-
ಶ್ರೀ ಪದ್ಮನಾಭ ತೀರ್ಥ

ಶ್ರೀ ಮಧ್ವಾಚಾರ್ಯರ ಶಿಷ್ಯ ಪರಂಪರೆಯಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುವ ಹೆಸರು ಶ್ರೀ ಪದ್ಮನಾಭ ತೀರ್ಥರು. ಪದ್ಮನಾಭ ತೀರ್ಥರ ಪಾಂಡಿತ್ಯ, ಕೃಷ್ಣಭಕ್ತಿ, ಹಿರಿತನವನ್ನು ಕಂಡು ಸ್ವತ ಮಧ್ವಾಚಾರ್ಯರೇ ಅವರನ್ನು ತಮ್ಮ ಉತ್ತರಾಧಿಕಾರಿಯಾಗಿ ನೇಮಿಸಿದರು. ಮಧ್ವಾಚಾರ್ಯರ ಕೃತಿಗಳ ಮೇಲೆ ವ್ಯಾಖ್ಯಾನ ಬರೆದ ಮೊದಲ ಆಚಾರ್ಯರು ಪದ್ಮನಾಭ ತೀರ್ಥರು. ಪದ್ಮನಾಭ ತೀರ್ಥರು ಜನಿಸಿದ್ದು 1199ರಲ್ಲಿ, ಆಂಧ್ರಪ್ರದೇಶದ ಗೋದಾವರಿ ತೀರದ ರಾಜಮಹೇಂಡ್ರಿಯಲ್ಲಿ. ಇವರ ಮೂಲ ನಾಮಧೇಯ ಶೋಭನ ಭಟ್ಟ. ತಂದೆ ಕೇಶವ ಭಟ್ಟ, ತಾಯಿ ಗಿರಿಜಾಂಬಾ. ಈ ದೈವ ಭಕ್ತ ದಂಪತಿಗೆ ವಿವಾಹವಾಗಿ ಬಹಳ…
-
ಬಾಲ ನಿಮಾಯ್

ಯುಗಾವತಾರಿ ಶ್ರೀ ಚೈತನ್ಯ ಮಹಾಪ್ರಭು -ಡಾ.ಬಿ.ಆರ್.ಸುಹಾಸ್ ಕೃಷ್ಣ ವರ್ಣ೦ ತ್ವಿಷಾಕೃಷ್ಣಂ ಸಂಗೋಪಾಂಗಾಸ್ತ್ರ ಪಾರ್ಶದಂ | ಯಜ್ಞೈ: ಸಂಕೀರ್ತನ ಪ್ರಾಯೈರ್ ಯಜಂತಿ ಹಿ ಸುಮೇಧಸಃ || (ಭಾಗವತ 11.5,32) ಮಹಾನ್ ಅವತಾರವು ಕಲಿಯುಗದಲ್ಲಿ ಸಂಕೀರ್ತನ ಯಜ್ಞವನ್ನು ಪ್ರಚಾರ ಮಾಡುವುದು ಎಂಬ ಭವಿಷ್ಯವನ್ನು ಭಾಗವತವು ನುಡಿದಿತ್ತು. ಅದರ ಅನುಸಾರವಾಗಿ ಮತ್ತು ದುಷ್ಟರ ಶಿಕ್ಷೆ ಮತ್ತು ಶಿಷ್ಟರ ರಕ್ಷಣೆಗಾಗಿ ಶ್ರೀ ಚೈತನ್ಯ ಮಹಾಪ್ರಭುಗಳು ಅವತರಿಸಿದರು. ಅವರು ಮಾಡಿದ ದುಷ್ಟ ಸಂಹಾರ ವಿಭಿನ್ನ ರೀತಿಯದ್ದು. ಕಲಿಯುಗದಲ್ಲಿ ಪ್ರತಿಯೊಬ್ಬನಲ್ಲೂ ದುಷ್ಟ ಅಂಶಗಳಿವೆ. ಅವುಗಳನ್ನು ಸಂಕೀರ್ತನ…
-
ವ್ರಜಮಂಡಲ ಪರಿಕ್ರಮ

-ಕೃಷ್ಣದಾಸ ಧರ್ಮ ಸಂಸ್ಥಾಪನೆಗಾಗಿ ಕಾಲ ಕಾಲಕ್ಕೆ ಧರೆಗವತರಿಸುವ ದೇವೋತ್ತಮ ಪರಮ ಪುರುಷ ತಾನೊಬ್ಬನೇ ಭೂಮಿಗೆ ಬರುವುದಿಲ್ಲ. ತನ್ನ ಆತ್ಮೀಯ ಒಡನಾಡಿಗಳು, ಸ್ನೇಹಿತರು, ಸೇವಕರ ಜೊತೆಗೇ ಅವತರಿಸುತ್ತಾನೆ. ಅಷ್ಟೇ ಅಲ್ಲ, ಭೂಮಿ ಮೇಲೆ ತನ್ನದೇ ಆದ ಪರಿಸರವನ್ನು ಸೃಷ್ಟಿಸಿಕೊಳ್ಳುತ್ತಾನೆ. ಅದು ಆಧ್ಯಾತ್ಮಿಕ ಲೋಕದಲ್ಲಿರುವ ಅವನ ಮೂಲ ನಿವಾಸಕ್ಕಿಂತ ಯಾವ ರೀತಿಯಲ್ಲೂ ಭಿನ್ನವಾಗಿರುವುದಿಲ್ಲ. ಹೀಗೆ ದೇವೋತ್ತಮ ಪರಮ ಪುರುಷನ ಈ ಐಹಿಕ ಲೋಕದಲ್ಲಿ ಸೃಷ್ಟಿಸುವ ಆಧ್ಯಾತ್ಮಿಕ ಲೋಕದ ಪ್ರತಿರೂಪವನ್ನು “ಧಾಮ” ಎನ್ನುತ್ತೇವೆ. 5000 ವರ್ಷಗಳ ಹಿಂದೆ ಕೃಷ್ಣನಾಗಿ ಹುಟ್ಟಿ ಈ…
-
ಗಜೇಂದ್ರ ಮೋಕ್ಷ

-ಡಾ.ಬಿ.ಜಿ.ಹರೀಶ್ ವೇದವ್ಯಾಸ ವಿರಚಿತ ಭಾಗವತವು 12 ಸಂಪುಟಗಳ, 18000 ಶ್ಲೋಕಗಳಿಂದ ಕೂಡಿದ್ದು-ನಿಗಮ ಕಲ್ಪ ತರೋರ್ ಗಲಿತಂ ಫಲಂ – ವೇದವೆಂಬ ಕಲ್ಪವೃಕ್ಷದಿಂದ ಹುಟ್ಟಿದ ಮಾಗಿದ ಫಲ ಎಂದೇ ಬಣ್ಣಿಸಲಾಗಿದೆ. ಈ ಲೇಖನ ಮಾಲಿಕೆಯಲ್ಲಿ ಶುಕ ಮುಖದಿಂದ ಹರಿದ ಭಾಗವತವನ್ನು ಆಧರಿಸಿದ ಕಥೆಗಳನ್ನು ಓದುತ್ತೀರಿ. ಪ್ರಸ್ತುತ ಕಥೆಯನ್ನು ಭಾಗವತದ ಎಂಟನೆ ಸ್ಕಂದವನ್ನು ಆಧರಿಸಿ ಡಾ.ಬಿ.ಜಿ.ಹರೀಶ್ ರವರ ಭಕ್ತಿವೇದಾಂತ ದರ್ಶನದ ಓದುಗರಿಗೆ ಬರೆದುಕೊಟ್ಟಿದ್ದಾರೆ. ‘ರಾಜ ಇಂದಿನಿಂದ ಏಳು ದಿನಗಳಲ್ಲಿ ಸಾವುಂಟಾಗಲಿ’ ಎಂದು ಬ್ರಾಹ್ಮಣ ಪುತ್ರನು ಪರೀಕ್ಷಿತನಿಗೆ ಏಳು ದಿನಗಳಲ್ಲಿ ಸಾವು…
-
ಶ್ರೀ ಮಧ್ವಾಚಾರ್ಯ

ಗೌಡೀಯ ವೈಷ್ಣವ ಪರಂಪರೆಯಲ್ಲಿ ಕೃಷ್ಣಪ್ರಜ್ಞೆಯನ್ನು ಜಗತ್ತಿನಾದ್ಯಂತ ಪಸರಿಸಲು, ಕೃಷ್ಣ ಪ್ರಜ್ಞೆ ಹಾಗೂ ಭಕ್ತಿ ಆಂದೋಲನದ ಮಾರ್ಗದರ್ಶನ ಮಾಡಿದ ಆಚಾರ್ಯರ ಪರಂಪರೆಯನ್ನು ಪರಿಚಯಿಸುವ ಉದ್ದೇಶ ಈ ಅಂಕಣದ್ದು. -ಸ್ತೋಕ ಕೃಷ್ಣದಾಸ ಶ್ರೀ ಕೃಷ್ಣಭಕ್ತರ ಪರಮ ಪವಿತ್ರ ಕ್ಷೇತ್ರ ಉಡುಪಿ. ಉಡುಪಿ ಎಂದ ತಕ್ಷಣ ನೆನಪಿಗೆ ಬರುವುದು ಸಮುದ್ರ, ಶ್ರೀ ಕೃಷ್ಣನೆಂಬ ಕರುಣಾ ಸಾಗರ! ಇಲ್ಲಿಯ ಶ್ರೀಕೃಷ್ಣ ದೇಗುಲ, ಕನಕನ ಕಿಂಡಿ, ರಥ ಬೀದಿ, ಅಷ್ಟ ಮಠಗಳು ಎಲ್ಲವನ್ನೂ ನೋಡುವುದೇ ಕಣ್ಣಿಗೆ ಹಬ್ಬ. ಇವೆಲ್ಲದರ ಹಿಂದಿನ ಪ್ರೇರಕ ಶಕ್ತಿ ಶ್ರೀ…
-
ಮನೆಯಲ್ಲಿ ವಿಗ್ರಹಾರಾಧನೆ

ವಿಗ್ರಹಾರಾಧನೆ – ನಮ್ಮ ಕರ್ಮಗಳನ್ನು ಕೃಷ್ಣನಿಗೆ ಅರ್ಪಿಸುವ, ಕರ್ಮ ಯೋಗ ಆಚರಿಸುವ ಸರಳ ವಿಧಾನ. –ಗೌರಹರಿ ದಾಸ ನೀವು ಕೃಷ್ಣನ ಫೋಟೋವನ್ನು ಪೂಜಿಸುತ್ತೀರಾದರೆ ಅದಕ್ಕೆ ಗೋಡೆಯಲ್ಲಿರುವ ಗೂಡು ಅಥವಾ ಕೋಣೆಯ ಮೂಲೆಯಲ್ಲಿರುವ ಮೇಜು ಅಥವಾ ನಿಮ್ಮ ಪುಸ್ತಕಗಳನ್ನಿಡುವ ಷೆಲ್ಫ್ನ ಮೇಲ್ಭಾಗವಾದರೂ ಆದೀತು. ನಿಮ್ಮ ಮನೆಯಲ್ಲಿ ಅತಿಥಿಯನ್ನು ಒಂದು ಮೂಲೆಯಲ್ಲಿ ಕೂರಿಸಿ ನೀವು ಅವರನ್ನು ನಿರ್ಲಕ್ಷಿಸುವಂತಿಲ್ಲ. ಅತಿಥಿ “ದೈವ”ದ ಬಳಿ ಕುಳಿತುಕೊಳ್ಳಲು ನಿಮಗೂ ಒಂದು ಸ್ಥಳ ಮೀಸಲಿಡಬೇಕು. ನಿಮ್ಮ ಸ್ಥಳ ದೇವರಿಗೆ ಎದುರಾಗಿರಬೇಕು. ಆತನ ಮುಖ ನೋಡುತ್ತಾ ಆನಂದಿಸಲು…
-
ಪುನರ್ಜನ್ಮ ಸತ್ಯ ಅಸತ್ಯ

-ಕೃಷ್ಣದಾಸ ‘ಪುನರ್ಜನ್ಮ’ ಎಂಬುದು ಬಹಳ ಚರ್ಚಿಸಲ್ಪಟ್ಟ ವಿಷಯ. ಇದರ ಪರಾಪರ ತತ್ತ್ವವೆತ್ತರು, ವಿಜ್ಞಾನಿಗಳು ವಾದ ಪ್ರತಿವಾದಗಳನ್ನು ಮಂಡಿಸಿದ್ದಾರೆ. ಜನಸಾಮಾನ್ಯರು ಪುನರ್ಜನ್ಮದ ಸತ್ಯವನ್ನು ಮರೆತು ಈ ದೇಹ ಮುಗಿದೊಡನೆ ಎಲ್ಲನಾಶವಾಗುತ್ತದೆ ಎಂಬ ತತ್ತ್ವವನ್ನೆ ನಂಬಿದ್ದಾರೆ. ನಾವು ರಾಸಾಯನಿಕ ಕ್ರಿಯೆಯಲ್ಲದೆ ಬೇರೇನಿಲ್ಲ ಮತ್ತು ಪ್ರಜ್ಞೆ ಎಂಬುದು ರಾಸಾಯನಿಕ ಕ್ರಿಯೆಯ ಉಪ ಉತ್ಪತ್ತಿಯಷ್ಟೆ ಎಂದು ವಿಜ್ಞಾನಿಗಳು ಪ್ರತಿಪಾದಿಸಿದ್ದಾರೆ. ಇವುಗಳಿಗೆ ಸೂಕ್ತ ಉತ್ತರಗಳನ್ನು ನೀಡಲು ಪ್ರಶ್ನೋತ್ತರದ ಮೂಲಕ ಪುನರ್ಜನ್ಮದ ಬಗ್ಗೆ ಒಂದು ತರ್ಕಬದ್ಧ ಚರ್ಚೆಯನ್ನು ಇಲ್ಲಿ ನೀಡಲಾಗಿದೆ. ರವಿಶಂಕರ್ ಜನಿಸಿದ್ದು 1951 ರಲ್ಲಿ,…
-
ನಾರದಮುನಿ

ಗೌಡೀಯ ವೈಷ್ಣವ ಪರಂಪರೆಯಲ್ಲಿ ಕೃಷ್ಣಪ್ರಜ್ಞೆಯನ್ನು ಜಗತ್ತಿನಾದ್ಯಂತ ಪಸರಿಸಲು, ಕೃಷ್ಣ ಪ್ರಜ್ಞೆ ಹಾಗೂ ಭಕ್ತಿ ಆಂದೋಲನದ ಮಾರ್ಗದರ್ಶನ ಮಾಡಿದ ಹಿರಿಯರ ಗುರುಪರಂಪರೆಯನ್ನು ಪರಿಚಯಿಸುವ ಉದ್ದೇಶ ಈ ಅಂಕಣದ್ದು. – ದಶಂ “ನೀನ್ಯಾಕೋ ನಿನ್ನ ಹಂಗ್ಯಾಕೋ, ನಿನ್ನ ನಾಮದ ಬಲವೊಂದಿದ್ದರೆ ಸಾಕೋ” ಎಂದು ಹಾಡಿ ಭಗವಂತನ ನಾಮಸ್ಮರಣೆಯ ಬಲವನ್ನು ದಾಸರು ಸಾರಿ ಹೇಳಿದ್ದಾರೆ. ಭಗವಂತನ ನಾಮೋಚ್ಛಾರದ ಪ್ರಭಾವವನ್ನು ಅದರಿಂದಾಗುವ ಆನಂದವನ್ನು ಅನವರತ ಅನುಭವಿಸಿ, ಜಗತ್ತಿನ ಎಲ್ಲೆಡೆ ಪ್ರಸಾರ ಮಾಡುವ ಮಹಾ ಮಹಿಮರೇ ಶ್ರೀ ನಾರದ ಮಹಾಮುನಿಗಳು, ನಾರದರನ್ನು ಗುರುಪರಂಪರೆಯಲ್ಲಿಟ್ಟು ಎಲ್ಲ…
-
ಸಮಾಜ ವ್ಯವಸ್ಥೆಯಲ್ಲಿ ಗೋವಿನ ಪ್ರಾಮುಖ್ಯತೆ

-ಗೌರಹರಿ ದಾಸ ಎತ್ತು ಮತ್ತು ಹಸುಗಳು ನಿಮ್ಮ ತಂದೆ- ತಾಯಿಗಳಿದ್ದಂತೆ. ಅದು ಹೇಗೆ ಅವುಗಳನ್ನು ಕೊ೦ದು ತಿನ್ನುತ್ತೀರಿ? ಇದೆಂಥ ಧಾರ್ಮಿಕ ತತ್ತ್ವ? ಯಾವ ಧೈರ್ಯದ ಮೇಲೆ ಇಂಥ ಪಾಪ ಕೃತ್ಯ ಎಸಗುತ್ತೀರಿ? ಇದು ಚೈತನ್ಯ ಮಹಾಪ್ರಭುಗಳು ಮುಸ್ಲಿಂ ಖಾಜಿಯೊಬ್ಬನನ್ನು ಕುರಿತು ಕೇಳಿದ ಪ್ರಶ್ನೆ. ಈಗ ಮತ್ತೆ ಈ ಪ್ರಶ್ನೆ ಕೇಳಬೇಕಾದ ಕಾಲ ಬಂದಿದೆ! ನಮಗೆ ನಿತ್ಯ ಕುಡಿಯಲು ಹಸುವಿನ ಹಾಲು ಬೇಕು. ಉಳುಮೆ ಮಾಡಲು, ಗಾಡಿ ಎಳೆಯಲು ಎತ್ತುಗಳು ಬೇಕು. ನಮಗೆ ತಿನ್ನಲು ಕಾಳು ನೀಡುವವನೇ ತ೦ದೆ;…
-
ಬ್ರಹ್ಮ

-ಸುನಿಧಿ ಗೌಡೀಯ ವೈಷ್ಣವ ಪರಂಪರೆಯಲ್ಲಿ ಕೃಷ್ಣಪ್ರಜ್ಞೆಯನ್ನು ಜಗತ್ತಿನಾದ್ಯಂತ ಪಸರಿಸಲು, ಕೃಷ್ಣ ಪ್ರಜ್ಞೆ ಹಾಗೂ ಭಕ್ತಿ ಆಂದೋಲನದ ಮಾರ್ಗದರ್ಶನ ಮಾಡಿದ ಹಿರಿಯರ ಗುರುಪರಂಪರೆಯನ್ನು ಪರಿಚಯಿಸುವ ಉದ್ದೇಶ ಈ ಅಂಕಣದ್ದು. ಈ ಜಗದ ಸರ್ವೋಚ್ಚ ಆಡಳಿತಗಾರ. ಜಗತ್ತಿನ ಅತ್ಯಂತ ಶ್ರೇಷ್ಠ ಜೀವಿ. ಬ್ರಹ್ಮ ಎಂಬ ಪದದ ಅರ್ಥವೇ ಅದು ಎಲ್ಲವೂ ಯಾರಿಂದ ಸೃಷ್ಟಿಯಾಗಿದೆಯೋ ಅವನೇ ಬ್ರಹ್ಮ. ಹಾಗಾದರೆ ಬ್ರಹ್ಮನ ಸೃಷ್ಟಿ ಹೇಗಾಯಿತು? ಈ ಜಗತ್ತಿನ ಪ್ರಥಮ ಪುರುಷ ಕರ್ಣೋದಕಶಾಯಿ ವಿಷ್ಣು. ಆತನ ಚರ್ಮ ರೋಮಗಳಿಂದ ಅಸಂಖ್ಯಾತ ಬ್ರಹ್ಮಾಂಡಗಳು ಸೃಷ್ಟಿಯಾಗಿವೆ. ಪ್ರಥಮ…
