-
ರಾಧಾಕುಂಡ ಮತ್ತು ಗೋವರ್ಧನ

ವ್ರಜಮಂಡಲ ಪರಿಕ್ರಮ- ಭಾಗ:6 -ಕೃಷ್ಣದಾಸ ರಾಧಾ ಕುಂಡ: ಮಥುರಾದಿಂದ 26 ಕಿ.ಮೀ ದೂರದಲ್ಲಿ ರಾಧಾ ಕುಂಡವಿದೆ. ಅತ್ಯಂತ ಪ್ರಶಾಂತ ಮತ್ತು ಮನೋಹರ ತಾಣವಿದು. ಗೌಡೀಯ ವೈಷ್ಣವರ ಪಾಲಿಗೆ ವ್ರಜ ಪ್ರದೇಶದಲ್ಲೇ ಅತ್ಯಂತ ಪವಿತ್ರ ತಾಣ ಇದಾಗಿತ್ತು. ಇಲ್ಲಿ ಎರಡು ಪವಿತ್ರ ಕೊಳಗಳಿವೆ. ಈ ಸ್ಥಳವಿರುವ ಪಟ್ಟಣವನ್ನು ಅರಿಷ್ಟವನ ಎಂದು ಕರೆಯಲಾಗುತ್ತದೆ. ಅರಿಷ್ಟಾಸುರ ರಾಕ್ಷಸನನ್ನು ಕೃಷ್ಣ ಸಂಹರಿಸಿದ್ದು ಇಲ್ಲೇ. ರಾಧಾಕೃಷ್ಣರು ದಿನದ ವೇಳೆ ತಮ್ಮ ಲೀಲೆಗಳನ್ನು ಪ್ರದರ್ಶಿಸುತ್ತಿದ್ದುದು ಇಲ್ಲೇ. ಬಹಳ ವರ್ಷಗಳ ತನಕ ಈ ಪ್ರದೇಶಗಳ ಬಗ್ಗೆ ಯಾರಿಗೂ…
-
ಭಗವದ್ಗೀತೆಯ ಇತಿಹಾಸ

ಶ್ರೀಮತಿ ಪದ್ಮಿನಿ ಬಾಲು ಮಾನವನು ಭೌದ್ಧಿಕವಾಗಿ ಮುಂದುವರೆಯುತ್ತಿರುವೆನೆಂದು ಭಾವಿಸುತ್ತಿರುವ ಪ್ರಸ್ತುತ ಪ್ರಪಂಚದಲ್ಲಿ ಯಾವುದನ್ನೇ ಆಗಲಿ, “ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣೀಕರಿಸಿ ನೋಡು” ಎನ್ನುವ ಜನರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗೆ ವೈಜ್ಞಾನಿಕವಾಗಿ ಮತ್ತು ವೈಚಾರಿಕವಾಗಿ ವಿಶ್ಲೇಷಣೆ ಮಾಡಿದ ನಂತರವೇ ಯಾವ ಸತ್ಯವನ್ನಾದರೂ ಒಪ್ಪಿಕೊಳ್ಳಬೇಕೆಂದು ವಾದ ಮಾಡುವ ಜನರಿಗೆ ಶ್ರೀಲ ಪ್ರಭುಪಾದರು “ಶ್ರೀ ಮದ್ಭಗವದ್ಗೀತಾ ಯಥಾರೂಪ” ಮುಂತಾದ ಅಸಂಖ್ಯಾತ ಗ್ರಂಥಗಳಲ್ಲಿ ತಮ್ಮ ವ್ಯಾಖ್ಯಾನಗಳ ಮೂಲಕ ಸದುತ್ತರವನ್ನಿದ್ದಾರೆ. ಕುರುಕ್ಷೇತ್ರ ಯುದ್ಧವು ನಿಜವಾಗಿ ನಡೆದಿರಬಹುದೇ, ಭಗವಾನ್ ಶ್ರೀಕೃಷ್ಣನು ಅರ್ಜುನನಿಗೆ ಬೋಧಿಸಿದ ಭಗವದ್ಗೀತೆಯು ಮಾನವ ಕುಲಕ್ಕೆ…
-
ಮಾನಿನಿಯ ದೇಹತ್ಯಾಗ

ದಕ್ಷಯಜ್ಞದ ಕಥೆ : ಭಾಗ-1 ವೇದವ್ಯಾಸ ವಿರಚಿತ ಭಾಗವತವು 12 ಸ್ಕಂಧಗಳ, 18,000 ಶ್ಲೋಕಗಳಿಂದ ಕೂಡಿದ್ದು – ನಿಗಮ ಕಲ್ಪತರೋರ್ ಗಲಿತಂ ಫಲಂ – ವೇದವೆಂಬ ಕಲ್ಪವೃಕ್ಷದಿಂದ ಹುಟ್ಟಿದ ಮಾಗಿದ ಫಲ ಎಂದೇ ಬಣ್ಣಿಸಲಾಗಿದೆ. ಈ ಲೇಖನ ಮಾಲಿಕೆಯಲ್ಲಿ ಶುಕ ಮುಖದಿಂದ ಹರಿದ ಭಾಗವತವನ್ನು ಆಧರಿಸಿದ ಕಥೆಗಳನ್ನು ಓದುತ್ತೀರಿ. ಪ್ರಸ್ತುತ ಕಥೆಯನ್ನು ಭಾಗವತದ ನಾಲ್ಕನೇ ಸ್ಕಂಧದ ಒಂದರಿಂದ ಏಳನೆಯ ಅಧ್ಯಾಯಗಳನ್ನು ಆಧರಿಸಿ ಯುವ ಸಾಹಿತಿ ಡಾ. ಬಿ.ಆರ್. ಸುಹಾಸ್ ರವರು ಭಕ್ತಿವೇದಾಂತ ದರ್ಶನದ ಓದುಗರಿಗೆ ಬರೆದುಕೊಟ್ಟಿದ್ದಾರೆ. ಮೈತ್ರೇಯರು…
-
ಶ್ರೀಲ ನಿತ್ಯಾನಂದ ಪ್ರಭು

ಐಹಿಕ ಜಗತ್ತಿನ ಕತ್ತಲೆಯನ್ನು ಹೋಗಲಾಡಿಸಲು ಈ ಜಗತ್ತಿನಲ್ಲಿ ಶ್ರೀ ಚೈತನ್ಯ ಮಹಾಪ್ರಭುಗಳು ಅವತರಿಸಿ ಸೂರ್ಯನಂತೆ ಬೆಳಗಿದರು. ಕೃಷ್ಣ ನಾಮ ಸಂಕೀರ್ತನೆಯನ್ನು ಎಲ್ಲೆಡೆಯೂ ಹರಡಿದರು. ಇವರಂತೆಯೇ ಶ್ರೀಲ ನಿತ್ಯಾನಂದ ಪ್ರಭುಗಳ ಅವತಾರವಾಗಿ ಲೋಕ ಕಲ್ಯಾಣವಾಯಿತು. ಇವರ ಪ್ರೇಮ ಭಕ್ತಿಯ ಕೀರ್ತಿಯು ಆಚಂದ್ರಾರ್ಕವಾಗಿ ಬೆಳಗಿತು. ಪ್ರಸ್ತುತ ಆ ಸಂದರ್ಭದಲ್ಲಿ ಸೂರ್ಯ ಚಂದ್ರರಿಬ್ಬರೂ ಏಕಕಾಲದಲ್ಲಿ ಉದಿಸಿದ್ದಾರೆ ಎಂಬ ಮಾತು ಜನಜನಿತವಾಗಿತ್ತು. ಶ್ರೀ ಚೈತನ್ಯರು ಶ್ರೀಕೃಷ್ಣನ ಅವತಾರವಾದರೆ, ಶ್ರೀ ನಿತ್ಯಾನಂದ ಪ್ರಭುಗಳು ಶ್ರೀ ಬಲರಾಮನ ಅವತಾರವಾಗಿದ್ದರು. ರಾಧಾ ದೇಶದ ಏಕಚಕ್ರಾ ಎಂಬ ಗ್ರಾಮದಲ್ಲಿ…
-
ಶ್ರೀಕೃಷ್ಣ – ಸುದಾಮ ಸಮಾಗಮ

ವೇದವ್ಯಾಸ ವಿರಚಿತ ಭಾಗವತವು 12 ಸ್ಕಂಧಗಳ, 18,000 ಶ್ಲೋಕಗಳಿಂದ ಕೂಡಿದ್ದು – ನಿಗಮ ಕಲ್ಪತರೋರ್ ಗಲಿತಂ ಫಲಂ – ವೇದವೆಂಬ ಕಲ್ಪವೃಕ್ಷದಿಂದ ಹುಟ್ಟಿದ ಮಾಗಿದ ಫಲ ಎಂದೇ ಬಣ್ಣಿಸಲಾಗಿದೆ. ಈ ಲೇಖನ ಮಾಲಿಕೆಯಲ್ಲಿ ಶುಕ ಮುಖದಿಂದ ಹರಿದ ಭಾಗವತವನ್ನು ಆಧರಿಸಿದ ಕಥೆಗಳನ್ನು ಓದುತ್ತೀರಿ. ಪ್ರಸ್ತುತ ಕಥೆಯನ್ನು ಭಾಗವತದ ಹತ್ತನೇ ಸ್ಕಂಧದ 80-81ನೇ ಅಧ್ಯಾಯವನ್ನು ಆಧರಿಸಿ ಸೀತಾರಾಮ್ ಮಯ್ಯ- ದಯಾಶಂಕರ ಅವರು ಓದುಗರಿಗೆ ಬರೆದುಕೊಟ್ಟಿದ್ದಾರೆ. ಸೂರ್ಯ ಮತ್ತೆ ಹುಟ್ಟುತ್ತಿದ್ದಾನೆ. ಹಕ್ಕಿಗಳ ಕಲರವ, ಬೆಳಿಗ್ಗೆಗಳಾಗುವುದು ಬೆಳಕಾಗುವುದು, ಸೃಷ್ಟಿನಿಯಮ. ಎಲ್ಲರಿಗೂ ಬೆಳಕಿನ…
-
ರಥಯಾತ್ರೆ:ಕೃಷ್ಣಭಕ್ತಿಯ ಮಹಾಜಾತ್ರೆ

-ದಯಾಶಂಕರ ಕುರುಕ್ಷೇತ್ರದ ಯುದ್ಧ ಮುಗಿದಿದೆ. ಕೃಷ್ಣ, ಸುಭದ್ರೆ, ಬಲರಾಮರನ್ನು ನೋಡಲು ಕಾತರಿಸಿ, ಬಂದ ಗೋಪಗೋಪಿಯರ ಹಿಂಡೊಂದು ಶ್ರೀಕೃಷ್ಣನನ್ನು ಸುತ್ತುವರಿದಿದೆ. ವನಮಾಲಿ, ಗೋಗಾಹಿ, ಗೋಪಬಾಲ ಗೋಕುಲ ಕೃಷ್ಣನ ಬಗ್ಗೆ ಅತೀವ ಭಕ್ತಿಪ್ರೇಮ ತುಂಬಿದ್ದ ಗೋಪಿಯರು, ಗೋಪರು ಕೃಷ್ಣ ಬಲರಾಮರನ್ನು, ಗೋಕುಲ-ವೃಂದಾವನಕ್ಕೆ ಬರುವಂತೆ ಕರೆಯುತ್ತಿದ್ದಾರೆ. “ಭುವನೇಂದ್ರನಾದ, ರಾಜನಾದ ಶ್ರೀಕೃಷ್ಣನನ್ನು ನಾವೊಲ್ಲೆವು! ಅದೇ ಗೋಪಾಲಕೃಷ್ಣನನ್ನು ನಾವು ಕಾಣಬಯಸುತ್ತೇವೆ” ಎಂದು ಸ್ವತಃ ಶ್ರೀರಾಧಾರಾಣಿ ಹೇಳುತ್ತಿದ್ದಾರೆ. ಎಲ್ಲರಲ್ಲೂ ಬಾವೋದ್ವೇಗ. ಕೃಷ್ಣ ಬಲರಾಮ, ಸುಭದ್ರೆಯರು, ವೃಂದಾವನಕ್ಕೆ ಬರಲು ಒಪ್ಪಿದರು. ಆನಂದ ತುಂದಿಲರಾದ ಗೋಪಗೋಪಿಯರು, ಶ್ರೀಕೃಷ್ಣ ಬಲರಾಮ…
-
ಶ್ರೀ ನರಹರಿ ತೀರ್ಥರು

ಶುದ್ಧ ಭಕ್ತನಲ್ಲಿ 26 ಗುಣಗಳು ಅವಶ್ಯವಾಗಿರಬೇಕು ಎಂದು ಸನಾತನ ಗೋಸ್ವಾಮಿ ಅವರಿಗೆ ನೀಡಿದ ಬೋಧನೆಯಲ್ಲಿ ಶ್ರೀ ಚೈತನ್ಯ ಮಹಾಪ್ರಭುಗಳು ಹೇಳಿದ್ದಾರೆ. ಈ ಪೈಕಿ ಒಂದು ಗುಣ ದಕ್ಷತೆ. ಅಂದರೆ ಶುದ್ಧ ಭಕ್ತನಾದವನು ದಕ್ಷನಾಗಿರಬೇಕು. ಏಕ ಕಾಲಕ್ಕೆ ಹಲವಾರು ಕ್ಷೇತ್ರಗಳಲ್ಲಿ ಸಾಮರ್ಥ್ಯ ಮೆರೆಯುವ ದಕ್ಷತೆ ಆತನಿಗಿರಬೇಕು. ಗುರು ಪರಂಪರೆಯಲ್ಲಿ ಪದ್ಮನಾಭ ತೀರ್ಥರ ನಂತರ ಬರುವ ಶ್ರೀ ನರಹರಿ ತೀರ್ಥರು, ಚೈತನ್ಯರು ತಿಳಿಸಿದ ಎಲ್ಲಾ ಸದ್ಗುಣಗಳನ್ನು ಹೊ೦ದಿದ್ದ ಶುದ್ಧ ಭಕ್ತರು. ರಾಜ್ಯಾಡಳಿತದಿ೦ದ ರಣರ೦ಗದಲ್ಲಿ ಹೋರಾಡುವವರೆಗೆ, ಮಹಾನ್ ಗ್ರಂಥಗಳ ರಚನೆಯಿಂದ ಮಾಧ್ವ…
-
ಬಾಲ ನಿಮಾಯ್ ಭಾಗ-2

ಯುಗಾವತಾರಿ ಶ್ರೀಚೈತನ್ಯ ಮಹಾಪ್ರಭು -ಡಾ.ಬಿ.ಆರ್.ಸುಹಾಸ್ ಕೃಷ್ಣ ವರ್ಣಂ ತ್ವಿಷಾಕೃಷ್ಣಂ ಸಂಗೋಪಾಂಗಾಸ್ತ್ರ ಪಾರ್ಶದಂ| ಯಜ್ಞೈಃ ಸಂಕೀರ್ತನ ಪ್ರಾಯೈರ್ ಯಜಂತಿ ಹಿ ಸಮೇಧಸಃ || (ಭಾಗವತ 11.5.32) ಮಹಾನ್ ಅವತಾರಿ ಕಲಿಯುಗದಲ್ಲಿ ಸಂಕೀರ್ತನ ಯಜ್ಞವನ್ನು ಪ್ರಚಾರ ಮಾಡುತ್ತಾನೆ ಎಂಬ ಭವಿಷ್ಯವನ್ನು ಭಾಗವತವು ನುಡಿದಿತ್ತು. ಅದರ ಅನುಸಾರವಾಗಿ ಮತ್ತು ದುಷ್ಟರ ಶಿಕ್ಷೆ ಮತ್ತು ಶಿಷ್ಟರ ರಕ್ಷಣೆಗಾಗಿ ಶ್ರೀ ಚೈತನ್ಯ ಮಹಾಪ್ರಭುಗಳು ಅವತರಿಸಿದರು. ಅವರು ಮಾಡಿದ ದುಷ್ಟ ಸಂಹಾರ ವಿಭಿನ್ನ ರೀತಿಯದ್ದು. ಕಲಿಯುಗದಲ್ಲಿ ಪ್ರತಿಯೊಬ್ಬನಲ್ಲೂ ದುಷ್ಟ ಅಂಶಗಳಿವೆ. ಅವುಗಳನ್ನು ಸಂಕೀರ್ತನ ಪ್ರಚಾರದ ಮೂಲಕ…
-
ವ್ರಜಮಂಡಲ ಪರಿಕ್ರಮ – ಭಾಗ-2

-ಕೃಷ್ಣದಾಸ ವ್ರಜಮಂಡಲ ಪರಿಕ್ರಮದ ಮಹತ್ವ, ವೃಂದಾವನದ ಮಹಾತ್ಮೆ, ಅಲ್ಲಿನ ಕೆಲವು ಪ್ರಮುಖ ದೇವಾಲಯಗಳ ಬಗ್ಗೆ ಹಿಂದಿನ ಸಂಚಿಕೆಯಲ್ಲಿ ನಿಮಗೆ ಮಾಹಿತಿ ನೀಡಿದ್ದೇವೆ. ಈ ಸಂಚಿಕೆಯಲ್ಲಿ ವೃಂದಾನವದಲ್ಲಿ ನೀವು ನೋಡಬೇಕಾದ ಇನ್ನೂ ಕೆಲವು ದೇವಾಲಯಗಳ ಬಗ್ಗೆ ಸ್ಥೂಲ ಮಾಹಿತಿ ನೀಡುತ್ತಿದ್ದೇವೆ. ಶ್ರೀ ಕೃಷ್ಣ ಬಲರಾಮ ಮಂದಿರ: ಈ ದೇವಾಲಯದ ಶ್ರೀಲ ಪ್ರಭುಪಾದರು 1976ರಲಿ ಸ್ಥಾಪಿಸಿದರು. ಗೌರ ನಿತಾಯ್, ಕೃಷ್ಣ ಬಲರಾಮ ಮತ್ತು ರಾಧಾ ಶ್ಯಾಮಸುಂದರ ವಿಗ್ರಹಗಳು ಇಲ್ಲಿವೆ. ಎಡಭಾಗದ ಮಂಟಪದಲ್ಲಿ ಗೌರ ನಿತಾಯ್ ವಿಗ್ರಹದ ಕೆಳಗೆ ಶ್ರೀಲ ಪ್ರಭುಪಾದ…
-
ವರಾಹಾವತಾರ

ಹಿರಣ್ಯಾಕ್ಷ ಸಂಹಾರ –ಶ್ರೀ ಬೆನಕ ವೇದವ್ಯಾಸ ವಿರಚಿತ ಭಾಗವತವು 12 ಸಂಪುಟಗಳ, 18,000 ಶ್ಲೋಕಗಳಿಂದ ಕೂಡಿದ್ದು – ನಿಗಮ ಕಲ್ಪ ತರೋರ್ ಗಲಿತಂ ಫಲಂ – ವೇದವೆಂಬ ಕಲ್ಪವೃಕ್ಷದಿಂದ ಹುಟ್ಟಿದ ಮಾಗಿದ ಫಲ ಎಂದೇ ಬಣ್ಣಿಸಲಾಗಿದೆ. ಈ ಲೇಖನ ಮಾಲಿಕೆಯಲ್ಲಿ ಶುಕ ಮುಖದಿಂದ ಹರಿದ ಭಾಗವತವನ್ನು ಆಧರಿಸಿದ ಕಥೆಗಳನ್ನು ಓದುತ್ತೀರಿ. ಪ್ರಸ್ತುತ ಕಥೆಯನ್ನು ಭಾಗವತದ ಮೂರನೇ ಸ್ಕಂಧವನ್ನು ಆಧರಿಸಿ ಶ್ರೀ ಬೆನಕ ರವರು ಭಕ್ತಿವೇದಾಂತ ದರ್ಶನದ ಓದುಗರಿಗೆ ಬರೆದುಕೊಟ್ಟಿದ್ದಾರೆ. ಭಗವಾನ್ ಶ್ರೀಕೃಷ್ಣನು ಭಕ್ತಜನ ರಕ್ಷಣೆಗಾಗಿ ಮೊರೆಯಿಟೊಡೆ ಅವತರಿಸಿ…
