ಲೇಖನಗಳು


  • ಜಗನ್ನಾಥ ಮಹಾತ್ಮೆ: ಧನಂಜಯನ ಗರ್ವಭಂಗ

    ಜಗನ್ನಾಥ ಮಹಾತ್ಮೆ: ಧನಂಜಯನ ಗರ್ವಭಂಗ

    1727ರ ಮಾತು. ಆಗ ಧನಂಜಯ ಮೆಹ್ತಾ ಎಂಬ ಹೆಸರು ಇಡೀ ಹೈದರಾಬಾದಿನಲ್ಲೇ ಜನಜನಿತ. ಮೆಹ್ತಾ ಆಗರ್ಭ ಶ್ರೀಮಂತ. ಮೂರು ತಲೆಮಾರು ಕುಳಿತು ತಿಂದರೂ ಕರಗದಷ್ಟು ಆಸ್ತಿ ಪಾಸ್ತಿ; ನಗ ನಾಣ್ಯ. ಆತ ಹೆಸರಿಗೆ ತಕ್ಕಂತೆ ಧನಂಜಯನೇ ಆಗಿದ್ದ! ತನ್ನ ಸಿರಿತನದ ಬಗ್ಗೆ ಸಹಜವಾಗಿಯೇ ಆತನಿಗೆ ಗರ್ವ ಮಿಶ್ರಿತ ಹೆಮ್ಮೆ ಇತ್ತು. ಇಂಥ ಧನಂಜಯ್ ಒಮ್ಮೆ ಕುಟುಂಬ ಸಮೇತನಾಗಿ ಜಗನ್ನಾಥ ಪುರಿ ಕ್ಷೇತ್ರಕ್ಕೆ ಬಂದ. ವೈಯಕ್ತಿಕವಾಗಿ ಹೇಳುವುದಾದರೆ ಧನಂಜಯನಿಗೆ ಜಗನ್ನಾಥನ ಮೇಲೆ ಹೇಳಿಕೊಳ್ಳುವಂಥ ನಂಬಿಕೆ ಏನೂ ಇರಲಿಲ್ಲ. ಅವನ…


  • ಮಹಿಳೆಯರಿಗೊಂದು ಕಿವಿಮಾತು

    ಮಹಿಳೆಯರಿಗೊಂದು ಕಿವಿಮಾತು

    ಪದ್ಮಿನಿ ಬಾಲು ಅವರು ಮಹಿಳೆಯರು ತಮ್ಮ ದೈನಂದಿನ ಕ್ರಿಯೆಯಲ್ಲಿ ಆಧ್ಯಾತ್ಮಿಕ ಜೀವನವನ್ನು ಅಳವಡಿಸಿಕೊಳ್ಳುವ ಬಗ್ಗೆ ತಮ್ಮ ಅನುಭವವನ್ನು ಭಕ್ತಿವೇದಾಂತ ದರ್ಶನ ಓದುಗರಿಗೆ ನೀಡಿದ್ದಾರೆ. ಬೆಂಗಳೂರಿನ ಎಲ್ಲ ಬಡಾವಣೆಗಳಲ್ಲಿ ವಾಸಿಸುವ ಜನರೂ ಬಹಳ ಪುಣ್ಯವಂತರೆಂದು ನನ್ನ ಭಾವನೆ. ದೇವ ದೇವನು ಈ ಊರಿನ ಜನರ ಬಗ್ಗೆ ಬಹಳ ಕರುಣಾಮಯನು. ಇವರು ವಾಯು ಸೇವನೆಗೇ ಹೊರಡಲಿ, ಮನೆಗೆ ಸಾಮಾನುಗಳನ್ನು ತರುವ ಕೆಲಸದಲ್ಲಿರಲಿ, ಕಚೇರಿಗೆ ಸಮಯಕ್ಕೆ ತಲುಪಲು ಬಸ್ಸಿನ ಹಿಂದೆ ಓಡುತ್ತಿರಲಿ ಅಥವಾ ಮಕ್ಕಳ ಮನರಂಜಿಸಲು ಪಾರ್ಕಿಗೆ ತೆರಳಲಿ, ನೂರಾರು ದೇವಾಲಯಗಳಲ್ಲಿ…


  • ಶ್ರೀಲ ಮಾಧವೇಂದ್ರ ಪುರಿ

    ಶ್ರೀಲ ಮಾಧವೇಂದ್ರ ಪುರಿ

    ಶ್ರೀಲ ಮಾಧವೇಂದ್ರ ಪುರಿ ಅವರು ಶ್ರೀ ಚೈತನ್ಯರ ಆಧ್ಯಾತ್ಮಿಕ ಗುರುಗಳಾದ ಅದ್ವೈತ ಆಚಾರ್ಯ ಮತ್ತು ಈಶ್ವರ ಪುರಿ ಅವರ ಗುರುಗಳು. ಮಾಧವೇಂದ್ರರಿಗೆ ಮಾಧ್ವ ಸಂಪ್ರದಾಯದಲ್ಲಿ ದೀಕ್ಷೆ ನೀಡಿದವರು ಶ್ರೀ ಲಕ್ಷ್ಮೀಪತಿ ತೀರ್ಥರು. ಇತರೆ ಆಚಾರ್ಯರಂತೆ ಮಾಧವೇಂದ್ರರೂ ಹಲವಾರು ವರ್ಷಗಳ ಕಾಲ ದೇಶ ಪರ್ಯಟನೆ ಮಾಡಿದರು. ಕೊನೆಗೆ ಬಹುಕಾಲ ಅವರು ವೃಂದಾವನದಲ್ಲಿ ನೆಲೆಸಿದರು. ಅಲ್ಲಿ ಅವರಿಗೆ ಗೋಪಾಲ ಎಂಬ ಕೃಷ್ಣ ವಿಗ್ರಹ ದೊರೆಯಿತು. ಈ ವಿಗ್ರಹವನ್ನು ಇಂದಿಗೂ ರಾಜಸ್ಥಾನದ ನಾಥದ್ವಾರದಲ್ಲಿ “ಶ್ರೀನಾಥಜಿ” ಎಂಬ ಹೆಸರಿನಲ್ಲಿ ಪೂಜಿಸಲಾಗುತ್ತಿದೆ. ಒಮ್ಮೆ ಮಾಧವೇಂದ್ರರು…


  • ಜೀವನದ ಉದ್ದೇಶ

    ಜೀವನದ ಉದ್ದೇಶ

    ಬಸ್‌ನಲ್ಲೇ ನಡೆಯಿತು ಕೃಷ್ಣಪ್ರಜ್ಞೆಯ ಪ್ರಚಾರ! ಸುವ್ಯಕ್ತ ನರಸಿಂಹದಾಸ ಬಸ್ಸನ್ನು ಹತ್ತಿ ಕುಳಿತುಕೊಂಡಾಗ ಮೈಸೂರಿನಿಂದ ಬೆಂಗಳೂರಿಗೆ ಮೂರು ಘಂಟೆಯ ಪ್ರಯಾಣ ಹೇಗೆ ಕಳೆಯುವುದು ಎಂಬ ಆಲೋಚನೆ ನನಗೆ ಬಂದಿತು. ಸ್ವಲ್ಪವೇ ವಸ್ತುಗಳಿರುವಂತಹ ಚೀಲವನ್ನು ನನ್ನ ಎಡಗೈಯಲ್ಲಿ ಹಿಡಿದುಕೊಂಡು ಬಲಗೈಯಲ್ಲಿ ಬಸ್ಸಿನ ಟಿಕೇಟನ್ನು ಹಿಡಿದುಕೊಂಡು ಕೊರಳಲ್ಲಿ ಜಪಮಾಲೆಯ ಚೀಲವನ್ನು ಹಾಕಿಕೊಂಡಿದ್ದೆ. ಬಸ್ಸನ್ನು ಏರಿ ಸುತ್ತಲೂ ನೋಡಿದೆ. ಹಿಂದಿನ ಸೀಟುಗಳಲ್ಲಿ ಜನ ಹೆಚ್ಚಿಗೆಯಿಲ್ಲದ್ದರಿಂದ ಅಲ್ಲಿಯೇ ಕುಳಿತುಕೊಳ್ಳಲು ನಿರ್ಧರಿಸಿದೆ. ನನ್ನ ಸಾಮಾನುಗಳ ಕೈಚೀಲವನ್ನು ಪಕ್ಕದಲ್ಲಿರಿಸಿಕೊಂಡೆ. ಆಗ ಸಮಯ 11 ಘಂಟೆಯಾಗಿತ್ತು. ಇನ್ನು ಮೂರು…


  • ಶ್ರೀಲ ಬಲದೇವ ವಿದ್ಯಾಭೂಷಣ

    ಶ್ರೀಲ ಬಲದೇವ ವಿದ್ಯಾಭೂಷಣ

    ಶ್ರೀಲ ಬಲದೇವ ವಿದ್ಯಾಭೂಷಣರು ಏಳನೇ ಶತಮಾನದ ಅಂತ್ಯ ಅಥವಾ ಎಂಟನೇ ಶತಮಾನದ ಆರಂಭದಲ್ಲಿ (ಹುಟ್ಟಿದ ದಿನ ಜೂನ್‌ 8) ಒರಿಸ್ಸಾದಲ್ಲಿ ಜನಿಸಿದರು. ಚಿಕ್ಕ ವಯಸ್ಸಿಗೇ ಸಂಸ್ಕೃತ, ವ್ಯಾಕರಣ, ಕಾವ್ಯ, ತರ್ಕಶಾಸ್ತ್ರಗಳನ್ನು ಅಭ್ಯಾಸ ಮಾಡಿದರು. ನಂತರ ಅವರು ಅಲ್ಪಕಾಲದಲ್ಲೇ ಭಾರತದ ಉದ್ದಗಲಕ್ಕೂ ಸಂಚರಿಸಿದರು. ಹೀಗೆ ದೇಶ ಪರ್ಯಟನೆ ಮಾಡುವಾಗ ಅವರಿಗೆ ಶ್ರೀ ಮಧ್ವಾಚಾರ್ಯರ ಅನುಯಾಯಿಗಳ ಪರಿಚಯವಾಯಿತು. ಆ ಮೂಲಕ ಅವರಿಗೆ ಮಾಧ್ವ ಸಿದ್ಧಾಂತದಲ್ಲಿ ಆಸಕ್ತಿ ಮೂಡಿತು. ಬಳಿಕ ಅವರು ಮಾಧ್ವರ ಬೋಧನೆಗಳ ಅಧ್ಯಯನದಲ್ಲಿ ತೊಡಗಿದರು. ಮಾಧ್ವ ಸಿದ್ಧಾಂತದ ಸಮಗ್ರ…


  • ಶ್ರೀ ಅಕ್ಷೋಭ್ಯ ತೀರ್ಥರು

    ಶ್ರೀ ಅಕ್ಷೋಭ್ಯ ತೀರ್ಥರು

    –ಮಾಧವಾನಂದ ದಾಸ ಮಧ್ವಾಚಾರ್ಯರ ನೇರ ಅನುಯಾಯಿಯಾಗಿ ಮಾಧ್ವ ಮಠದ ಪೀಠಾಲಂಕಾರ ಮಾಡಿದ ಕೊನೆಯ ಆಚಾರ್ಯರು ಅಕ್ಷೋಭ್ಯ ತೀರ್ಥರು. ವ್ಯಾಸತೀರ್ಥರು ರಚಿಸಿರುವ ‘ಜಯತೀರ್ಥ ವಿಜಯ’ ಕೃತಿಯಲ್ಲಿ ಅಕ್ಷೋಭ್ಯ ತೀರ್ಥರ ಲೀಲೆಗಳ ಕುರಿತು ವರ್ಣಿಸಲಾಗಿದೆ. ಆ ಕಾಲದಲ್ಲಿ ಮಾಯಾವಾದವನ್ನು ಬಲವಾಗಿ ಪ್ರತಿಪಾದಿಸುತ್ತಿದ್ದ ಹೆಸರಾಂತ ಆಚಾರ್ಯರಾದ ವಿದ್ಯಾರಣ್ಯರಿಗೂ ಅಕ್ಷೋಭ್ಯ ತೀರ್ಥರಿಗೂ ಮುಖಾಮುಖಿ ಚರ್ಚೆ ನಡೆಯಿತು. ಆ ಸುದೀರ್ಘ, ಐತಿಹಾಸಿಕ ಚರ್ಚೆಯಲ್ಲಿ ವಿದ್ಯಾರಣ್ಯರನ್ನು ಅಕ್ಷೋಭ್ಯರು ಸೋಲಿಸಿದರು. ದೇವೋತ್ತಮ ಪರಮ ಪುರುಷ ಶ್ರೀಕೃಷ್ಣನೇ ಈ ಜಗದ ಪರಮ, ನಿತ್ಯ ಸತ್ಯ. ಉಳಿದೆಲ್ಲಾ ಜೀವಿಗಳು ಆತನ…


  • ಪಶ್ಚಾತ್ತಾಪದ ಪ್ರಾಯಶ್ಚಿತ್ತ

    ಪಶ್ಚಾತ್ತಾಪದ ಪ್ರಾಯಶ್ಚಿತ್ತ

    ದಕ್ಷಯಜ್ಞ : ಭಾಗ-2 ವೇದವ್ಯಾಸ ವಿರಚಿತ ಭಾಗವತವು 12 ಸ್ಕಂಧಗಳ, 18000 ಶ್ಲೋಕಗಳಿಂದ ಕೂಡಿದ್ದು ನಿಗಮ ಕಲ್ಪತರೋರ್‌ ಗಲಿತಂ ಫಲಂ ವೇದವೆಂಬ ಕಲ್ಪವೃಕ್ಷದಿಂದ ಹುಟ್ಟಿದ ಮಾಗಿದ ಫಲ ಎಂದೇ ಬಣ್ಣಿಸಲಾಗಿದೆ. ಈ ಲೇಖನ ಮಾಲಿಕೆಯಲ್ಲಿ ಶುಕ ಮುಖದಿಂದ ಹರಿದ ಭಾಗವತವನ್ನು ಆಧರಿಸಿದ ಕಥೆಗಳನ್ನು ಓದುತ್ತೀರಿ. ಪ್ರಸ್ತುತ ಕಥೆಯನ್ನು ಭಾಗವತದ ನಾಲ್ಕನೇ ಸ್ಕಂಧದ ಒಂದರಿಂದ ಏಳನೆಯ ಅಧ್ಯಾಯಗಳನ್ನು ಆಧರಿಸಿ ಯುವ ಸಾಹಿತಿ ಡಾ.ಬಿ.ಆರ್‌.ಸುಹಾಸ್‌ರರವರು ಭಕ್ತಿವೇದಾಂತ ದರ್ಶನದ ಓದುಗರಿಗೆ ಬರೆದುಕೊಟ್ಟಿದ್ದಾರೆ. ಮೈತ್ರೇಯರು ಹೇಳುತ್ತಿದ್ದ ಕಥೆಯನ್ನು ಕೇಳಿ ವಿದುರನಿಗೆ ಆಶ್ವರ್ಯವಾಯಿತು. “ಗುಣವಂತರಲ್ಲಿ…


  • ಸಾಕ್ಷಿ ಗೋಪಾಲ

    ಸಾಕ್ಷಿ ಗೋಪಾಲ

    -ಡಾ.ಎನ್‌.ಕೆ.ರಾಮಶೇಷನ್‌ ಇಡೀ ಜಗತ್ತಿಗೆ ಭಾರತದ ಅದ್ವಿತೀಯ ಕೊಡುಗೆ – ವೇದೋಪನಿಷತ್ತುಗಳು, ರಾಮಾಯಣ, ಮಹಾಭಾರತ, ಭಗವದ್ಗೀತೆ, ವಿಷ್ಣು ಸಹಸ್ರ ನಾಮಾದಿ ಅನೇಕ ಸ್ತೋತ್ರಗಳು, ಭಾಗವತ, ಇತ್ಯಾದಿ ಇತ್ಯಾದಿ. ಭಕ್ತಿ ರಸಸ್ವರದಿ ಭಾಗವತ ಗ್ರಂಥ ಉನ್ನತಿಯನ್ನು ಮೆರೆಸುವ ಭಕ್ತಿ ಕಾವ್ಯ ಕೂಡ ಆಗಬಲ್ಲುದು. ಶ್ರೀ ಮನ್ಮಹಾವಿಷ್ಣುವಿನ, ಶ್ರೀ ಕೃಷ್ಣನ, ದಿವ್ಯವಾದ ಕಥೆ-ಸ್ತುತಿ, ಕುರಿತಂತೆ ಶ್ರವಣ (ಆಲಿಸುವುದು) ಸ್ಮರಣಂ (ನೆನಪು ಮಾಡಿಕೊಳ್ಳುವುದು), ಕೀರ್ತನಂ (ಭಗವಂತನ ಗುಣಗಾನ), ದೇವ ದೇವೋತ್ತಮನನ್ನು ಅಚಲವಾಗಿ ಸೇವಿಸುವುದು, (ಪಾದ ಸೇವನ), ಆತನನ್ನು ಅರ್ಚಿಸುವುದು, ಪೂಜಿಸುವುದು (ಅರ್ಚನ), ಆತನಿಗೆ…


  • ಶ್ರೀ ಮಾಧವ ತೀರ್ಥ

    ಶ್ರೀ ಮಾಧವ ತೀರ್ಥ

    ಮಧ್ವಾಚಾರ್ಯರ ನಾಲ್ವರು ಪ್ರಮುಖ ಅನುಯಾಯಿಗಳ ಪೈಕಿ ಶ್ರೀ ಮಾಧವ ತೀರ್ಥರೂ ಒಬ್ಬರು. ಶ್ರೀ ಮಧ್ವಾಚಾರ್ಯರ ನಂತರ ಕ್ರಮವಾಗಿ ಪದ್ಮನಾಭ ತೀರ್ಥ,  ನರಹರಿ ತೀರ್ಥ, ಮಾಧವ ತೀರ್ಥ ಮತ್ತು ಅಕ್ಷೋಭ್ಯ ತೀರ್ಥರು ಪೀಠವನ್ನು ಅಲಂಕರಿಸಿದರು. ಚತುವೇರ್ದಗಳ ಮೇಲೆ ವಿದ್ವತ್‌ಪೂರ್ಣ ವ್ಯಾಖ್ಯಾನವನ್ನು ರಚಿಸಿದ್ದು ಮಾಧವ ತೀರ್ಥರ ಅತಿ ಮುಖ್ಯ ಸಾಧನೆ. ಆಂಧ್ರಪ್ರದೇಶದಲ್ಲಿ ಪವಿತ್ರ ಗೋದಾವರಿ ನದಿ ತೀರದ ಹಳ್ಳಿಯೊಂದರಲ್ಲಿ, ಆ ಕಾಲದ ಮಹಾನ್‌ ವಿದ್ವಾಂಸ ಕೃಷ್ಣಶಾಸ್ತ್ರಿ ಎಂಬ ಬ್ರಾಹ್ಮಣರ ಪುತ್ರನಾಗಿ ಮಾಧವ ತೀರ್ಥರ ಜನನವಾಯಿತು. ಇದಕ್ಕೂ ಮೊದಲು ಪದ್ಮನಾಭ ತೀರ್ಥರೂ…


  • ಶ್ರೀರಾಮ ಕ್ಷೇತ್ರಗಳು

    ಶ್ರೀರಾಮ ಕ್ಷೇತ್ರಗಳು

    ಭಾರತದ ಯಾವ ಭಾಗಕ್ಕೇ ಹೋದರು, ಅಲ್ಲಿ ಒಂದಲ್ಲಾ ಒಂದು ರಾಮನ ಸಂಬಂಧ ಕ್ಷೇತ್ರವೆಂದು ಜನ ಹೇಳುತ್ತಾರೆ. ಸೀತೆಯ ಸೆರಗು ತಾಕಿದ ಜಾಗವೆಂದೂ, ಹನುಮಂತನು ಬಂದಿದ್ದನೆಂದೋ, ರಾಮ ಬಾಣ ಬಿಟ್ಟ ಸ್ಥಳವೆಂದೋ, ಏನೋ ಸಂಬಂಧ ಹೇಳಿಕೊಳ್ಳುತ್ತಾರೆ. ಶತಮಾನಗಳಿಂದ ಪ್ರಸಿದ್ಧವಾಗಿರುವ ಹಲವು ಕ್ಷೇತ್ರಗಳನ್ನು ಮಾತ್ರ ಇಲ್ಲಿ ಪರಿಚಯಿಸಲಾಗಿದೆ. ಅಯೋಧ್ಯೆ: ಈಗಿನ ಉತ್ತರ ಪ್ರದೇಶದ ಫೈಜಿಯಾಬಾದ್‌ ಜಿಲ್ಲೆಯಲ್ಲಿದೆ. ಪವಿತ್ರ ಸರಯೂ ನದಿ ಇಲ್ಲಿ ಹರಿಯುತ್ತದೆ. ರಘುವಂಶದರಸರ ರಾಜಧಾನಿ. ರಾಮನ ಜನ್ಮಸ್ಥಳ. ನೂರಾರು ದೇವಾಲಯಗಳಿವೆ. ಭಾರತದ ಪುರಾತನವಾದ 7 ಮೋಕ್ಷ ನಗರಿಗಳಲ್ಲಿ ಅಯೋಧ್ಯೆ…