ವೇದವಾಕ್ಯ

ಓ ಮನ್ಮಥನೇ, ನನ್ನ ಮನದಿಂದ ಹೊರಟುಹೋಗು. ಅದು ಈಗ ಶ್ರೀ ಮುಕುಂದನ ಚರಣ ಕಮಲದ ನಿವಾಸವಾಗಿದೆ. ನೀನು ಈಗಾಗಲೇ ಶಿವನ ಜ್ವಲಿಸುವ ನೋಟದಿಂದ ಭಸ್ಮವಾಗಿರುವೆ. ಆದುದರಿಂದ ನೀನು ಏಕೆ ಶ್ರೀ ಮುರಾರಿಯ ಚಕ್ರದ ಶಕ್ತಿಯನ್ನು ಮರೆತಿರುವೆ?

– ಮುಕುಂದಮಾಲಾ, ಸ್ತೋತ್ರ 22

* * * *

ಆದಿದೇವನಾದ ಗೋವಿಂದನನ್ನು ನಾನು ಪೂಜಿಸುವೆ. ಅವನು ಶ್ಯಾಮಸುಂದರ. ಗ್ರಹಿಸಲಾರದಷ್ಟು ಅಸಂಖ್ಯ ವೈಶಿಷ್ಟ್ಯಗಳನ್ನು ಉಳ್ಳ ಸ್ವಯಂ ಕೃಷ್ಣ. ಶುದ್ಧ ಭಕ್ತರು ಪ್ರೀತಿಯ ಮುಲಾಮು ಹಚ್ಚಿರುವ ಭಕ್ತಿಯ ಕಣ್ಣುಗಳಿಂದ ತಮ್ಮ ಹೃದಯಗಳಲ್ಲಿ ಅವನನ್ನು ನೋಡುವರು.

– ಬ್ರಹ್ಮಸಂಹಿತೆ

* * * *

ಗುಡುಗು ಮತ್ತು ಮಿಂಚಿನೊಂದಿಗೆ ಆಗಮಿಸುವ ಮೋಡಗಳು ಆಕಾಶದ ಮೇಲೆಲ್ಲ ಜೀವನದ ಭರವಸೆಯ ಚಿತ್ರವನ್ನು ನೀಡುತ್ತವೆ. ಕಡು ನೀಲಿ ಮೋಡಗಳಿಂದ ಆವರಿಸಿರುವ ಆಗಸವು ಕೃತಕವಾಗಿ ಉಡುಗೆ ತೊಟ್ಟಂತೆ ಕಾಣುತ್ತಿದೆ. ಮೋಡದೊಳಗಿನ ಗುಡುಗು ಮತ್ತು ಮಿಂಚು ಹೊಸ ಬದುಕಿನ ಆಸೆಯ ಚಿಹ್ನೆಗಳಾಗಿವೆ.

– ಭಾಗವತ ಜ್ಯೋತಿ, ಶ್ಲೋಕ 1

* * * *

ಹೇ ಪರಮ ಶಕ್ತನಾದ ಭಗವಂತನೇ, ಭೂಮಿಯ ಮೇಲೆ, ಸ್ವರ್ಗದಲ್ಲಿ, ನರಕದಲ್ಲಿ ಹಾಗೂ ವಾಸ್ತವವಾಗಿ ಸಕಲ ದಿಕ್ಕುಗಳಲ್ಲಿಯೂ ನೀನು ಪ್ರಕಟಿಸುವ ನಿನ್ನ ಅನಂತಾನಂತ ಶಕ್ತಿಯನ್ನು ನನಗೆ ವಿವರಿಸಿ ಹೇಳು. ನಾನು ಪವಿತ್ರಸ್ಥಳಗಳ ಆಶ್ರಯತಾಣವಾದ ನಿನ್ನ ಪಾದಕಮಲಗಳಿಗೆ ವಿನೀತನಾಗಿ ನಮಸ್ಕರಿಸುತ್ತೇನೆ.

– ಶ್ರೀಮದ್‌ ಭಾಗವತ 11.16.5

* * * *

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi