-
ರಘುನಾಥದಾಸರು

ಸುಂದರ ಪತ್ನಿ, ಲಕ್ಷಾಂತರ ರೂಪಾಯಿಗಳ ಆಸ್ತಿ, ಕೈಗೊಂದು ಕಾಲಿಗೊಂದು ಆಳು, ಐಷಾರಾಮಿ ಜೀವನ – ಇವೆಲ್ಲವನ್ನೂ ಪಡೆಯಬೇಕೆಂಬುದು ಜನಸಾಮಾನ್ಯನ ಕನಸು. ಆದ್ದರಿಂದಲೇ ಅವನು ‘ಜನ ಸಾಮಾನ್ಯ’̤ ಲೌಕಿಕ ಆಸೆಗಳನ್ನು ದೂರ ಮಾಡಿ ತ್ಯಾಗವೇ ಜೀವನದ ಆಧಾರ, ವೈರಾಗ್ಯವೇ ಭಗವದ್ಭಕ್ತಿಯ ಕುರುಹು ಎಂದು ಬಗೆದು ಪರಮ ಪುರುಷನಲ್ಲಿಯೇ ತಲ್ಲೀನನಾದವನೇ ಮಹಾತ್ಮ. ಶ್ರೀ ಚೈತನ್ಯರ ಶಿಷ್ಯರೆಲ್ಲರೂ ಅಂತಹ ಮಹಾತ್ಮರೇ. ಸ್ವತಃ ಶ್ರೀ ಚೈತನ್ಯರು ‘ವೈರಾಗ್ಯಾ ವಿದ್ಯ ನಿಜ ಭಕ್ತಿಯೋಗ’ ಎಂದು ಬೋಧಿಸಿದರು. ಆ ಆದರ್ಶಕ್ಕೆ ತಕ್ಕ ಹಾಗೆ ತಮ್ಮ ಜೀವನವನ್ನು…
-
ಧರ್ಮ-ಪ್ರಶ್ನೆ

ವೇದವ್ಯಾಸ ವಿರಚಿತ ಮಹಾಭಾರತದ ಗ್ರಂಥಾವಲೋಕನ ಮಾಡುತ್ತಾ ಮುಂದುವರಿದಂತೆ ಅತ್ಯಪರೂಪದ ಭಾಗವೊಂದು ಗೋಚರವಾಗುವುದು. ಪಾಂಡವರು ಕೌರವರೊಡನೆ ದ್ಯೂತವಾಡಿ ತಮ್ಮ ರಾಜ್ಯಕೋಶ ಕಳೆದುಕೊಂಡು ವನವಾಸದಲ್ಲಿರುವಾಗ ಸ್ವತಃ ಯಮಧರ್ಮರಾಜನಿಂದ ಪರೀಕ್ಷೆಗೊಳಗಾಗಬೇಕಾದ ಘಟನೆಯಿಂದ ವಿದ್ವತ್ಪೂರ್ಣ ಪ್ರಶ್ನೋತ್ತರವೊಂದು ಯಕ್ಷರೂಪಿ ಯಮಧರ್ಮರಾಯ ಹಾಗೂ ಧರ್ಮರಾಯನ ನಡುವೆ ನಡೆದಿರುವುದು, ಜಗತ್ತಿಗೆ ಮಾರ್ಗದರ್ಶನ ನೀಡಿರುವುದು ಪ್ರಸ್ತುತ ಲೇಖನ. ಒಂದೊಮ್ಮೆ ಬ್ರಾಹ್ಮಣನೊಬ್ಬನು ತನ್ನಯಜ್ಞ ಯಾಗಾದಿಗಳಲ್ಲಿ ನಿರತನಾಗಿ ವನವಾಸಿಯಾಗಿದ್ದಾಗ – ಯಜ್ಞಾಗ್ನಿ ಉತ್ಪಾದಿಸುವ ‘ಅರಣಿ’ಯನ್ನು ಪಕ್ಕದ ಮರದ ಕೊಂಬೆಯೊಂದರ ಸಂದಿಯಲ್ಲಿಟ್ಟಾಗ – ಎಲ್ಲಿಂದಲೋ ಆಗಮಿಸಿದ ಜಿಂಕೆಯೊಂದು ತನ್ನ ಕೋಡುಗಳನ್ನು ಮರಕ್ಕೆ ಉಜ್ಜಿದ…
-
ಜನರು ಹಂದಿಗಳಂತೆ ಮತ್ತು ನಾಯಿಗಳಂತೆ ಬದುಕುತ್ತಿದ್ದಾರೆ

ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರೊಡನೆ ಭಕ್ತರ ಸಂವಾದ, ಸ್ಥಳ : ಮುಂಬೈ, 17ನೇ ಏಪ್ರಿಲ್ 1977 ಶ್ರೀಲ ಪ್ರಭುವಾದ : ಈ ದಿನಗಳಲ್ಲಿ ಪ್ರಶಾಂತಚಿತ್ತವುಳ್ಳ ಮನುಷ್ಯರಿರುವುದು ವಿರಳ. ಎಲ್ಲರೂ ಚಪಲಚಿತ್ತವುಳ್ಳ ಹಂದಿ, ನಾಯಿಗಳಂತಾಗಿದ್ದಾರೆ. ಹಂದಿಗಳು ಮತ್ತು ನಾಯಿಗಳಂತೆ ಸದಾ ಚಂಚಲರಾಗಿರುವುದೇ ಇವರ ಕಸುಬಾಗಿದೆ. ಆದರೂ ಹಂದಿಗಳು, ನಾಯಿಗಳಂತೆ ಜೀವಿಸುತ್ತಾ ತಾವು ಬಹಳ ದೊಡ್ಡ ನಾಗರಿಕರು ಎಂದು ಹೇಳಿಕೊಳ್ಳುತ್ತಾರೆ. ವಿಶ್ಲೇಷಣಾತ್ಮಕವಾಗಿ ನೀವು ಅಧ್ಯಯನ ಮಾಡಿ ನೋಡಿದರೆ ಈ ಹಂದಿ ನಾಯಿಗಳಂತಹ ಪ್ರಾಣಿಜೀವನಕ್ಕೂ, ಆಧುನಿಕ ಮನುಷ್ಯನ ಜೀವನದ…
-
ಚಿತ್ರಕೂಟ-ರಾಮಚಂದ್ರ ಅರಣ್ಯಧಾಮ

ಶ್ರೀರಾಮಚಂದ್ರನು ರಾಜ್ಯವನ್ನು ತೊರೆದು ಹೊರನಡೆದಿದ್ದ. ಆದರೂ ಅವನು ಈ ಪವಿತ್ರ ಸ್ಥಳದಲ್ಲಿ ಸುಖದಿಂದ ಜೀವಿಸಿದ. ಶ್ರೀರಾಮಚಂದ್ರನು ತನ್ನ ಮಡದಿ ಸೀತಾದೇವಿ ಹಾಗೂ ತಮ್ಮ ಲಕ್ಷ್ಮಣನೊಡನೆ ಚಿತ್ರಕೂಟ ವನದಲ್ಲಿ ಹನ್ನೆರಡು ವರ್ಷಕಾಲ ವಾಸ ಮಾಡಿದ. ಈ ಮೂವರೂ ಚಿತ್ರಕೂಟಕ್ಕೆ ಹೇಗೆ ಬಂದರೆಂಬ ಕಥೆಯನ್ನು ರಾಮಾಯಣದಲ್ಲಿ ವಿಸ್ತಾರವಾಗಿ ವರ್ಣಿಸಲಾಗಿದೆ. ಶ್ರೀರಾಮಚಂದ್ರನು ಹದಿನಾಲ್ಕು ವರ್ಷಗಳ ಕಾಲ ರಾಜ್ಯ ಬಿಟ್ಟು ಹೊರಗಿರಬೇಕಾಯಿತು. ಅವನು ಸೀತಾ ಲಕ್ಷ್ಮಣರೊಂದಿಗೆ ವನವನ್ನು ಪ್ರವೇಶಿಸಿದಾಗ ತಾವೆಲ್ಲಾ ಎಲ್ಲಿ ವಾಸಮಾಡಬೇಕೆಂದು ಭರದ್ವಾಜ ಮುನಿಗಳನ್ನು ಕೇಳಿದನು. ತನ್ನ ಆಶ್ರಮದಿಂದ ಸುಮಾರು ಹತ್ತು…
-
ಊರ್ವಶಿಗೆ ಮನಸೋತ ಪುರೂರವ ರಾಜ!

ವೇದವ್ಯಾಸ ವಿರಚಿತ ಭಾಗವತವು 12 ಸ್ಕಂಧಗಳ, 18,000 ಶ್ಲೋಕಗಳಿಂದ ಕೂಡಿದ್ದು – ನಿಗಮ ಕಲ್ಪತರೋರ್ ಗಲಿತಂ ಫಲಂ – ವೇದವೆಂಬ ಕಲ್ಪವೃಕ್ಷದಿಂದ ಹುಟ್ಟಿದ ಮಾಗಿದ ಫಲ ಎಂದೇ ಬಣ್ಣಿಸಲಾಗಿದೆ. ಈ ಲೇಖನ ಮಾಲಿಕೆಯಲ್ಲಿ ಶುಕ ಮುಖದಿಂದ ಹರಿದ ಭಾಗವತವನ್ನು ಆಧರಿಸಿದ ಕಥೆಗಳನ್ನು ಓದುತ್ತೀರಿ. ಪ್ರಸ್ತುತ ಕಥೆಯನ್ನು ಭಾಗವತದ ಒಂಭತ್ತನೇ ಸ್ಕಂಧದ 14ನೇ ಅಧ್ಯಾಯವನ್ನು ಆಧರಿಸಿ ಖ್ಯಾತ ಸಾಹಿತಿ ‘ಚಿರಂಜೀವಿ’ ಅವರು ಊರ್ವಶಿಗೆ ಮನಸೋತ ಪುರೂರವ ರಾಜ! ಕಥೆಯನ್ನು ಭಕ್ತಿವೇದಾಂತ ದರ್ಶನದ ಓದುಗರಿಗೆ ಬರೆದುಕೊಟ್ಟಿದ್ದಾರೆ. “ಇಂದಿನ ಅಧ್ಯಾಯದಲ್ಲಿ ಶ್ರೀವ್ಯಾಸದೇವರು…
-
ಪ್ರಭುಪಾದರು ಹೇಳಿದ ಸಣ್ಣಕಥೆಗಳು

ಕೈಲಾಗದವನು “ಬೇರೆಯವರ” ಮೈ ಪರಚಿದನು ಕೆಲವರು ಸ್ವಯಂ ತಾವೇ ಏನನ್ನೂ ಮಾಡಲಾರರು. ಬೇರೆ ಯಾರೋ ಏನನ್ನಾದರೂ ಒಳಿತನ್ನು ಮಾಡಿದರೆ ಇವರು ಮತ್ಸರ ತೋರಿಸುತ್ತಾರೆ. ಇಂತಹದು ಮೂರನೆಯ ದರ್ಜೆ ಮನುಷ್ಯನ ನಡವಳಿಕೆ ಎಂದು ಪ್ರಭುಪಾದರು ಒಮ್ಮೆ ಹೇಳಿದರು. ತಮ್ಮ ಮಾತಿಗೆ ಸಾದೃಶ್ಯ ನೀಡಲು ತಾವು ತಮ್ಮ ಗುರುಗಳ ಬಾಯಿಂದ ಕೇಳಿದ್ದ ಒಂದು ಕಥೆಯನ್ನು ಪ್ರಭುಪಾದರು ಹೇಳಿದರು: ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯನ್ನುದ್ದೇಶಿಸಿ, “ಅಯ್ಯಾ, ನಮ್ಮಿಬ್ಬರಿಗೂ ಚೆನ್ನಾಗಿ ತಿಳಿದಿರುವ ಒಬ್ಬನು ಉಚ್ಚ ನ್ಯಾಯಾಲಯದಲ್ಲಿ ನ್ಯಾಯಾಧೀಶನ ಪದವಿ ಅಲಂಕರಿಸಿದ್ದಾನೆ” ಎಂದನು. ಈ…
-
ಹಾದಿ ತಪ್ಪಿಸುತ್ತಿರುವ ನಾಗರಿಕತೆ

ಶ್ರೀ ಶ್ರೀಮದ್ ಎ.ಸಿ.ಭಕ್ತಿವೇದಾಂತ ಸ್ವಾಮಿ ಪ್ರಭುಪಾದರೊಡನೆ ಭಕ್ತರ ಸಂವಾದ, ಸ್ಥಳ: ಮುಂಬೈ, 17ನೇ ಏಪ್ರಿಲ್ 1977 ಪತಿತಾತ್ಮವು ಒಂದು ದೇಹ ಬಿಟ್ಟು ಇನ್ನೊಂದು ದೇಹವನ್ನು ಪ್ರವೇಶಿಸುತ್ತದೆ ಎಂದು ನಮಗೆ ವೈದಿಕ ಸಾಹಿತ್ಯ ಕೃತಿಗಳಿಂದ ತಿಳಿದುಬರುತ್ತದೆ. ಕೆಳಗಿನ ಮಟ್ಟದ ಭೌತ ಶರೀರದಿಂದ ಉನ್ನತ ಜೀವಿಯ ಮಟ್ಟಕ್ಕೆ-ಮೀನಿನಿಂದ ಮರವೋ, ಗಿಡವೋ ಆಗಿ, ಬಳಿಕ ಕ್ರಿಮಿಯಾಗಿ ತರುವಾಯ ಹಕ್ಕಿಯಾಗಿ ಪಶುವಾಗಿ ಹೀಗೆ ಆತ್ಮವು ವಿಕಾಸ ಹೊಂದುತ್ತದೆ. ಇದೆಲ್ಲಾ ಆದ ತರುವಾಯ ಆತ್ಮಕ್ಕೆ ಮನುಷ್ಯ ದೇಹ ದೊರೆಯುತ್ತದೆ. ಮನುಷ್ಯ ದೇಹದಲ್ಲಿ ಅದು ಪೂರ್ಣ…
-
ಅಕ್ಷಯ ಪಾತ್ರೆ

ಯಥಾ ತರೋರ್ ಮೂಲ ನಿಶೇಚನೇನ ತೃಷ್ಯಂತಿ ಸ್ಕಂಧ ಭುಜೋಪಶಾಖಾ| ಪ್ರಾಣೋಪಹಾರಾಜ್ ಚ ಯತೇಂದ್ರಿಯಾಣಾಂ ತತ್ವೆವ ಸರ್ವಾಹಣಮ್ ಆಚ್ಯುತೇಜ್ಯ || ಮರದ ಬುಡಕ್ಕೆ ನೀರೆರೆದಾಗ ಇಡೀ ಮರವನ್ನು ಪೋಷಿಸಿದಂತೆ, ಉದರಕ್ಕೆ ಆಹಾರ ಉಣಿಸುವುದರಿಂದ ಎಲ್ಲ ಇಂದ್ರಿಯಗಳಿಗೂ ತೃಪ್ತಿ ನೀಡುವಂತೆ ಎಲ್ಲಾ ಸೃಷ್ಟಿಯ ಮೂಲನಾದ ಪರಮ ಪುರುಷನನ್ನು ತೃಪ್ತಿಪಡಿಸಿದರೆ ಎಲ್ಲ ಜೀವಿಗಳನ್ನೂ ತೃಪ್ತಿಪಡಿಸಬಹುದು. ಭಾಗವತ 4.31.14 ಮೇಲಿನ ತತ್ವವನ್ನು ಹೊರತರುವ ಪ್ರಸಂಗವನ್ನು ಮಹಾಭಾರತದಿಂದ ಕ್ರೋಢೀಕರಿಸಿ, ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರಾದ ಶ್ರೀಮತಿ ಪದ್ಮನಿ ಬಾಲು ಅವರು ಓದುಗರಿಗಾಗಿ ಇಲ್ಲಿ…
-
ಪರಮ ಸತ್ಯ, ಪರಮಾನಂದ ಎಲ್ಲವೂ ಅವನೇ

ಶ್ರೀಲ ಭಕ್ತಿಸಿದ್ಧಾಂತ ಸರಸ್ವತಿ ಅವರ ಉಪನ್ಯಾಸ, ಸ್ಥಳ: ವೃಂದಾವನ, ದಿನಾಂಕ: ನವೆಂಬರ್ 22, 1928 ಈ ಪರಮ ಪವಿತ್ರ ಸ್ಥಳದಲ್ಲಿ ನಿಂತುಕೊಳ್ಳುವ ಅರ್ಹತೆ ಖಂಡಿತಾ ನನಗಿಲ್ಲ. ಆದರೂ ಶ್ರೀ ಗೌರಸುಂದರರ ಆಶಿರ್ವಾದ, ನಿಮ್ಮೆಲ್ಲರ ಶುಭ ಹಾರೈಕೆಗಳ ಫಲವಾಗಿ ನಾನಿಲ್ಲಿ ನಿಂತು ಮಾತನಾಡುತ್ತಿದ್ದೇನೆ. ತನ್ಮೂಲಕ ಶ್ರೀ ಗೌರಾಂಗರಿಗೆ, ಅವರ ಶುದ್ಧ ಭಕ್ತಿರಿಗೆ ಸೇವೆ ಸಲ್ಲಿಸುತ್ತಿದ್ದೇನೆ. ಶ್ರೀ ಗೌರಾಂಗರ ಶುದ್ಧಭಕ್ತರ ದೃಷ್ಟಿ ಮಾತ್ರದಿಂದ ನಮ್ಮ ಬದುಕಿನ ಎಲ್ಲಾ ಆಸೆ, ಆಕಾಂಕ್ಷೆ, ಗುರಿ, ಭರವಸೆ, ಧ್ಯೇಯೋದ್ದೇಶಗಳು ಈಡೇರುತ್ತವೆ. ಅಂಥ ಶುದ್ಧ ಭಕ್ತರಿಗೆ…
-
ಭಗವಂತನ ರೂಪ: ವಾಸ್ತವ ಅಥವಾ ಭ್ರಮೆ?

ಭಗವಂತನು ಆಕಾರನೋ ನಿರಾಕಾರನೋ ಎನ್ನುವುದರ ಬಗ್ಗೆ ಜನಸಾಮಾನ್ಯರಲ್ಲಿ ಕುತೂಹಲ ಮೂಡುವುದು ಸಹಜ. ಕೃಷ್ಣನ ಚಿತ್ರವನ್ನು ನೋಡಿದಾಗ ಇಂತಹ ಪ್ರಶ್ನೆ ಸಹಜವಾಗಿ ಏಳುತ್ತದೆ. ಭೂಮಿಯ ಮೇಲಿರುವ ಸಕಲ ಜೀವಿಗಳಿಗೂ ತಂದೆ ಎನಿಸಿರುವ ಭಗವಂತನ ಆಕಾರದ ಬಗ್ಗೆ ನಮಗೆ ಪಾಶ್ಚಾತ್ಯ ತತ್ವಶಾಸ್ತ್ರದಿಂದ ಸಿಗುವ ಮಾಹಿತಿ ಅತ್ಯಲ್ಪವಾದದ್ದು. ದೇವರು ಆಕಾರ ಸ್ವರೂಪ ಉಳ್ಳವನು ಎಂದು ಪಾಶ್ಚಾತ್ಯ ತತ್ವಶಾಸ್ತ್ರ ಹೇಳುತ್ತದೆಯಾದರೂ ಅದರಿಂದ ನಮಗೆ ಸ್ಪಷ್ಟ ಮಾಹಿತಿ ಲಭ್ಯವಾಗುವುದಿಲ್ಲ. ಪರಮ ಪದದ ಬಗ್ಗೆ ಚಿಂತಿಸಿದಷ್ಟೂ, ಈ ಕಾರಣಕ್ಕಾಗಿಯೇ ಭಗವಂತ ನಿರಾಕಾರ ಸ್ವರೂಪನೂ, ಶೂನ್ಯನೂ ಎಂಬ…
