಗರ್ವಭಂಗ
1727ರ ಮಾತು. ಆಗ ಧನಂಜಯ ಮೆಹ್ತಾ ಎಂಬ ಹೆಸರು ಇಡೀ ಹೈದರಾಬಾದಿನಲ್ಲೇ ಜನಜನಿತ. ಮೆಹ್ತಾ ಆಗರ್ಭ ಶ್ರೀಮಂತ. ಮೂರು ತಲೆಮಾರು ಕುಳಿತು ತಿಂದರೂ ಕರಗದಷ್ಟು ಆಸ್ತಿ ಪಾಸ್ತಿ; ನಗ ನಾಣ್ಯ. ಆತ ಹೆಸರಿಗೆ ತಕ್ಕಂತೆ ಧನಂಜಯನೇ ಆಗಿದ್ದ! ತನ್ನ ಸಿರಿತನದ ಬಗ್ಗೆ ಸಹಜವಾಗಿಯೇ ಆತನಿಗೆ ಗರ್ವ ಮಿಶ್ರಿತ ಹೆಮ್ಮೆ ಇತ್ತು. ಇಂಥ ಧನಂಜಯ್ ಒಮ್ಮೆ ಕುಟುಂಬ ಸಮೇತನಾಗಿ ಜಗನ್ನಾಥ ಪುರಿ ಕ್ಷೇತ್ರಕ್ಕೆ ಬಂದ. ವೈಯಕ್ತಿಕವಾಗಿ ಹೇಳುವುದಾದರೆ ಧನಂಜಯನಿಗೆ ಜಗನ್ನಾಥನ ಮೇಲೆ ಹೇಳಿಕೊಳ್ಳುವಂಥ ನಂಬಿಕೆ ಏನೂ ಇರಲಿಲ್ಲ. ಅವನ…
-
ಮಹಿಳೆಯರಿಗೊಂದು ಕಿವಿಮಾತು
ಪದ್ಮಿನಿ ಬಾಲು ಅವರು ಮಹಿಳೆಯರು ತಮ್ಮ ದೈನಂದಿನ ಕ್ರಿಯೆಯಲ್ಲಿ ಆಧ್ಯಾತ್ಮಿಕ ಜೀವನವನ್ನು ಅಳವಡಿಸಿಕೊಳ್ಳುವ ಬಗ್ಗೆ ತಮ್ಮ ಅನುಭವವನ್ನು ಭಕ್ತಿವೇದಾಂತ ದರ್ಶನ ಓದುಗರಿಗೆ ನೀಡಿದ್ದಾರೆ. ಬೆಂಗಳೂರಿನ ಎಲ್ಲ ಬಡಾವಣೆಗಳಲ್ಲಿ ವಾಸಿಸುವ ಜನರೂ ಬಹಳ ಪುಣ್ಯವಂತರೆಂದು ನನ್ನ ಭಾವನೆ. ದೇವ ದೇವನು ಈ ಊರಿನ ಜನರ ಬಗ್ಗೆ ಬಹಳ ಕರುಣಾಮಯನು. ಇವರು ವಾಯು ಸೇವನೆಗೇ ಹೊರಡಲಿ, ಮನೆಗೆ ಸಾಮಾನುಗಳನ್ನು ತರುವ ಕೆಲಸದಲ್ಲಿರಲಿ, ಕಚೇರಿಗೆ ಸಮಯಕ್ಕೆ ತಲುಪಲು ಬಸ್ಸಿನ ಹಿಂದೆ ಓಡುತ್ತಿರಲಿ ಅಥವಾ ಮಕ್ಕಳ ಮನರಂಜಿಸಲು ಪಾರ್ಕಿಗೆ ತೆರಳಲಿ, ನೂರಾರು ದೇವಾಲಯಗಳಲ್ಲಿ…
-
ಮೂರ್ಖ ಸಂಸ್ಕೃತಿಯಲ್ಲಿ ಉನ್ನತ ಆನಂದ
ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ ಮತ್ತು ಅವರ ಕೆಲವು ಶಿಷ್ಯರ ನಡುವೆ ದಕ್ಷಿಣ ಆಫ್ರಿಕಾದ ಜೊಹಾನಸ್ಬರ್ಗ್ ನಲ್ಲಿ, ಅಕ್ಟೋಬರ್ 18, 1975ರಲ್ಲಿ ನಡೆದ ಸಂವಾದ. ಶಿಷ್ಯ : ಶ್ರೀಲ ಪ್ರಭುಪಾದ, ಜನರು ಕೆಲವು ಬಾರಿ ಟೀಕಿಸುತ್ತಾ ಹೇಳುತ್ತಾರೆ, “ನಿಮ್ಮ ವೈದಿಕ ಸಂಸ್ಕೃತಿಯು ಭಾರತದಲ್ಲಿ ಅತ್ಯಂತ ದೃಢವಾಗಿ ಸ್ಥಾಪಿತವಾಗಿತ್ತು. ಆದರೆ ಭಾರತವನ್ನು ಈಗ ಬಡ ಮತ್ತು ದುರದೃಷ್ಟವೆಂದು ಪರಿಗಣಿಸುತ್ತಾರೆ. ಆದುದರಿಂದ ನಾವು ಏಕೆ ವೈದಿಕ ಸಂಸ್ಕೃತಿಯನ್ನು ಗೌರವಿಸಬೇಕು? “ ಶ್ರೀಲ ಪ್ರಭುಪಾದ : ವಿಷಯ ಏನೆಂದರೆ,…
-
ಅಜಾಮಿಳನ ಜೀವನ ವೃತ್ತಾಂತ
ಕಾನ್ಯಕುಬ್ಜ ಎನ್ನುವ ಹೆಸರಿನ ನಗರದಲ್ಲಿ ಅಜಾಮಿಳ ಎಂಬೊಬ್ಬ ಬ್ರಾಹ್ಮಣನಿದ್ದನು. ಒಂದು ಸಲ ಈ ಬ್ರಾಹ್ಮಣ ಅಜಾಮಿಳನು ಹೂವು ಹಣ್ಣುಗಳನ್ನು ಕುಯ್ದು ತರಲು ಅರಣ್ಯಕ್ಕೆ ಹೋದನು. ಅವನು ಮನೆಗೆ ಹಿಂತಿರುಗುತ್ತಿದ್ದಾಗಿನ ಹಾದಿಯಲ್ಲಿ ಒಂದೆಡೆ ಒಬ್ಬ ನಾಚಿಕೆಗೆಟ್ಟ ಕಾಮುಕನು ವೇಶ್ಯೆಯೊಬ್ಬಳನ್ನು ಬಲವಾಗಿ ಆಲಂಗಿಸಿಕೊಂಡು ಚುಂಬಿಸುತ್ತಿದ್ದುದನ್ನು ಕಂಡನು. ಅ ವೇಶ್ಯೆಯು ಪಾನಮತ್ತಳಾಗಿದ್ದಳು. ಹಾಗಾಗಿ ಕಣ್ಣುಗಳು ತಿರುಗುತ್ತಿದ್ದವು. ಆಕೆಯ ವಸ್ತ್ರಗಳು ಸರಿದಿದ್ದವು. ಅಜಾಮಿಳನು ಅವಳನ್ನು ನೋಡಿದಾಗ, ಅವನ ಎದೆಯಾಳದಲ್ಲಿ ಸುಪ್ತವಾಗಿದ್ದ ಲೈಂಗಿಕ ಬಯಕೆಗಳು ಎಚ್ಚೆತ್ತವು. ಒಬ್ಬ ಸ್ತ್ರೀಯನ್ನು ಕಣ್ಣೆತ್ತಿ ಕೂಡ ನೋಡಬಾರದೆಂಬ ಶಾಸ್ತ್ರವಚನಗಳೇನೋ…
-
ಶ್ರೀಲ ಮಾಧವೇಂದ್ರ ಪುರಿ
ಶ್ರೀಲ ಮಾಧವೇಂದ್ರ ಪುರಿ ಅವರು ಶ್ರೀ ಚೈತನ್ಯರ ಆಧ್ಯಾತ್ಮಿಕ ಗುರುಗಳಾದ ಅದ್ವೈತ ಆಚಾರ್ಯ ಮತ್ತು ಈಶ್ವರ ಪುರಿ ಅವರ ಗುರುಗಳು. ಮಾಧವೇಂದ್ರರಿಗೆ ಮಾಧ್ವ ಸಂಪ್ರದಾಯದಲ್ಲಿ ದೀಕ್ಷೆ ನೀಡಿದವರು ಶ್ರೀ ಲಕ್ಷ್ಮೀಪತಿ ತೀರ್ಥರು. ಇತರೆ ಆಚಾರ್ಯರಂತೆ ಮಾಧವೇಂದ್ರರೂ ಹಲವಾರು ವರ್ಷಗಳ ಕಾಲ ದೇಶ ಪರ್ಯಟನೆ ಮಾಡಿದರು. ಕೊನೆಗೆ ಬಹುಕಾಲ ಅವರು ವೃಂದಾವನದಲ್ಲಿ ನೆಲೆಸಿದರು. ಅಲ್ಲಿ ಅವರಿಗೆ ಗೋಪಾಲ ಎಂಬ ಕೃಷ್ಣ ವಿಗ್ರಹ ದೊರೆಯಿತು. ಈ ವಿಗ್ರಹವನ್ನು ಇಂದಿಗೂ ರಾಜಸ್ಥಾನದ ನಾಥದ್ವಾರದಲ್ಲಿ “ಶ್ರೀನಾಥಜಿ” ಎಂಬ ಹೆಸರಿನಲ್ಲಿ ಪೂಜಿಸಲಾಗುತ್ತಿದೆ. ಒಮ್ಮೆ ಮಾಧವೇಂದ್ರರು…
-
ಬಗೆ ಬಗೆಯ ಮಾವಿನ ತಿನಿಸು
ಮೇ, ಜೂನ್ ತಿಂಗಳೆಂದರೆ ಮಾವಿನ ಕಾಯಿ, ಹಣ್ಣುಗಳ ಕಾಲ. ಮಾವು ನಮ್ಮ ಗೃಹಿಣಿಯ ಅಚ್ಚುಮೆಚ್ಚಿನ ಮಿತ್ರ. ಚಟ್ನಿ, ತೊಕ್ಕು, ಬರ್ಫಿ, ಗೊಜ್ಜು, ಚಿತ್ರಾನ್ನ ಸೇರಿದಂತೆ ಮಾವಿನ ಕಾಯಿ-ಹಣ್ಣಿನಿಂದ ರುಚಿರುಚಿಯಾದ ಪದಾರ್ಥಗಳನ್ನು ತಯಾರಿಸುವ ವಿಧಾನವನ್ನು ನಮ್ಮ ಗೃಹಲಕ್ಷ್ಮಿಯರಿಗಾಗಿ ಇಲ್ಲಿ ನೀಡಿದ್ದೇವೆ. ಮಾವಿನ ಹಣ್ಣಿನ ಬರ್ಫಿ ಬೇಕಾಗುವ ಪದಾರ್ಥಗಳು: ತಯಾರಿಸುವ ವಿಧಾನ: ಸಿಪ್ಪೆ ತೆಗೆದ ಮಾವಿನ ಹಣ್ಣನ್ನು ಚೆನ್ನಾಗಿ ಕಿವುಚಿ ರಸ ಹಿಂಡಿ. ಗೊರಟು ಬಿಸಾಡಿ. ತೆಂಗಿನ ಕಾಯಿ ತುರಿದು ಮಿಕ್ಸಿಯಲ್ಲಿ ರುಬ್ಬಿ. ಕಾಯಿ ತುರಿಯನ್ನು ಹಿಂಡಿ ಹಾಲು ತೆಗೆದಿಟ್ಟುಕೊಳ್ಳಿ.…
-
ಜೀವನದ ಉದ್ದೇಶ
ಬಸ್ನಲ್ಲೇ ನಡೆಯಿತು ಕೃಷ್ಣಪ್ರಜ್ಞೆಯ ಪ್ರಚಾರ! ಸುವ್ಯಕ್ತ ನರಸಿಂಹದಾಸ ಬಸ್ಸನ್ನು ಹತ್ತಿ ಕುಳಿತುಕೊಂಡಾಗ ಮೈಸೂರಿನಿಂದ ಬೆಂಗಳೂರಿಗೆ ಮೂರು ಘಂಟೆಯ ಪ್ರಯಾಣ ಹೇಗೆ ಕಳೆಯುವುದು ಎಂಬ ಆಲೋಚನೆ ನನಗೆ ಬಂದಿತು. ಸ್ವಲ್ಪವೇ ವಸ್ತುಗಳಿರುವಂತಹ ಚೀಲವನ್ನು ನನ್ನ ಎಡಗೈಯಲ್ಲಿ ಹಿಡಿದುಕೊಂಡು ಬಲಗೈಯಲ್ಲಿ ಬಸ್ಸಿನ ಟಿಕೇಟನ್ನು ಹಿಡಿದುಕೊಂಡು ಕೊರಳಲ್ಲಿ ಜಪಮಾಲೆಯ ಚೀಲವನ್ನು ಹಾಕಿಕೊಂಡಿದ್ದೆ. ಬಸ್ಸನ್ನು ಏರಿ ಸುತ್ತಲೂ ನೋಡಿದೆ. ಹಿಂದಿನ ಸೀಟುಗಳಲ್ಲಿ ಜನ ಹೆಚ್ಚಿಗೆಯಿಲ್ಲದ್ದರಿಂದ ಅಲ್ಲಿಯೇ ಕುಳಿತುಕೊಳ್ಳಲು ನಿರ್ಧರಿಸಿದೆ. ನನ್ನ ಸಾಮಾನುಗಳ ಕೈಚೀಲವನ್ನು ಪಕ್ಕದಲ್ಲಿರಿಸಿಕೊಂಡೆ. ಆಗ ಸಮಯ 11 ಘಂಟೆಯಾಗಿತ್ತು. ಇನ್ನು ಮೂರು…
-
ಆಂತರಿಕ ಬೆಳವಣಿಗೆ ಅಗತ್ಯ
ಸಂಸ್ಕೃತ ಮೂಲ – ಕಥಾಶತವಲ್ಲರೀ ಭಾಷಾನುವಾದ – ಪತಿತಪಾವನ ದಾಸ ಒಬ್ಬ ರಾಜನಿದ್ದ. ಅವನು ತನ್ನ ದೇಶವನ್ನು ಸುಖ ಸಮೃದ್ಧವನ್ನಾಗಿಸಲು ಬಯಸಿದ. ಅದಕ್ಕಾಗಿ ಅಹೋರಾತ್ರಿ ಶ್ರಮಿಸಿದ. ಪ್ರಜೆಗಳ ಸುಖ ಶಾಂತಿಗಾಗಿ ಅನೇಕ ವಿಧದ ವ್ಯವಸ್ಥೆಗಳನ್ನು ಅವನು ಮಾಡಿದನು. ಆದರೂ ಕೂಡ ಆ ದೇಶದಲ್ಲಿ ಅಪೇಕ್ಷಿತ ಪ್ರಮಾಣದಲ್ಲಿ ಸುಖ ಶಾಂತಿಗಳು ಕಾಣಿಸಲಿಲ್ಲ. ಆದ್ದರಿಂದ ರಾಜನು ತನ್ನ ಗುರುಗಳಾದ ಸನ್ಯಾಸಿಯೊಬ್ಬರ ಬಳಿ ಹೋದನು. “ಗುರುಗಳೇ, ಜನಗಳ ಸುಖಕ್ಕಾಗಿ ನಾನು ಅನೇಕ ವಿಧದ ವ್ಯವಸ್ಥೆ ಮಾಡಿದೆ. ಅನೇಕ ವಿಧದ ಅನುಕೂಲಗಳನ್ನು ಕಲ್ಪಿಸಿದೆ.…
-
ಶ್ರೀಲ ಬಲದೇವ ವಿದ್ಯಾಭೂಷಣ
ಶ್ರೀಲ ಬಲದೇವ ವಿದ್ಯಾಭೂಷಣರು ಏಳನೇ ಶತಮಾನದ ಅಂತ್ಯ ಅಥವಾ ಎಂಟನೇ ಶತಮಾನದ ಆರಂಭದಲ್ಲಿ (ಹುಟ್ಟಿದ ದಿನ ಜೂನ್ 8) ಒರಿಸ್ಸಾದಲ್ಲಿ ಜನಿಸಿದರು. ಚಿಕ್ಕ ವಯಸ್ಸಿಗೇ ಸಂಸ್ಕೃತ, ವ್ಯಾಕರಣ, ಕಾವ್ಯ, ತರ್ಕಶಾಸ್ತ್ರಗಳನ್ನು ಅಭ್ಯಾಸ ಮಾಡಿದರು. ನಂತರ ಅವರು ಅಲ್ಪಕಾಲದಲ್ಲೇ ಭಾರತದ ಉದ್ದಗಲಕ್ಕೂ ಸಂಚರಿಸಿದರು. ಹೀಗೆ ದೇಶ ಪರ್ಯಟನೆ ಮಾಡುವಾಗ ಅವರಿಗೆ ಶ್ರೀ ಮಧ್ವಾಚಾರ್ಯರ ಅನುಯಾಯಿಗಳ ಪರಿಚಯವಾಯಿತು. ಆ ಮೂಲಕ ಅವರಿಗೆ ಮಾಧ್ವ ಸಿದ್ಧಾಂತದಲ್ಲಿ ಆಸಕ್ತಿ ಮೂಡಿತು. ಬಳಿಕ ಅವರು ಮಾಧ್ವರ ಬೋಧನೆಗಳ ಅಧ್ಯಯನದಲ್ಲಿ ತೊಡಗಿದರು. ಮಾಧ್ವ ಸಿದ್ಧಾಂತದ ಸಮಗ್ರ…
-
ಶ್ರೀ ಅಕ್ಷೋಭ್ಯ ತೀರ್ಥರು
–ಮಾಧವಾನಂದ ದಾಸ ಮಧ್ವಾಚಾರ್ಯರ ನೇರ ಅನುಯಾಯಿಯಾಗಿ ಮಾಧ್ವ ಮಠದ ಪೀಠಾಲಂಕಾರ ಮಾಡಿದ ಕೊನೆಯ ಆಚಾರ್ಯರು ಅಕ್ಷೋಭ್ಯ ತೀರ್ಥರು. ವ್ಯಾಸತೀರ್ಥರು ರಚಿಸಿರುವ ‘ಜಯತೀರ್ಥ ವಿಜಯ’ ಕೃತಿಯಲ್ಲಿ ಅಕ್ಷೋಭ್ಯ ತೀರ್ಥರ ಲೀಲೆಗಳ ಕುರಿತು ವರ್ಣಿಸಲಾಗಿದೆ. ಆ ಕಾಲದಲ್ಲಿ ಮಾಯಾವಾದವನ್ನು ಬಲವಾಗಿ ಪ್ರತಿಪಾದಿಸುತ್ತಿದ್ದ ಹೆಸರಾಂತ ಆಚಾರ್ಯರಾದ ವಿದ್ಯಾರಣ್ಯರಿಗೂ ಅಕ್ಷೋಭ್ಯ ತೀರ್ಥರಿಗೂ ಮುಖಾಮುಖಿ ಚರ್ಚೆ ನಡೆಯಿತು. ಆ ಸುದೀರ್ಘ, ಐತಿಹಾಸಿಕ ಚರ್ಚೆಯಲ್ಲಿ ವಿದ್ಯಾರಣ್ಯರನ್ನು ಅಕ್ಷೋಭ್ಯರು ಸೋಲಿಸಿದರು. ದೇವೋತ್ತಮ ಪರಮ ಪುರುಷ ಶ್ರೀಕೃಷ್ಣನೇ ಈ ಜಗದ ಪರಮ, ನಿತ್ಯ ಸತ್ಯ. ಉಳಿದೆಲ್ಲಾ ಜೀವಿಗಳು ಆತನ…
-
ಏಕಾದಶಿ ಅಡುಗೆಗಳು
ಬೇಯಿಸಿದ ಬಾಳೆ ಹಣ್ಣು ಬೇಕಾಗುವ ಪದಾರ್ಥಗಳು: ತಯಾರಿಸುವ ವಿಧಾನ: ಬಾಳೆ ಹಣ್ಣನ್ನು ಮೂರು ಇಂಚು ಉದ್ದದ ಚೂರುಗಳನ್ನಾಗಿ ಕತ್ತರಿಸಿ. ಸಕ್ಕರೆ, ಕಾಯಿ ತುರಿ, ಏಲಕ್ಕಿಯನ್ನು ಸಣ್ಣ ಉರಿಯಲ್ಲಿ ಬೇಯಿಸಿ. ಸಕ್ಕರೆ ಪಾಕವಾಗಿ ಕಾಯಿ ತುರಿಯೊಂದಿಗೆ ಚೆನ್ನಾಗಿ ಬೆರೆತು ಹದವಾದ ಮಿಶ್ರಣವಾಗುವ ತನಕ ಬೇಯಿಸಿ. ನಂತರ ಒಲೆಯಿಂದ ಕೆಳಗಿಳಿಸಿ. ಈಗ ಬಾಳೆ ಹಣ್ಣಿನ ಒಂದೊಂದೇ ಹೋಳನ್ನು ಪ್ರತ್ಯೇಕವಾಗಿ ತೆಗೆದುಕೊಂಡು, ನಾಜೂಕಾಗಿ ಸಕ್ಕರೆ-ಕಾಯಿ ತುರಿ ಪಾಕದೊಳಕ್ಕೆ ಮುಳುಗಿಸಿ. ಹಾಗೆಯೇ ತೆಳುವಾದ ಕಡ್ಡಿಯ ಸಹಾಯದಿಂದ ಬಾಳೆ ಹಣ್ಣುನ್ನು ಹೊರ ತೆಗೆದು, ಇನ್ನೊಂದು…
-
ಪಶ್ಚಾತ್ತಾಪದ ಪ್ರಾಯಶ್ಚಿತ್ತ
ದಕ್ಷಯಜ್ಞ : ಭಾಗ-2 ವೇದವ್ಯಾಸ ವಿರಚಿತ ಭಾಗವತವು 12 ಸ್ಕಂಧಗಳ, 18000 ಶ್ಲೋಕಗಳಿಂದ ಕೂಡಿದ್ದು ನಿಗಮ ಕಲ್ಪತರೋರ್ ಗಲಿತಂ ಫಲಂ ವೇದವೆಂಬ ಕಲ್ಪವೃಕ್ಷದಿಂದ ಹುಟ್ಟಿದ ಮಾಗಿದ ಫಲ ಎಂದೇ ಬಣ್ಣಿಸಲಾಗಿದೆ. ಈ ಲೇಖನ ಮಾಲಿಕೆಯಲ್ಲಿ ಶುಕ ಮುಖದಿಂದ ಹರಿದ ಭಾಗವತವನ್ನು ಆಧರಿಸಿದ ಕಥೆಗಳನ್ನು ಓದುತ್ತೀರಿ. ಪ್ರಸ್ತುತ ಕಥೆಯನ್ನು ಭಾಗವತದ ನಾಲ್ಕನೇ ಸ್ಕಂಧದ ಒಂದರಿಂದ ಏಳನೆಯ ಅಧ್ಯಾಯಗಳನ್ನು ಆಧರಿಸಿ ಯುವ ಸಾಹಿತಿ ಡಾ.ಬಿ.ಆರ್.ಸುಹಾಸ್ರರವರು ಭಕ್ತಿವೇದಾಂತ ದರ್ಶನದ ಓದುಗರಿಗೆ ಬರೆದುಕೊಟ್ಟಿದ್ದಾರೆ. ಮೈತ್ರೇಯರು ಹೇಳುತ್ತಿದ್ದ ಕಥೆಯನ್ನು ಕೇಳಿ ವಿದುರನಿಗೆ ಆಶ್ವರ್ಯವಾಯಿತು. “ಗುಣವಂತರಲ್ಲಿ…
-
ಧ್ರುವ ಮಹಾರಾಜ
ಸ್ವಾಯಂಭುವ ಮನುವಿನ ಮಗ ರಾಜಾ ಉತ್ತಾನಪಾದನಿಗೆ ಸುನೀತಿ ಹಾಗೂ ಸುರುಚಿ ಎನ್ನುವ ಹೆಸರಿನ ಇಬ್ಬರು ರಾಣಿಯರಿದ್ದರು. ಸುರುಚಿಯು ರಾಜನಿಗೆ ಹೆಚ್ಚು ಪ್ರಿಯವಾಗಿದ್ದಳು. ಧ್ರುವ ಎನ್ನುವ ಹೆಸರಿನ ಪುತ್ರನನ್ನು ಪಡೆದಿದ್ದ ಸುನೀತಿ ಎಂದರೆ ರಾಜನಿಗೆ ಅಷ್ಟಕಷ್ಟೆ. ಒಂದು ದಿನ ಉತ್ತಾನಪಾದ ರಾಜನು ಸುರುಚಿಯ ಮಗನಾದ ಉತ್ತಮನನ್ನು ತೊಡೆಯಮೇಲೆ ಕುಳ್ಳಿರಿಸಿಕೊ೦ಡು ಮುದ್ದಾಡುತ್ತಿದ್ದನು. ಧ್ರುವನು ತಾನೂ ತಂದೆಯ ತೊಡೆಯನ್ನೇರಲು ಹೋದನು. ಇದನ್ನು ನೋಡಿದ ಅವನ ಮಲತಾಯಿ ಸುರುಚಿಗೆ ವಿಪರೀತ ಹೊಟ್ಟೆಕಿಚ್ಚು ಹುಟ್ಟಿತು. ಆಗ ಆಕೆ ಸಿಟ್ಟಿನಿಂದ ಧ್ರುವನನ್ನು ಬೈದಳು. ತನ್ನ ಮಲತಾಯಿಯು…
-
ಸಾಕ್ಷಿ ಗೋಪಾಲ
-ಡಾ.ಎನ್.ಕೆ.ರಾಮಶೇಷನ್ ಇಡೀ ಜಗತ್ತಿಗೆ ಭಾರತದ ಅದ್ವಿತೀಯ ಕೊಡುಗೆ – ವೇದೋಪನಿಷತ್ತುಗಳು, ರಾಮಾಯಣ, ಮಹಾಭಾರತ, ಭಗವದ್ಗೀತೆ, ವಿಷ್ಣು ಸಹಸ್ರ ನಾಮಾದಿ ಅನೇಕ ಸ್ತೋತ್ರಗಳು, ಭಾಗವತ, ಇತ್ಯಾದಿ ಇತ್ಯಾದಿ. ಭಕ್ತಿ ರಸಸ್ವರದಿ ಭಾಗವತ ಗ್ರಂಥ ಉನ್ನತಿಯನ್ನು ಮೆರೆಸುವ ಭಕ್ತಿ ಕಾವ್ಯ ಕೂಡ ಆಗಬಲ್ಲುದು. ಶ್ರೀ ಮನ್ಮಹಾವಿಷ್ಣುವಿನ, ಶ್ರೀ ಕೃಷ್ಣನ, ದಿವ್ಯವಾದ ಕಥೆ-ಸ್ತುತಿ, ಕುರಿತಂತೆ ಶ್ರವಣ (ಆಲಿಸುವುದು) ಸ್ಮರಣಂ (ನೆನಪು ಮಾಡಿಕೊಳ್ಳುವುದು), ಕೀರ್ತನಂ (ಭಗವಂತನ ಗುಣಗಾನ), ದೇವ ದೇವೋತ್ತಮನನ್ನು ಅಚಲವಾಗಿ ಸೇವಿಸುವುದು, (ಪಾದ ಸೇವನ), ಆತನನ್ನು ಅರ್ಚಿಸುವುದು, ಪೂಜಿಸುವುದು (ಅರ್ಚನ), ಆತನಿಗೆ…
-
ಅರಿಷ್ಟಾಸುರ ವಧೆ
ಬಾಲಕೃಷ್ಣ ದಿನಕ್ಕೊಂದು ದಿವ್ಯ ಲೀಲೆ ಪ್ರದರ್ಶಿಸುತ್ತಾ ಇಡೀ ವೃಂದಾವನವನ್ನು ತನ್ನ ಜಾಲದಲ್ಲಿ ಬಂಧಿಸಿದ್ದ. ಇಡೀ ವೃಂದಾವನ ಕೃಷ್ಣಮಯ. ಎಲ್ಲಿ ನೋಡಿದರೂ ತುಂಟ ಕೃಷ್ಣ ಮತ್ತು ಅವನ ಹಿಂಬಾಲಕ ಗೋಪಾಲಕರ ಕೇಕೆ. ಗೋಪಿಕೆಯರ ಕಿಲಕಿಲ. ಹಸುಕರುಗಳ ಕೊರಳ ಗಂಟೆ ನಾದ. ಮೋಹನಮುರಳಿಯ ಮಂಜುಳ ನಿನಾದ. ಹೀಗೆ ವೃಂದಾವನ ಶ್ರೀ ಕೃಷ್ಣನ ಬಾಲ ಲೀಲೆಗಳನ್ನು ನೋಡಿ ನಲಿಯುತ್ತಾ ಸಂತಸದಲ್ಲಿ ಮುಳುಗೇಳುತ್ತಿದ್ದರೆ, ಅತ್ತ ಬಾಲಕೃಷ್ಣನನ್ನು ಹೇಗಾದರೂ ಮಾಡಿ ಮುಗಿಸಬೇಕೆಂದು ರಾಕ್ಷಸ ಗಣ ದಿನಕ್ಕೊಂದು ತಂತ್ರ ಹಣೆಯುತ್ತಲೇ ಇತ್ತು. ಇಂಥ ಒಂದು ಷಡ್ಯಂತ್ರದ…
-
ಶ್ರೀ ಮಾಧವ ತೀರ್ಥ
ಮಧ್ವಾಚಾರ್ಯರ ನಾಲ್ವರು ಪ್ರಮುಖ ಅನುಯಾಯಿಗಳ ಪೈಕಿ ಶ್ರೀ ಮಾಧವ ತೀರ್ಥರೂ ಒಬ್ಬರು. ಶ್ರೀ ಮಧ್ವಾಚಾರ್ಯರ ನಂತರ ಕ್ರಮವಾಗಿ ಪದ್ಮನಾಭ ತೀರ್ಥ, ನರಹರಿ ತೀರ್ಥ, ಮಾಧವ ತೀರ್ಥ ಮತ್ತು ಅಕ್ಷೋಭ್ಯ ತೀರ್ಥರು ಪೀಠವನ್ನು ಅಲಂಕರಿಸಿದರು. ಚತುವೇರ್ದಗಳ ಮೇಲೆ ವಿದ್ವತ್ಪೂರ್ಣ ವ್ಯಾಖ್ಯಾನವನ್ನು ರಚಿಸಿದ್ದು ಮಾಧವ ತೀರ್ಥರ ಅತಿ ಮುಖ್ಯ ಸಾಧನೆ. ಆಂಧ್ರಪ್ರದೇಶದಲ್ಲಿ ಪವಿತ್ರ ಗೋದಾವರಿ ನದಿ ತೀರದ ಹಳ್ಳಿಯೊಂದರಲ್ಲಿ, ಆ ಕಾಲದ ಮಹಾನ್ ವಿದ್ವಾಂಸ ಕೃಷ್ಣಶಾಸ್ತ್ರಿ ಎಂಬ ಬ್ರಾಹ್ಮಣರ ಪುತ್ರನಾಗಿ ಮಾಧವ ತೀರ್ಥರ ಜನನವಾಯಿತು. ಇದಕ್ಕೂ ಮೊದಲು ಪದ್ಮನಾಭ ತೀರ್ಥರೂ…
-
ವಿವಿಧ ತಿನಿಸು
ಪಾನಕ ಬೇಕಾಗುವ ಪದಾರ್ಥಗಳು: ತಯಾರಿಸುವ ವಿಧಾನ: ಬೆಲ್ಲದ ಹುಡಿಯನ್ನು ನೀರಿನಲ್ಲಿ ಬೆರೆಸಿ, ಸಂಪೂರ್ಣವಾಗಿ ಕರಗಿಸಿ. ಮಿಶ್ರಣವನ್ನು ಶುಭ್ರವಾದ ಬಟ್ಟೆಯಲ್ಲಿ ಸೋಸಿ. ಅದಕ್ಕೆ ಲಿಂಬೆ ರಸ, ಒಣ ಶುಂಠಿ ಹುಡಿ, ಏಲಕ್ಕಿ, ಕಾಳು ಮೆಣಸಿನ ಹುಡಿ ಮತ್ತು ಉಪ್ಪು ಬೆರೆಸಿ. ತಣ್ಣಗಿನ ರುಚಿ ರುಚಿ ಪಾನಕವನ್ನು ಎಲ್ಲರಿಗೂ ಹಂಚಿ. ಪಾಲನಕದ ವಿಶೇಷವೆಂದರೆ ಇದನ್ನು ಬೇಸಿಗೆಯಲ್ಲಿ ಬಾಯಾರಿಕೆ ತಣಿಸುವ ಹಾಗೂ ಅತಿಥಿಗಳನ್ನು ಸ್ವಾಗತಿಸುವ ಪೇಯವಾಗಿ ನೀಡಬಹುದು. ದಾಹ ತಣಿಸಿ, ದಣಿವು ನಿವಾರಿಸಿ ದೈಹಿಕ ಶಕ್ತಿಯನ್ನೂ ಹೆಚ್ಚಿಸುವ ಶಕ್ತಿ ಈ ಪಾನಕಕ್ಕಿದೆ.…
-
ಶ್ರೀರಾಮ ಕ್ಷೇತ್ರಗಳು
ಭಾರತದ ಯಾವ ಭಾಗಕ್ಕೇ ಹೋದರು, ಅಲ್ಲಿ ಒಂದಲ್ಲಾ ಒಂದು ರಾಮನ ಸಂಬಂಧ ಕ್ಷೇತ್ರವೆಂದು ಜನ ಹೇಳುತ್ತಾರೆ. ಸೀತೆಯ ಸೆರಗು ತಾಕಿದ ಜಾಗವೆಂದೂ, ಹನುಮಂತನು ಬಂದಿದ್ದನೆಂದೋ, ರಾಮ ಬಾಣ ಬಿಟ್ಟ ಸ್ಥಳವೆಂದೋ, ಏನೋ ಸಂಬಂಧ ಹೇಳಿಕೊಳ್ಳುತ್ತಾರೆ. ಶತಮಾನಗಳಿಂದ ಪ್ರಸಿದ್ಧವಾಗಿರುವ ಹಲವು ಕ್ಷೇತ್ರಗಳನ್ನು ಮಾತ್ರ ಇಲ್ಲಿ ಪರಿಚಯಿಸಲಾಗಿದೆ. ಅಯೋಧ್ಯೆ: ಈಗಿನ ಉತ್ತರ ಪ್ರದೇಶದ ಫೈಜಿಯಾಬಾದ್ ಜಿಲ್ಲೆಯಲ್ಲಿದೆ. ಪವಿತ್ರ ಸರಯೂ ನದಿ ಇಲ್ಲಿ ಹರಿಯುತ್ತದೆ. ರಘುವಂಶದರಸರ ರಾಜಧಾನಿ. ರಾಮನ ಜನ್ಮಸ್ಥಳ. ನೂರಾರು ದೇವಾಲಯಗಳಿವೆ. ಭಾರತದ ಪುರಾತನವಾದ 7 ಮೋಕ್ಷ ನಗರಿಗಳಲ್ಲಿ ಅಯೋಧ್ಯೆ…
-
ರಾಧಾಕುಂಡ ಮತ್ತು ಗೋವರ್ಧನ
ವ್ರಜಮಂಡಲ ಪರಿಕ್ರಮ- ಭಾಗ:6 -ಕೃಷ್ಣದಾಸ ರಾಧಾ ಕುಂಡ: ಮಥುರಾದಿಂದ 26 ಕಿ.ಮೀ ದೂರದಲ್ಲಿ ರಾಧಾ ಕುಂಡವಿದೆ. ಅತ್ಯಂತ ಪ್ರಶಾಂತ ಮತ್ತು ಮನೋಹರ ತಾಣವಿದು. ಗೌಡೀಯ ವೈಷ್ಣವರ ಪಾಲಿಗೆ ವ್ರಜ ಪ್ರದೇಶದಲ್ಲೇ ಅತ್ಯಂತ ಪವಿತ್ರ ತಾಣ ಇದಾಗಿತ್ತು. ಇಲ್ಲಿ ಎರಡು ಪವಿತ್ರ ಕೊಳಗಳಿವೆ. ಈ ಸ್ಥಳವಿರುವ ಪಟ್ಟಣವನ್ನು ಅರಿಷ್ಟವನ ಎಂದು ಕರೆಯಲಾಗುತ್ತದೆ. ಅರಿಷ್ಟಾಸುರ ರಾಕ್ಷಸನನ್ನು ಕೃಷ್ಣ ಸಂಹರಿಸಿದ್ದು ಇಲ್ಲೇ. ರಾಧಾಕೃಷ್ಣರು ದಿನದ ವೇಳೆ ತಮ್ಮ ಲೀಲೆಗಳನ್ನು ಪ್ರದರ್ಶಿಸುತ್ತಿದ್ದುದು ಇಲ್ಲೇ. ಬಹಳ ವರ್ಷಗಳ ತನಕ ಈ ಪ್ರದೇಶಗಳ ಬಗ್ಗೆ ಯಾರಿಗೂ…
-
ಭಗವದ್ಗೀತೆಯ ಇತಿಹಾಸ
ಶ್ರೀಮತಿ ಪದ್ಮಿನಿ ಬಾಲು ಮಾನವನು ಭೌದ್ಧಿಕವಾಗಿ ಮುಂದುವರೆಯುತ್ತಿರುವೆನೆಂದು ಭಾವಿಸುತ್ತಿರುವ ಪ್ರಸ್ತುತ ಪ್ರಪಂಚದಲ್ಲಿ ಯಾವುದನ್ನೇ ಆಗಲಿ, “ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣೀಕರಿಸಿ ನೋಡು” ಎನ್ನುವ ಜನರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗೆ ವೈಜ್ಞಾನಿಕವಾಗಿ ಮತ್ತು ವೈಚಾರಿಕವಾಗಿ ವಿಶ್ಲೇಷಣೆ ಮಾಡಿದ ನಂತರವೇ ಯಾವ ಸತ್ಯವನ್ನಾದರೂ ಒಪ್ಪಿಕೊಳ್ಳಬೇಕೆಂದು ವಾದ ಮಾಡುವ ಜನರಿಗೆ ಶ್ರೀಲ ಪ್ರಭುಪಾದರು “ಶ್ರೀ ಮದ್ಭಗವದ್ಗೀತಾ ಯಥಾರೂಪ” ಮುಂತಾದ ಅಸಂಖ್ಯಾತ ಗ್ರಂಥಗಳಲ್ಲಿ ತಮ್ಮ ವ್ಯಾಖ್ಯಾನಗಳ ಮೂಲಕ ಸದುತ್ತರವನ್ನಿದ್ದಾರೆ. ಕುರುಕ್ಷೇತ್ರ ಯುದ್ಧವು ನಿಜವಾಗಿ ನಡೆದಿರಬಹುದೇ, ಭಗವಾನ್ ಶ್ರೀಕೃಷ್ಣನು ಅರ್ಜುನನಿಗೆ ಬೋಧಿಸಿದ ಭಗವದ್ಗೀತೆಯು ಮಾನವ ಕುಲಕ್ಕೆ…